ವಿಕ್ರಂ ಜೈನ್ ಕೊಲೆ: ಮೂವರ ಬಂಧನ
Team Udayavani, May 30, 2019, 10:40 AM IST
ಬೆಳ್ತಂಗಡಿ,: ಮುಂಡೂರು ಕೋಟಿಕಟ್ಟೆಯಲ್ಲಿ ಉಪನ್ಯಾಸಕ ವಿಕ್ರಮ್ ಜೈನ್ ಅವರ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಮುಂಡೂರಿನ ಉಜ್ರೆಬೈಲು ನಿವಾಸಿ ನಾಗೇಶ್ ಪೂಜಾರಿ (32), ಮುಂಡೂರಿನ ಪರನೀರು ನಿವಾಸಿ ಡೀಕಯ್ಯ ನಲ್ಕೆ (39) ಹಾಗೂ ಹಂತಕರು ಪರಾರಿ ಯಾಗಲು ಸಹಕರಿಸಿದ ಮಾಲಾಡಿ ಸಮೀಪದ ಊರ್ಲ ನಿವಾಸಿ ಗಣೇಶ್ ಪೂಜಾರಿ (34) ಬಂಧಿತರು.
ಇಬ್ಬರಿಗೂ ಇತ್ತು ದ್ವೇಷ
ತನ್ನ ಹತ್ತಿರದ ಸಂಬಂಧಿ ಮಹಿಳೆ ಜತೆ ವಿಕ್ರಂ ಜೈನ್ ಸ್ನೇಹ ಹೊಂದಿ ದ್ದಕ್ಕೆ ನಾಗೇಶ್ ತಗಾದೆ ಎತ್ತಿದ್ದ. ಇನ್ನೋರ್ವ ಆರೋಪಿ ಡೀಕಯ್ಯ ಮನೆ ಕಟ್ಟುತ್ತಿದ್ದು, ಈತನಿಗೆ ರಸ್ತೆ ಬಿಟ್ಟು ಕೊಡದಿದ್ದಕ್ಕೆ ದ್ವೇಷವಿದ್ದ ಕಾರಣ ಇಬ್ಬರು ಸೇರಿ ವಾರದ ಹಿಂದೆ ಕೊಲೆಗೆ ಸಂಚು ರೂಪಿ ಸಿದ್ದರು. ಆರೋಪಿಗಳು ವಿಕ್ರಂನ ನೆರೆಹೊರೆ ಯವರಾಗಿದ್ದರು. ವಿಕ್ರಮ್ ಜತೆ ಮಾತನಾಡುವ ನೆಪದಲ್ಲಿ ಮದ್ಯ ಕುಡಿಸಿ ನಾಗೇಶ್ ಚೂರಿಯಿಂದ ಇರಿ ದಿದ್ದು, ಪಕ್ಕದಲ್ಲಿ ಅಡಗಿ ಕುಳಿತಿದ್ದ ಡೀಕಯ್ಯ ಮಚ್ಚಿನಿಂದ ಕಡಿದಿದ್ದಾನೆ. ಈ ವೇಳೆ ವಿಕ್ರಂ ಆರೋಪಿಗಳ ಕೈಗೆ ಕಡಿದಿದ್ದರಿಂದ ಗಾಯವಾಗಿದೆ. ಬಳಿಕ ಬಿದ್ದ ವಿಕ್ರಂಗೆ ಆರೋಪಿಗಳು ಕಡಿದು ರೈಲಿನಲ್ಲಿ ಮುಂಬಯಿಗೆ ಪರಾರಿ ಯಾಗಲೆತ್ನಿಸಿದ್ದು, ಬೈಂದೂರು ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದರು.
ಕೊಲೆ ಬಳಿಕ ಆರೋಪಿಗಳು ಪರಾರಿಯಾಗಲು ನಾಗೇ ಶನ ಅಣ್ಣ ಮಾಲಾಡಿ ಗ್ರಾಮದ ಊರ್ಲ ನಿವಾಸಿ ಗಣೇಶ್ ಪೂಜಾರಿ(34)ಯ ಮನೆಗೆ ತೆರಳಿದ್ದರು. ರಾತ್ರಿ ಇಡೀ ಅಲ್ಲೇ ತಂಗಿದ್ದು, ಬೆಳಗ್ಗೆ 7 ಗಂಟೆಗೆ ಮೂರ್ಜೆ ಮೂಲಕ ಪರಾರಿಯಾಗಿದ್ದರು. ಆರೋಪಿಗಳು ಬಳಸಿದ್ದ ದ್ವಿಚಕ್ರ ವಾಹನ ಮತ್ತು ಕೃತ್ಯದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳನ್ನು ಸುಟ್ಟ ಸ್ಥಿತಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಬಹುಮಾನ ಘೋಷಣೆ
ಆರೋಪಿಗಳನ್ನು 8 ಗಂಟೆಯೊಳಗೆ ಬಂಧಿಸಿದ ಬೆಳ್ತಂಗಡಿ ಸಿಐ ಸಂದೇಶ್ ಪಿ.ಜಿ., ಎಸ್.ಐ. ರವಿ ಬಿ.ಎಸ್. ಬಂಟ್ವಾಳ ಪ್ರಭಾರ ಡಿವೈಎಸ್ಪಿ ನಟರಾಜ್ ಅವರನ್ನು ಅಭಿನಂದಿಸಿದ ದ.ಕ. ಎಸ್ಪಿ ಬಹುಮಾನ ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್