ತೊಕ್ಕೊಟ್ಟು ಜಂಕ್ಷನ್: ಕಾಮಗಾರಿ ಆರಂಭ
Team Udayavani, Jul 20, 2019, 5:00 AM IST
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್ ಕೃತಕ ನೆರೆಗೆ ಕಾರಣವಾಗುತ್ತಿದ್ದ ಚರಂಡಿ ದುರಸ್ತಿಯ ತಾತ್ಕಾಲಿಕ ಕಾಮಗಾರಿ ಶುಕ್ರವಾರ ನಡೆದಿದ್ದು ಭಟ್ನಗರದಿಂದ ತೊಕ್ಕೊಟ್ಟು ಜಂಕ್ಷನ್ವರೆಗಿನ ಚರಂಡಿಯಲ್ಲಿ ತುಂಬಿದ್ದ ಮಣ್ಣು ತೆರವುಗೊಳಿಸಲಾಯಿತು.
ಗುರುವಾರ ಸುರಿದ ಮಳೆಗೆ ತೊಕ್ಕೊಟ್ಟು ಜಂಕ್ಷನ್ನಲ್ಲಿ ಕೃತಕ ನೆರೆಯಾಗಿತ್ತು ಈ ಕುರಿತು ಉದಯವಾಣಿ ಪತ್ರಿಕೆ ವರದಿ ಪ್ರಕಟಿಸಿತ್ತು ಈಗ ತಡವಾಗಿ ಎಚ್ಚೆತ್ತ ಹೆದ್ದಾರಿ ಕಾಮಗಾರಿ ನಡೆಸುವ ನವಯುಗ್ ಸಂಸ್ಥೆಯಿಂದ ಚರಂಡಿಯ ಮಣ್ಣು ತೆಗೆಯುವ ಕಾರ್ಯ ಬೆಳಗ್ಗಿನಿಂದ ಆರಂಭಗೊಂಡಿದೆ.
ಬೆಳಗ್ಗಿನಿಂದಲೇ ಜೇಸಿಬಿ ಮೂಲಕ ಚರಂಡಿಯ ಮಣ್ಣು ತೆಗೆಯುತ್ತಿದ್ದು ಈ ಚರಂಡಿಯ ನೀರು ಜಂಕ್ಷನ್ನ ಮುಖ್ಯ ಚರಂಡಿಗೆ ಹರಿದುಹೋಗಲು ವ್ಯವಸ್ಥೆ ಮಾಡ ಲಾಗಿದೆ. ಕಳೆದೆರಡು ದಿನಗಳ ಮಳೆಯಿಂದ ರಸ್ತೆ ಸಂಪೂರ್ಣ ಹೊಂಡ ಬಿದ್ದಿದ್ದು ರಸ್ತೆಗೆ ತಾತ್ಕಾಲಿಕ ಕಾಮಗಾರಿ ನಡೆಸಬೇಕಾಗಿದೆ.
ಅವಸರವಾಗಿ ಕಾಮಗಾರಿ ಆರಂಭಿ ಸಿದ್ದರಿಂದ ಹೆದ್ದಾರಿ ಬದಿಯ ಚರಂಡಿಯ ಸ್ಲ್ಯಾಬ್ಗಳನ್ನು ಸರಿಸಿ ಮಣ್ಣು ತೆಗೆದು ಮಣ್ಣನ್ನು ಚರಂಡಿಯ ಬದಿಯಲ್ಲೇ ಹಾಕಿದ್ದು ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗಲಿದೆ. ಈ ಹಿಂದೆ ಚರಂಡಿ ಸ್ಲ್ಯಾಬ್ ಹಾಕಿದ್ದರಿಂದ ಪಾದಚಾರಿಗಳು ಈ ಸ್ಲ್ಯಾಬ್ನ ಮೇಲೆಯೇ ಸಂಚರಿಸುತ್ತಿದ್ದರು.
ಈಗ ಚರಂಡಿ ತೆರೆದಿರುವುದರಿಂದ ವಾಹನಗಳು ಚರಂಡಿಗೆ ಬೀಳುವ ಸಾಧ್ಯತೆ ಯಿದ್ದು ಪಾದಚಾರಿಗಳು ಎಚ್ಚರಿಕೆಯಿಂದ ಇಲ್ಲಿ ನಡೆಯುವ ಸ್ಥಿತಿ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
MUST WATCH
ಹೊಸ ಸೇರ್ಪಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!