- Tuesday 10 Dec 2019
ನುಸುಳುಕೋರರ ದುಃಸ್ವಪ್ನ ಲೇಸರ್ ಫೆನ್ಸ್
Team Udayavani, Sep 18, 2018, 7:31 AM IST
ಭಾರತ ಮತ್ತು ಪಾಕಿಸ್ಥಾನದ ಗಡಿಯಲ್ಲಿ ಅಕ್ರಮ ಒಳನುಸುಳುವಿಕೆಗಳನ್ನು ತಡೆಯಲು ನಿರ್ಮಿಸಲಾಗುತ್ತಿರುವ ಕಾಂಪ್ರಹೆನ್ಸಿವ್ ಇಂಟಗ್ರೇಟೆಡ್ ಬಾರ್ಡರ್ ಮ್ಯಾನೇಜ್ಮೆಂಟ್ ಸಿಸ್ಟಂ (ಸಿಐಬಿಎಂಎಸ್) ಅನ್ನು ಪ್ರಾಯೋಗಿಕವಾಗಿ ಜಮ್ಮುವಿನಲ್ಲಿ ಸೋಮವಾರ ಆರಂಭಿಸಲಾಯಿತು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇದರ ಉದ್ಘಾಟನೆ ನೆರವೇರಿಸಿದರು. ಭಾರತ-ಪಾಕಿಸ್ಥಾನ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿನ (ಐಬಿ) ಸುಮಾರು 2,016 ಕಿ.ಮೀ. ದೂರದವರೆಗೆ ಹದ್ದಿನ ಕಣ್ಣಿಡಲು ಇದರಿಂದ ನೆರವಾಗಲಿದೆ.
ವೈಶಿಷ್ಟ್ಯವೇನು?
ಇದೊಂದು ಭೌತಿಕವಲ್ಲದ, ಲೇಸರ್ ಬೇಲಿ. ನುಸುಳು ಕೋರರ ಅತಿ ಸೂಕ್ಷ್ಮ ಪ್ರಯತ್ನಗಳನ್ನೂ ಪತ್ತೆ ಹಚ್ಚುವ ಸಾಮರ್ಥ್ಯವಿರುವುದರಿಂದ ಗಡಿ ಮತ್ತಷ್ಟು ಸುರಕ್ಷಿತ.
ಕಾರ್ಯವೈಖರಿ ಹೇಗೆ?
ಇದರಲ್ಲಿ ಉಷ್ಣಾಂಶ ಆಧಾರಿತ ಇಮೇಜಿಂಗ್ ವ್ಯವಸ್ಥೆ, ಇನ್ಫ್ರಾ ರೆಡ್ ಮತ್ತು ಲೇಸರ್ ಆಧಾರಿತ ಸೈರನ್ ವ್ಯವಸ್ಥೆಗಳಿವೆ. ಇದರಿಂದ ದೂರದಿಂದಲೇ ನುಸುಳು ಕೋರರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಜತೆಗೆ, ಏರೋಸ್ಟಾಟ್ಸ್, ಗ್ರೌಂಡ್ ಸೆನ್ಸರ್ಗಳಿದ್ದು ಇದರಿಂದ ಸೂಕ್ಷ್ಮಾತಿಸೂಕ್ಷ್ಮ ಒಳ ನುಸುಳುವಿಕೆಯನ್ನೂ ಗ್ರಹಿಸ ಬಹುದು.ಯಾವುದೇ ಅನುಮಾನಾಸ್ಪದ ನಡೆಗಳನ್ನು ಕ್ಷಣಾರ್ಧದಲ್ಲಿ ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ.
ಪ್ರಯೋಜನಗಳೇನು?
ಗಡಿಯಲ್ಲಿ ಮಾನವ ಆಧಾರಿತ ಗಸ್ತು ಅವಶ್ಯಕತೆ ಗಣನೀಯ ಇಳಿಕೆ.
ಮೋಸಗೊಳಿಸಲಾಗದ ತಂತ್ರಜ್ಞಾನದಿಂದ ನುಸುಳುಕೋರರ ಕಳ್ಳಾಟಗಳಿಗೆ ಇತಿಶ್ರೀ.
ಗಡಿ ಭದ್ರತೆ ಹಿಂದೆಂದಿಗಿಂತಲೂ ಬಲಿಷ್ಠ ಹಾಗೂ ಪರಿಣಾಮಕಾರಿ.
ಗಡಿಗಳಲ್ಲಿ ಸೈನಿಕರ ಪ್ರಾಣಹಾನಿಗೆ ತಡೆ
ಇಸ್ರೇಲ್ಗೆ ಭೇಟಿ ನೀಡಿದ್ದಾಗ ಇಲ್ಲಿ ಇಂಥದ್ದೊಂದು ವ್ಯವಸ್ಥೆ ಇರುವುದನ್ನು ನೋಡಿದ್ದೆ. ಅಂಥದ್ದೇ ವ್ಯವಸ್ಥೆಯನ್ನು ಭಾರತ-ಪಾಕ್ ಗಡಿಯಲ್ಲಿ ಅಳವಡಿಸಬೇಕೆಂದು ಇಚ್ಛಿಸಿದ್ದೆ. ಅದು ಈಗ ನೆರವೇರುತ್ತಿದೆ.
ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ
ಭಾರತ, ಪಾಕ್ ಗಡಿಯಲ್ಲಿ ತಲೆ ಎತ್ತಲಿರುವ ವರ್ಚುವಲ್ ಬೇಲಿ
2,016 ಕಿ.ಮೀ ಗಡಿಗೆ ಸದ್ಯದಲ್ಲೇ ಹೊಸ ವ್ಯವಸ್ಥೆ ವಿಸ್ತರಣೆ
ಈ ವಿಭಾಗದಿಂದ ಇನ್ನಷ್ಟು
-
ಮುಂಬೈ: ಬಿಜೆಪಿ ಕಾರ್ಪೋರೇಟರ್ ಹಾಗೂ ಕುಟುಂಬದ ಸದಸ್ಯರನ್ನು ಮನೆಯೊಳಗೆ ಮೂವರು ಶಸ್ತ್ರಧಾರಿಗಳು ಗುಂಡಿನ ದಾಳಿ ನಡೆಸಿದ ಹತ್ಯೆಗೈದಿರುವ ಘಟನೆ ಭಾನುವಾರ ಮಹಾರಾಷ್ಟ್ರದ...
-
ಸ್ಯಾನ್ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ಬುಕ್ ಜಗತ್ತಿನಾದ್ಯಂತ ಸಾವಿರಾರು ಕೋಟಿ ಬಳಕೆದಾರರನ್ನು ಹೊಂದಿದೆ. ಇದೀಗ ಬದಲಾಗುತ್ತಿರುವ ಜೀವನಶೈಲಿಗೆ...
-
ಸಾಗರದ ಕಥೆಯೊಂದಿದೆ... ಒಮ್ಮೆ ಒಂದು ಮಗು ಬಂದು ಸಾಗರ ತೀರದಲ್ಲಿ ನಿಂತು ನೋಡುತ್ತಿತ್ತಂತೆ. ಎಷ್ಟು ಹೊತ್ತಾದರೂ ನೀರಿಗೆ ಇಳಿಯಲು ಏಕೋ ಹಿಂಜರಿಕೆ. ನೀರಿಗೆ ಇಳಿಯಲೇ...
-
ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಬುದ್ಧಿವಂತಿಕೆ. ಈ ಮಾತಿಗೆ ಅರ್ಥವಿದೆ. ಸಾಮಾನ್ಯವಾಗಿ ಎರಡು ರೀತಿಯ ಜನರಿರುತ್ತಾರೆ. ಒಬ್ಬರು ಸರಿಯಾದ ಸಮಯಕ್ಕೆ ಕಾಯುತ್ತಲೇ...
-
ಇರುವೆಗಳ ಸಭೆ ನಡೆಯುತ್ತಿತ್ತು. ಕಪ್ಪಿರುವೆ, ಕಟ್ಟಿರುವೆ, ದೇವರ ಇರುವೆ, ಕೆಂಪಿರುವೆ ಎಲ್ಲವೂ ಸೇರಿದ್ದವು. ಒಟ್ಟೂ ಇರುವೆ ಸಮುದಾಯದ ವಾರ್ಷಿಕ ಸಭೆ. ಇರುವೆಯ ನಾಯಕ...
ಹೊಸ ಸೇರ್ಪಡೆ
-
ಸೌತ್ ಏಶ್ಯನ್ ಗೇಮ್ಸ್ : ಭಾರತ 159 ಚಿನ್ನ, 91 ಬೆಳ್ಳಿ, 44 ಕಂಚು ಕಾಠ್ಮಂಡು (ನೇಪಾಲ), ಡಿ. 9: ಸೌತ್ ಏಶ್ಯನ್ ಗೇಮ್ಸ್ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ಅವಳಿ ಚಿನ್ನವನ್ನು...
-
ಈ ಚುನಾವಣಾ ಫಲಿತಾಂಶ ಹಲವು ದಾಖಲೆಗಳನ್ನು ಬರೆದಿದೆ. ಮತ್ತೆ ಮೈತ್ರಿ ಸರಕಾರ ರಚನೆಯಾಗುವ ಅಪಾಯವನ್ನು ಮನಗಂಡೇ ಮತದಾರ ಎಚ್ಚರಿಕೆಯಿಂದ ಮತ ಚಲಾಯಿಸಿದ ಹಾಗಿದೆ....
-
ಮಂಗಳೂರು: ಕರಾವಳಿಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ ಗೋಡಂಬಿ ಉದ್ಯಮ ಪ್ರಸ್ತುತ ಸಮಸ್ಯೆಗಳ ಸುಳಿಯಲ್ಲಿದೆ. ಈ ನಡುವೆ ಆಮದಿತ ಕಚ್ಚಾ ಗೇರುಬೀಜಕ್ಕೆ...
-
ಹೆಮ್ಮಾಡಿ: ರಾ.ಹೆ. 66ರಿಂದ ಕಟ್ಟು ಮೂಲಕವಾಗಿ ಹಕ್ಲಾಡಿ, ಬಂಟ್ವಾಡಿ ಸಹಿತ ಹತ್ತಾರು ಊರುಗಳಿಗೆ ಸಂಪರ್ಕ ಕಲ್ಪಿಸುವ ಹೆಮ್ಮಾಡಿ - ಕಟ್ಟು ಸಂಪರ್ಕ ರಸ್ತೆ ಹದಗೆಟ್ಟು...
-
ನಡೆದದ್ದು ಉಪ ಚುನಾವಣೆಯಾಗಿದ್ದರೂ ಇದಕ್ಕೆ ರಾಷ್ಟ್ರ ಮಟ್ಟದ ಮಹತ್ವವಿತ್ತು. ಯಾವುದೇ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗೆ ಕಡಿಮೆಯಿಲ್ಲದಂತೆ ತುರುಸಿನಿಂದ...