ವೀರಪ್ಪ ಮೊಯ್ಲಿ, ಬಿ.ಎನ್.ಬಚ್ಚೇಗೌಡ ಉಮೇದುವಾರಿಕೆ
Team Udayavani, Mar 26, 2019, 6:05 AM IST
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಅಖಾಡಕ್ಕೆ ಸೋಮವಾರ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಇದುವರೆಗೂ ಅಖಾಡಕ್ಕೆ ಬರೋಬ್ಬರಿ 13 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಮೊದಲಿಗೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ ಬಾಗೇಪಲ್ಲಿಯ ಗಡಿದಂ ವೆಂಕಟರವಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ
ಬಳಿಕ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು. ಬಳಿಕ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಹೊಸಕೋಟೆ ಬಿ.ಎನ್.ಬಚ್ಚೇಗೌಡರು ನಾಮಪತ್ರ ಸಲ್ಲಿಸಿದರು.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ. ಮಂಜುನಾಥ, ಬೆಂ. ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಣ್ಣ, ಬಚ್ಚೇಗೌಡರ
ಪತ್ನಿ ಉಮಾಗೌಡ ಸಾಥ್ ನೀಡಿದರು. ಉಳಿದಂತೆ ಸಿಪಿಐ(ಎಂ) ಪಕ್ಷದಿಂದ ಎಸ್.ವರಲಕ್ಷ್ಮೀ, ಬಹುಜನ ಸಮಾಜ ಪಕ್ಷದಿಂದ ಡಾ.ಸಿ.ಎಸ್. ದ್ವಾರಕನಾಥ್ ನಾಮಪತ್ರ ಸಲ್ಲಿಸಿದ್ದು, ಒಬ್ಬ ಮಹಿಳೆ ಸೇರಿದಂತೆ ಐವರು ಪಕ್ಷೇತರ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸುವ ಮೂಲಕ ಅಖಾಡಕ್ಕೆ ಸಜ್ಜಾಗಿದ್ದಾರೆ.