ಮಾಯಾವತಿ ರಾಜೀನಾಮೆ ಸ್ಪೀಕರ್ ಅಂಗೀಕಾರ
Team Udayavani, Jul 21, 2017, 5:50 AM IST
ಹೊಸದಿಲ್ಲಿ: ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬಿಎಸ್ಪಿ ನಾಯಕಿ ಮಾಯಾವತಿ ನೀಡಿದ್ದ ರಾಜೀನಾಮೆ ಗುರುವಾರ ಅಂಗೀಕಾರ ಗೊಂಡಿದೆ.
ದಲಿತರ ವಿರುದ್ಧದ ಹಿಂಸಾಕೃತ್ಯಗಳ ಬಗ್ಗೆ ಮಾತನಾಡಲು ಸದನದಲ್ಲಿ ಅವ ಕಾಶ ನೀಡಿಲ್ಲ ಎಂಬ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದರು. ಇದನ್ನು ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಅವರು ಅಂಗೀಕರಿಸಿದ್ದಾರೆ.
ಬುಧವಾರ ನೀಡಿದ 3 ಪುಟಗಳ ರಾಜೀನಾಮೆ ಪತ್ರದಲ್ಲಿ ಕೇಂದ್ರ, ರಾಜ್ಯಸಭಾ ಸ್ಪೀಕರ್ ವಿರುದ್ಧ ಅಸಮಾ ಧಾನ ವ್ಯಕ್ತಪಡಿಸಿದ್ದರು. ತಾಂತ್ರಿಕ ಕಾರಣಕ್ಕೆ ರಾಜೀನಾಮೆಯನ್ನು ತಳ್ಳಿ ಹಾಕಲಾಗಿತ್ತು. ಬಳಿಕ ಮಾಯಾವತಿ ಕೈಬರಹದಲ್ಲಿ ಒಂದು ಸಾಲಿನಲ್ಲಿ ತನ್ನ ರಾಜೀನಾಮೆ ಬರೆದು ಕೊಟ್ಟಿದ್ದು, ಅದನ್ನು ಅಂಗೀಕರಿಸಲಾಗಿದೆ.