ಡಬಲ್ ಡೆಕ್ಕರ್ ಬಸ್ ಕನಸಿಗೆ ಮರುಜೀವ
ಜನಾಭಿಪ್ರಾಯಕ್ಕೆ ಮುಂದಾದ ಕೆಎಸ್ಸಾರ್ಟಿಸಿ
Team Udayavani, Sep 25, 2019, 5:00 AM IST
ಮಹಾನಗರ: ಕೆಲವು ವರ್ಷಗಳ ಹಿಂದೆ ಸಾರಿಗೆ ಕ್ಷೇತ್ರದಲ್ಲಿ ಬಹು ಚರ್ಚಿತ ವಿಷಯವಾಗಿದ್ದ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಡಬಲ್ ಡೆಕ್ಕರ್ ಬಸ್ಗಳನ್ನು ರಸ್ತೆಗಿಳಿಸುವ ಪ್ರಸ್ತಾವಕ್ಕೆ ಮರುಜೀವ ಬಂದಿದ್ದು, ಈ ಸಂಬಂಧ ಇದೀಗ ಕೆಎಸ್ಆರ್ಟಿಸಿ ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
ನಿಗಮವು ಎರಡು ವರ್ಷಗಳ ಹಿಂದೆಯೇ ಡಬಲ್ ಡೆಕ್ಕರ್ ಬಸ್ ಅನ್ನು ರಸ್ತೆಗಿಳಿ ಸಬೇಕಿತ್ತು. ಆದರೆ ಬಸ್ ನಿರ್ಮಾಣ ಮಾಡಲು ವೋಲ್ವೋ, ಲೈಲ್ಯಾಂಡ್, ಟಾಟಾ ಸಹಿತ ಹೆಚ್ಚಿನ ಕಂಪೆನಿಗಳು ಆಸಕ್ತಿ ತೋರಲಿಲ್ಲ. ಇದೇ ಕಾರಣಕ್ಕೆ ಈ ಪ್ರಸ್ತಾವ ಮೂಲೆಗುಂಪಾಗಿತ್ತು. ಈಗ ಕೆಎಸ್ಸಾರ್ಟಿಸಿ ವಿಶೇಷ ಆಸಕ್ತಿ ತೋರಿದ್ದು, 90ರ ದಶಕದ ಡಬಲ್ ಡೆಕ್ಕರ್ ಬಸ್ಗಳು ರಸ್ತೆಗಿಳಿಸಲು ಚಿಂತಿಸುತ್ತಿದೆ. ಈ ನಿಟ್ಟಿನಲ್ಲಿ ಇಲ್ಲಿನ ರಸ್ತೆಗಳಿಗೆ ಹೊಂದಬಹುದೇ?, ರಾಜ್ಯದ ಯಾವ ರೂಟ್ಗಳಲ್ಲಿ ಸಂಚರಿ ಸಲು ಸಾಧ್ಯವಿದೆ ಎಂಬ ವಿಚಾರಕ್ಕೆ ಸಂಬಂ ಧಿಸಿ ಜನಾಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
ಸಚಿವಾಲಯದ ಸೂಚನೆ
ಡಬಲ್ ಡೆಕ್ಕರ್ ಬಸ್ ಸೇವೆಗೆ ಉತ್ತೇಜನ ನೀಡಬೇಕು ಎಂದು ಕೆಲವು ವರ್ಷಗಳ ಹಿಂದೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆಯನ್ನು ಹೊರ ಡಿಸಿತ್ತು. ಅದರಂತೆಯೆ ಕೆಎಸ್ಸಾರ್ಟಿಸಿಯು ಕೆಲವೊಂದು ಮಾರ್ಗಗಳನ್ನು ಗುರುತು ಮಾಡಿತ್ತು. ಪ್ರಸ್ತಾವಿತ ಮಾರ್ಗಗಳಲ್ಲಿ ಮಂಗಳೂರು ನಗರದ ಕೂಡ ಇತ್ತು. ಬಸ್ ಕಾರ್ಯಾ ಚರಣೆ ನಡೆಸಲು ನಿಗಮವು ಬೆಂಗಳೂರು-ಮಂಗಳೂರು, ಬೆಂಗ ಳೂರು- ಮೈಸೂರು, ಬೆಂಗಳೂರು- ಹೈದರಾಬಾದ್, ಬೆಂಗಳೂರು-ಚೆನ್ನೈ, ಬೆಂಗಳೂರು-ಹುಬ್ಬಳ್ಳಿ ಸೇರಿ ಒಟ್ಟಾರೆ ಐದು ಮಾರ್ಗಗಳನ್ನು ಗುರುತು ಮಾಡಿತ್ತು.
ಏನಿದು ಡಬಲ್ ಡೆಕ್ಕರ್ ಬಸ್ ?
ಈ ಬಸ್ಗಳಲ್ಲಿ ಎರಡು ಮಹಡಿಗಳಿವೆ. ಇದೇ ಕಾರಣಕ್ಕೆ ಹೆಚ್ಚು ಮಂದಿ ಪ್ರಯಾಣಿಕರನ್ನು ಕೊಂಡೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದರ ಎಂಜಿನ್ ಸಾಮರ್ಥ್ಯ, ನಿರ್ವಹಣೆ ಸಿಂಗಲ್ ಡೆಕ್ಕರ್ ಬಸ್ಗಿಂತ ವ್ಯತ್ಯಾಸ ಇರುತ್ತದೆ. 1990ರ ವೇಳೆ ಬೆಂಗಳೂರು ನಗರ ಸಂಚರಿಸಲು ಬಿಎಂಟಿಸಿಯು ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಪರಿಚಯಿಸಿತ್ತು.
ಬಜೆಟ್ನಲ್ಲಿ 5 ಕೋಟಿ ರೂ. ಅನುದಾನ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಹಂಪಿಯ ಸೌಂದರ್ಯವನ್ನು ಸವಿಯುವ ನಿಟ್ಟಿನಲ್ಲಿ ಡಬಲ್ ಡೆಕ್ಕರ್ ಬಸ್ ಅನ್ನು ಪರಿಚಯಿಸಲಿದೆ. ಈ ವರ್ಷಾಂತ್ಯಕ್ಕೆ ಮೈಸೂರು-ಹಂಪಿ ನಡುವೆ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 6 ಡಬಲ್ ಡೆಕ್ಕರ್ ಬಸ್ ಪರಿಯಿಸುವ ಸಲುವಾಗಿ 5 ಕೋಟಿ ರೂ. ಅನುದಾನವನ್ನು ನೀಡಿದ್ದರು. ಸದ್ಯ ಟೆಂಡರ್ ಆಹ್ವಾನಿಸಿದ್ದು ಕೆಲವೇ ತಿಂಗಳುಗಳಲ್ಲಿ ಈ ಸೇವೆ ಆರಂಭಗೊಳ್ಳಲಿದೆ.
ಮಾತುಕತೆ ಹಂತದಲ್ಲಿದೆ
ಡಬಲ್ ಡೆಕ್ಕರ್ ಬಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಸ್ ನಿರ್ಮಾಣ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುತ್ತಿದೆ. ಈ ಬಗ್ಗೆ ಇನ್ನು ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಯಾವೆಲ್ಲ ರೂಟ್ಗಳಲ್ಲಿ ಬಸ್ ಓಡಾಟ ನಡೆಸಬೇಕು ಎಂಬ ಕುರಿತು ಜನಾಭಿಪ್ರಾಯ ಪಡೆಯುತ್ತೇವೆ.
-ಶಿವಯೋಗಿ ಸಿ. ಕಳಸದ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ
– ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
MUST WATCH
ಹೊಸ ಸೇರ್ಪಡೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!