ಕಲಾಮಂದಿರದಲ್ಲಿ ಪ್ರೇಕ್ಷಕರ ಕೊರತೆ ನಡುವೆಯೂ ಹರಿದ ಸಂಗೀತ ಸುಧೆ


Team Udayavani, Oct 13, 2021, 4:28 PM IST

musical program mysore

ಮೈಸೂರು: ನಗರದ ಕಲಾ ಮಂದಿರ ವೇದಿಕೆಯಲ್ಲಿ ನಡೆಯುತ್ತಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ಸುಧೆಗೆ ಪ್ರೇಕ್ಷಕರು ಮನಸೋತರು. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ದಸರಾ ಮಹೋತ್ಸವ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಮಂದಿರದಲ್ಲಿ ಆಯೋಜಿಸಿರುವ ಸಾಂಸ್ಕೃತಿ ಕಾರ್ಯಕ್ರಮದ ಕೊನೆ ದಿನ ವಿವಿಧ ಭಾಗದ ಕಲಾಸಂಸ್ಕೃತಿ ಪ್ರದರ್ಶನಗೊಂಡವು.

ಪ್ರೇಕ್ಷಕರ ಕೊರತೆಯ ನಡುವೆ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಮೊದಲಿಗೆ ಮೈಸೂರು ಸೌಮ್ಯ ಮತ್ತು ತಂಡದಿಂದ ಮಹಿಷ ಮರ್ಧಿನಿ ನೃತ್ಯರೂಪಕ ಪ್ರದರ್ಶಿಸುವ ಮೂಲಕ ನಾಡ ದೇವತೆ ಚಾಮುಂಡಿಶ್ವರಿ ಸ್ಮರಿಸುವ ಮೂಲಕ ಚಾಲನೆ ದೊರೆಯಿತು. ಬಳಿಕ ಶಿರಸಿ ನಿರ್ಮಲಾ ಹೆಗಡೆ ಯಕ್ಷಗೆಜ್ಜೆ ತಂಡದಿಂದ ಕಂಸವಧೆ ಯಕ್ಷಗಾನ ಕಥಾ ಪ್ರಸಂಗ ಬೆರಳೆಣಿಕೆಯಷ್ಟು ನೆರದಿದ್ದ ಪ್ರೇಕ್ಷಕರಲ್ಲಿ ಹುರುಪು ತುಂಬಿತು.

ಗಜಾನನ ಹೆಗಡೆ ಭಾಗವತಿಕೆಯಲ್ಲಿ ಕಂಸವಧೆ ಯಶಸ್ವಿಯಾಗಿ ನಡೆಯಿತು. ಮಹಿಳೆ ಕಲಾವಿದರು ಸಹ ಪುರುಷ ಪಾತ್ರಗಳಲ್ಲಿ ಕಾಣಿಸಿಕೊಂಡು ಅಚ್ಚುಕಟ್ಟು ನಿರ್ವಹಿಸಿದರು. ಬೆಂಗಳೂರು ನಿಶ್ಚಿತ ಪ್ರಸಾದ್‌ ಮತ್ತು ತಂಡ ಹಾಡಿದ ಜಗದೋದ್ಧಾರನ ಆಡಿಸಿದಳೇ ಶೋಧಾ.. ದೇವರ ನಾಮ ಪ್ರೇಕ್ಷಕರ ಮನಸೊರೆಗೊಂಡಿತು. ನಂಜನಗೂಡಿನ ಹೊಸಹಳ್ಳಿ ಗಂಗಾಧರ್‌ ಮತ್ತು ತಂಡದಿಂದ ಸಂತ ಶಿಶುನಾಳ ಷರೀಫ‌ರ ತರವಲ್ಲ ತೆಗಿ ನಿನ್ನ ತಂಬೂರಿ ಸ್ವರ, ತಂಬೂರಿ ಮೀಟಿದವ ಹಾಡುಗಳ ಹೇಳುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಳೆ ತಂದರು.

ಇದನ್ನೂ ಓದಿ;– ಸಾಕಷ್ಟು ಅಧಿಕಾರಿಗಳಲ್ಲಿ ಆರ್‌ಎಸ್‌ಎಸ್ ಮೈಂಡಸೆಟ್ ಇದೆ : ಶೆಟ್ಟರ್

ಮೈಸೂರು ಜಿಲ್ಲೆಯ ಸೊಬಾನೆ ಕಲಾವಿದರು, ಮದುವೆ, ಮೈನೆರೆವ ಶಾಸ್ತ್ರ ಸೇರಿದಂತೆ ಹಲವು ಜನಪದ ಹಾಡುಗಳನ್ನು ಹಾಡುವ ಮೂಲಕ ಬಾಲ್ಯವನ್ನು ನೆನಪಿಸಿದರು. ಮೈಸೂರು ಗಾನಗಂಧರ್ವ ಕಲಾ ಬಳಗ ಟ್ರಸ್ಟ್‌ನಿಂದ ಸುಗಮ ಸಂಗೀತ, ಹುಬ್ಬಳಿ ಸುಜಯ್‌ ಶಾನ್‌ ಭಾಗ್‌ ಮತ್ತು ತಂಡದಿಂದ ನೃತ್ಯರೂಪಕ ಪ್ರದರ್ಶಿಸಿದರೆ, ಮೈಸೂರು ನಗರ ಮತ್ತು ಜಿÇÉಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಂಘದಿಂದ ವೈವಿಧ್ಯಮಯಗೀತೆ ಹಾಡಿದರು.

ಜಿಲ್ಲಾ ಜಾನಪದ ನೃತ್ಯ ಕಲಾವಿದರ ತಂಡ ಜಾನಪದ ನೃತ್ಯ, ಬೆಂಗಳೂರಿನ ಎಂ.ಎಸ್‌.ನಾಟ್ಯ ಕ್ಷೇತ್ರದಿಂದ ನೃತ್ಯರೂಪಕ, ಬೆಂಗಳೂರಿನ ಜೆ. ಅಕ್ಷಯ್‌ ಮತ್ತು ತಂಡದಿಂದ ಮ್ಯಾಂಡೋಲಿನ್‌ ವಾದನ ಮನಮೋಹಕವಾಗಿತ್ತು. ಬಳಿಕ ಬೆಂಗಳೂರಿನ ಅಭಿನಯ ರಂಗ ಕೇಂದ್ರ (ಕೆ.ಪಿ. ಅಶ್ವತ್ಥನಾರಾಯಣ) ಅವರಿಂದ ಮಾಚಿದೇವ ನಾಟಕ ಪ್ರದರ್ಶನಗೊಂಡಿತು. ಕಲಾ ಮಂದಿರದಲ್ಲಿ 2ನೇ ದಿನವೂ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು.

ಕಲಾವಿದರಿಗೆ ಒಂದೆಡೆ ಖಾಲಿ ಕುರ್ಚಿಗಳು ಎದುರಾದರೆ, ಕಾರ್ಯಕ್ರಮಕ್ಕೆ ಕಡಿಮೆ ಸಮಯ ನಿಗದಿಪಡಿಸಿದ್ದು, ಮತ್ತಷ್ಟು ಬೇಸರ ತರಿಸಿತು. ಒಂದು ಕಲಾಕ್ರಮಕ್ಕೆ 45 ನಿಮಿಷ ನಿಗದಿ ಪಡಿಸಿದ್ದರೂ, ಕಾರ್ಯಕ್ರಮ ನಿರ್ವಹಕರು ಕಡಿಮೆ ಸಮಯ ನೀಡುತ್ತಿದ್ದಕ್ಕೆ ಕೆಲ ಕಲಾವಿದರು ಬೇಸರ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

13

ನಾಳೆ ನಾಡಹಬ್ಬದ ಜಂಬೂ ಸವಾರಿ

ವೈದ್ಯಕೀಯ ವಸ್ತುಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಮೈಸೂರು: ವೈದ್ಯಕೀಯ ವಸ್ತು ಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.