ಪ್ರಜಾಪ್ರಭುತ್ವದಲ್ಲಿ ಮಹಿಳೆಯರದ್ದೇ ಪ್ರಭುತ್ವ


Team Udayavani, Apr 13, 2019, 6:00 AM IST

MAhila

ಮಣಿಪಾಲ: ಭಾರತದ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. 1952ರ ಬಳಿಕ ಚುನಾವಣೆಯಲ್ಲಿ ಮಹಿಳೆಯರ ಪಾಲುದಾರಿಕೆ ಒಟ್ಟು ಜನಸಂಖ್ಯೆಗೆ ಹೋಲಿಸಿ ದರೆ ಕಡಿಮೆಯಾಗಿತ್ತು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೆಲವು ರಾಜ್ಯ ಗಳಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಾಗಿದ್ದಾರೆ.

ಈ ವರ್ಷ ಹೆಚ್ಚು
ಹಲವು ವರ್ಷಗಳ ಬಳಿಕ ಮಹಿಳಾ ಮತ ದಾರರು ಪ್ರಜಾಪ್ರಭುತ್ವದಲ್ಲಿ ಹೆಚ್ಚು ತೊಡಗಿಸಿ ಕೊಳ್ಳುತ್ತಿದ್ದಾರೆ. 1960ರ ಸುಮಾರಿಗೆ ಶೇ. 16. 7ರಷ್ಟು ಇದ್ದ ಪುರುಷ ಹಾಗೂ ಮಹಿಳಾ ಮತ ದಾರರ ನಡುವೆ ವ್ಯತ್ಯಾಸ ಶೇ. 1.79ಕ್ಕೆ ಇಳಿದಿದೆ.

ಹಿಂದೆ ಏನಾಗಿತ್ತು?
ರಾಜಕಾರಣ ಏನಿದ್ದರೂ ಪುರುಷರಿಗೆ ಎಂಬ ಮಾತ್ರ ಎಂಬ ಭಾವನೆ ಇತ್ತು. ಮಹಿಳೆಯರಿಗೆ ಕೆಲವು ಕ್ಷೇತ್ರಗಳಲ್ಲಿ ನಿಬಂಧನೆಗಳನ್ನು ಹೇರ ಲಾಗಿತ್ತು. ಇಂದು ಚಿತ್ರಣ ಬದಲಾಗಿದ್ದು, ಮಹಿಳೆಯರು ಅಬಲೆ ಅಲ್ಲ ಎಂಬ ದೃಢ ನಿರ್ಧಾರ ತಲೆದಿದ್ದಾರೆ. ಆಧುನಿಕ ಜೀವನ ಮಹಿಳೆಯರನ್ನು ಪ್ರಜಾಪ್ರಭುತ್ವದತ್ತ ಕರೆ ತಂದಿದೆ.

ಇದು ಇಂದು-ನಿನ್ನೆಯ ಬೆಳವಣಿಗೆ ಅಲ್ಲ. ಸ್ವಾತಂತ್ರ್ಯ ಲಭಿಸಿದ ಬಳಿಕ ಭಾರತದಲ್ಲಿ ಉಂಟಾದ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣದ ಪ್ರತೀಕ.

ಪಿಂಕ್‌ ಮತಗಟ್ಟೆ ಸ್ಫೂರ್ತಿ!
ಮಹಿಳಾ ಮತದಾರರನ್ನು ಉತ್ತೇಜಿಸುವ ಸಲುವಾಗಿ ಚುನಾವಣ ಆಯೋಗ ಮಹಿಳಾ ಮತಗಟ್ಟೆಯನ್ನು (ಪಿಂಕ್‌ಮತಗಟ್ಟೆ) ಸ್ಥಾಪಿಸಲು ನಿರ್ಧರಿಸಿತ್ತು. ಇದರಿಂದ ಮಹಿಳೆಯರಿಗೆ ಉತ್ತೇಜನ ಲಭಿಸಿದ ಪರಿಣಾಮ ಇಂದು ಮತಗಟ್ಟೆಯತ್ತ ಬರುವ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ.

ಯಾವೆಲ್ಲ ರಾಜ್ಯದಲ್ಲಿ ಹೆಚ್ಚಳ?
ಪುದುಚೇರಿ, ಕೇರಳ, ಗೋವಾ, ಮಣಿಪುರ, ದಮನ್‌ ಮತ್ತು ದೀಯು, ಮೇಘಾಲಯ, ಲಕ್ಷದೀಪ, ತಮಿಳುನಾಡು ಈ ರಾಜ್ಯದಲ್ಲಿ ಮಹಿಳಾ ಮತದಾರರ ಸಂಖ್ಯೆ ಒಟ್ಟು ಮತದಾರರ ಪೈಕಿ ಶೇ. 50ಕ್ಕಿಂತ ಹೆಚ್ಚಿದೆ. ಈ 8 ರಾಜ್ಯಗಳಲ್ಲಿ 68 ಲೋಕಸಭಾ ಸೀಟುಗಳಿವೆ ಅಂದರೆ ಶೇ. 12.5 ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ನಿರ್ಣಾಯಕರಾಗಿದ್ದಾರೆ. ಇವು ಗಳಲ್ಲಿ ಕೇರಳ 20 ಮತ್ತು ತಮಿಳುನಾಡು 30 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ.

ಇನ್ನು ಮಹಿಳಾ ವೋಟ್‌ ಬ್ಯಾಂಕ್‌?
ಈ ತನಕ ದೇಶದಲ್ಲಿ ಧರ್ಮ ಆಧಾರಿತ, ಜಾತಿಯಾಧಾರಿತ ವೋಟ್‌ಗಳಿಗೆ ರಾಜಕೀಯ ಪಕ್ಷಗಳು ಹೆಚ್ಚು ತಲೆಕೆಡಿಸಿಕೊಂಡಿದ್ದವು. ಇವುಗಳನ್ನು ಚಾಚಿಕೊಳ್ಳುವುದಕ್ಕೆ ಜಾತಿ ಆಧಾರಿತ, ಧರ್ಮಾಧಾರಿತ ಯೋಜನೆಗಳನ್ನು ಪಕ್ಷಗಳು ಜಾರಿಗೆ ತರುತ್ತಿದ್ದವು. ಇದೀಗ ಮಹಿಳಾ ಪರ ಯೋಜನೆಗಳನ್ನೂ ರಾಜಕೀಯ ಪಕ್ಷಗಳು ಜಾರಿಗೆ ತರಬೇಕಾದ ಅನಿವಾರ್ಯಕ್ಕೆ ಸಿಲುಕಿದಂತಾಗಿದೆ. 16ನೇ ಸಂಸತ್ತಿನಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) 89 ಮಹಿಳಾ ಸಂಸದೆಯರಿದ್ದರು.

ಭಾರತ ಮತ್ತು ಪಾಕಿಸ್ಥಾನ
ಸರ್ವೇಯೊಂದರ ಪ್ರಕಾರ ಪಾಕಿಸ್ಥಾನದಲ್ಲಿ ಮಹಿಳೆಯರು ಮತದಾನದಲ್ಲಿ ಪಾಲ್ಗೊಳ್ಳುವ ಸಂಖ್ಯೆ ಅತೀ ಕಡಿಮೆಯಾಗಿದೆ. ಭಾರತಕ್ಕೆ ಹೋಲಿಸಿದರೆ ಪಾಕಿಸ್ಥಾನದ ಸಾಧನೆ ಅತೀ ಕಳಪೆ. ಭಾರತದಲ್ಲಿ ಒಟ್ಟು ಸಂಸದರಲ್ಲಿ ಶೇ.11.2ರಷ್ಟು ಮಹಿಳೆ ಯಾಗಿದ್ದರೆ, ಪಾಕಿಸ್ಥಾನದಲ್ಲಿ ಶೇ.20 ಮಹಿಳಾ ಸಂಸದೆಯರಿದ್ದಾರೆ. ವಿಶ್ವದಲ್ಲಿ ಈ ಸಂಖ್ಯೆ ಶೇ.24.3ರಷ್ಟಿದೆ.

ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ
1999ರಿಂದ 2009ರ ವರೆಗೆ ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಯಲ್ಲಿ ಗಮನಾರ್ಹ ಚೇತರಿಕೆ ಕಂಡಿದೆ. 1999ರಲ್ಲಿ 284 ಇದ್ದ ಅಭ್ಯರ್ಥಿಗಳು 2009ರಲ್ಲಿ 556ಕ್ಕೆ ಏರಿದ್ದಾರೆ. ಕೇಂದ್ರ ಸಂಪುಟದಲ್ಲಿ 5 ಮಹಿಳೆಯರಿದ್ದಾರೆ. 5 ಪ್ರಮುಖ ನಾಯಕಿಯರು ವಿವಿಧ ರಾಜಕೀಯ ಪಕ್ಷಗಳ ಮುಖ್ಯಸ್ಥರಾಗಿದ್ದಾರೆ‌ ಎಂಬುದು ವಿಶೇಷ.

ಟಾಪ್ ನ್ಯೂಸ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

3-hunsur

Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.