ಬಡ ವ್ಯಕ್ತಿಯ ಚಿಕಿತ್ಸೆಗೆ ನೆರವು: ಮನವಿ
Team Udayavani, Nov 8, 2019, 4:41 AM IST
ಬೆಳ್ಳಾರೆ: ಬೆಳ್ಳಾರೆ ಗ್ರಾಮದ ಪುಡ್ಕಜೆಯ ಪೈಂಟರ್ ವೃತ್ತಿ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ ಮಂಜು ನಾಥ ಎಂಬವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಯ ವೆಚ್ಚ ಭರಿಸಲು ಬಡ ಕುಟುಂಬವು ಪರದಾಡುತ್ತಿದ್ದು, ದಾನಿಗಳ ನೆರವಿಗೆ ಮನವಿ ಮಾಡಿದ್ದಾರೆ.
ಪೈಂಟರ್ ವೃತ್ತಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಮಂಜುನಾಥ ಅವರಿಗೆ ಕಳೆದ ಮೂರು ತಿಂಗಳ ಹಿಂದೆ ಜಾಂಡಿಸ್ ಕಾಯಿಲೆ ಬಂದು ಮಂಗ ಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ವೈದ್ಯರು ಇವರಿಗೆ ಲಿವರ್ ಕ್ಯಾನ್ಸರ್ ಇರುವುದಾಗಿ ದೃಢಪಡಿಸಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಸೂಚಿಸಿದ್ದಾರೆ. ಆದರೆ ಚಿಕಿತ್ಸೆಗೆ ಸುಮಾರು 4.5 ಲಕ್ಷ ರೂ. ವೆಚ್ಚವಾಗಲಿದ್ದು, ಈಗಾಗಲೇ ಸಾವಿರಾರು ರೂಪಾಯಿ ಖರ್ಚು ಮಾಡಿರುವ ಬಡ ಕುಟುಂಬ ಹೆಚ್ಚಿನ ಹಣ ಹೊಂದಿಸಲಾಗದೆ ಅಸಹಾಯಕ ಆಗಿದೆ. ಮಂಜುನಾಥರ ಪತ್ನಿ ಕೂಲಿ ಕೆಲಸ ಮಾಡಿ ಜೀವನ ಸಾಗುಸುತ್ತಿದ್ದು, ಮಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಮಂಜುನಾಥ ಅವರ ಅಜ್ಜಿಯೂ ಇದೇ ಮನೆಯಲ್ಲಿ ವಾಸವಾಗಿ ದ್ದಾರೆ. ಪುಡ್ಕಜೆ ಕಾಲನಿಯಲ್ಲಿ ವಾಸಿಸಲು ಸಣ್ಣ ಮನೆಯೊಂದನ್ನು ಹೊರತುಪಡಿಸಿ ಕುಟುಂಬಕ್ಕೆ ಇತರ ಆದಾಯದ ಮೂಲವಿಲ್ಲ. ಕೆ.ಎಂ.ಸಿ.ಯಲ್ಲಿ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದಾರಾದರೂ ಹಣ ಹೊಂದಿಸಲಾಗದೆ ಮಂಜುನಾಥ್ ದಾನಿಗಳು ನೆರವಿನ ನಿರಿಕ್ಷೆಯಲ್ಲಿ ಇದ್ದಾರೆ.
ನೆರವು ನೀಡಲಿಚ್ಛಿಸುವ ದಾನಿಗಳು ಮಂಜುನಾಥ ಅವರ ಪತ್ನಿ ಜಯಶ್ರೀ ಅವರ ಬ್ಯಾಂಕ್ ಆಫ್ ಬರೋಡಾ (ವಿಜಯಾ ಬ್ಯಾಂಕ್) ಬೆಳ್ಳಾರೆ ಶಾಖೆಯ ಖಾತೆ ಸಂಖ್ಯೆ 102601011000394, ಐಎಫ್ಎಸ್ಸಿ ಕೋಡ್ ವಿಐಜೆಬಿ0001026 ಸಂಖ್ಯೆಗೆ ಜಮೆ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು