ಕಲಿಕೆಯೊಂದಿಗೆ ಗಳಿಕೆಗೂ ಸೈ ಎಂದ ವಿದ್ಯಾರ್ಥಿಗಳು
ಪೇಪರ್ ಬ್ಯಾಗ್ ತಯಾರಿಗಿಳಿದ ಕನ್ನಡ ಶಾಲೆ ಪುಟಾಣಿಗಳು
Team Udayavani, Jul 20, 2019, 5:00 AM IST
ತಾವು ತಯಾರಿಸಿದ ಪೇಪರ್ ಬ್ಯಾಗ್ಗಳನ್ನು ಪ್ರದರ್ಶಿಸುತ್ತಿರುವ ವಿದ್ಯಾರ್ಥಿಗಳು.
ಮಹಾನಗರ: ವಾರಾಂತ್ಯದ ರಜೆಯಲ್ಲಿ ಈ ಮಕ್ಕಳು ಟಿವಿ, ಮೊಬೈಲ್ ನೋಡುತ್ತಾ ಕಾಲ ಕಳೆಯುವುದಿಲ್ಲ. ಕೈಯಲ್ಲಿ ಪೇಪರ್ ಹಿಡಿದು ಬ್ಯಾಗ್ ತಯಾರಿಕೆಯಲ್ಲಿ ತೊಡಗುತ್ತಾರೆ. ತಾವೇ ತಯಾರಿಸಿದ ಬ್ಯಾಗ್ ಅನ್ನು ಮನೆ ಹತ್ತಿರದ ಅಂಗಡಿಗಳಿಗೆ ನೀಡಿ ಕಲಿಕೆಯೊಂದಿಗೆ ಗಳಿಕೆಯಲ್ಲಿ ನಿರತರಾಗಿದ್ದಾರೆ.
ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣದ ಸಂಕಲ್ಪ ತೊಟ್ಟಿರುವ ಬೆಂದೂರು ಸೈಂಟ್ ಆ್ಯಗ್ನೆಸ್ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳು ಪ್ಲಾಸ್ಟಿಕ್ ಬದಲು ಪರಿಸರಸ್ನೇಹಿ ಪೇಪರ್ ಬ್ಯಾಗ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿನಿ ಮಂಗಳಾ ಭಟ್ ಅವರ ಬಳಿ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಪೇಪರ್ ಬ್ಯಾಗ್ ತಯಾರಿಕೆ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ. 4ರಿಂದ 7ನೇ ತರಗತಿಯ ಮಕ್ಕಳು ಪೇಪರ್ ಬ್ಯಾಗ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
200 ರೂ. ಗಳಿಕೆ!
15 ದಿನಗಳಿಂದ ಶಾಲೆಗೆ ರಜೆ ಇರುವ ದಿನಗಳಲ್ಲಿ ಮಕ್ಕಳು ಪೇಪರ್ ಬ್ಯಾಗ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಲು ತಯಾರಿಸಿದ ಬ್ಯಾಗ್ನ್ನು ಶಾಲೆಯ ಸುತ್ತಮುತ್ತಲಿರುವ ಅಂಗಡಿ ಗಳಿಗೆ ನೀಡಿದಾಗ ವಿದ್ಯಾರ್ಥಿಗಳಿಗೆ ಅಂಗಡಿಯವರು ಚಾಕೋಲೇಟ್, ಇತರ ಸಿಹಿತಿಂಡಿ ನೀಡಿ ಖುಷಿ ವ್ಯಕ್ತಪಡಿಸಿದ್ದಾರೆ. ಇದರಿಂದ ಪ್ರೇರಣೆಗೊಂಡ ಮಕ್ಕಳು ತಮ್ಮ ಮನೆ ಪರಿಸರದಲ್ಲಿರುವ ಅಂಗಡಿಗಳಿಗೆ ಬ್ಯಾಗ್ ತಯಾರಿಸಿ ನೀಡಿದ್ದಾರೆ. ಅಂಗಡಿಯವರು ಸುಮಾರು ಅರ್ಧ ಕೆಜಿ ಬ್ಯಾಗ್ಗೆ 200 ರೂ.ಗಳಷ್ಟು ಹಣ ನೀಡಿದ್ದು, ಕಲಿಕೆಯೊಂದಿಗೆ ಗಳಿಕೆಯ ಸಂಭ್ರಮದಲ್ಲಿ ವಿದ್ಯಾರ್ಥಿಗಳಿದ್ದಾರೆ. ಅಂಗಡಿಯವರು ನೇರವಾಗಿ ವಿದ್ಯಾ ರ್ಥಿಗಳ ಬ್ಯಾಂಕ್ ಖಾತೆಗೇ ಹಣ ಜಮಾವಣೆ ಮಾಡುವುದರಿಂದ ಹಣ ಉಳಿ ತಾಯಕ್ಕೂ ದಾರಿಯಾಗಿದೆ. ಬಹುತೇಕ ಬಡ ಮನೆಯ ವಿದ್ಯಾರ್ಥಿಗಳೇ ಇಲ್ಲಿ ಕಲಿಯುತ್ತಿರುವುದರಿಂದ ಅವರ ಶೈಕ್ಷಣಿಕ ವೆಚ್ಚಕ್ಕೂ ಇದು ದಾರಿಯಾಗುತ್ತದೆ ಎನ್ನು ತ್ತಾರೆ ಶಾಲೆಯ ಮುಖ್ಯ ಶಿಕ್ಷಕರು.
ವೃತ್ತ ಪತ್ರಿಕೆಗಳ ಎರಡು ಪುಟ ಗಳಲ್ಲಿ ಒಂದು ಬ್ಯಾಗ್ನ್ನು ತಯಾರಿ ಮಾಡ ಲಾಗುತ್ತದೆ. ಈ ಬ್ಯಾಗ್ ತಯಾರಿಗೆ ಕೇವಲ ಒಂದು ನಿಮಿಷ ಸಾಕು. ಬೇಳೆಕಾಳುಗಳು, ಇತರ ದಿನಸಿ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಬದಲು ಇಂತಹ ಬ್ಯಾಗ್ಗಳಲ್ಲಿ ನೀಡಲು ಅಂಗಡಿಯವರಿಗೂ ಸಹಕಾರಿ ಯಾಗುತ್ತದೆ. ವಿದ್ಯಾರ್ಥಿಗಳು ದಪ್ಪನೆಯ ದಾರವನ್ನು ಪೋಣಿಸಿ ಹ್ಯಾಂಡ್ ಬ್ಯಾಗ್ಗಳನ್ನೂ ತಯಾರಿಸುತ್ತಿರುವುದರಿಂದ ಹೆಚ್ಚು ಉಪಯುಕ್ತವಾಗಿದೆ. ವಿವಿಧ ಗಾತ್ರಗಳ ಬ್ಯಾಗ್ಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
-ಪರಿಸರಸ್ನೇಹಿ ಬ್ಯಾಗ್
-ಅರ್ಧ ಕೆ. ಜಿ. ಗೆ 200 ರೂ.
-ಸುಲಭ ತಯಾರಿ
-ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ