ಭುವನೇಂದ್ರ ಕಿದಿಯೂರು ಅವರಿಗೆ ಧರ್ಮ ರತ್ನಾಕರ ಪ್ರಶಸ್ತಿ ಪ್ರದಾನ
Team Udayavani, Jun 12, 2019, 12:19 PM IST
ಮಲ್ಪೆ: ಸ್ವ ಪ್ರಯತ್ನ, ದೇವರ ಅನುಗ್ರಹ ಮತ್ತು ಸಮಾಜದ ಸಹಕಾರ ಇದ್ದರೆ ಮಾತ್ರ ಯಾವುದೇ ಒಬ್ಬ ವ್ಯಕ್ತಿ ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ಈ ದಾರಿಯಲ್ಲಿ ಸಾಗಿ ಎಲ್ಲರನ್ನು ತನ್ನಡೆಗೆ ಆಕರ್ಷಿಸುವ, ಸೇವಾ ಮನೋಭಾವದ ಶ್ರೀಕೃಷ್ಣನ ಪರಮ ಭಕ್ತ ಭುವನೇಂದ್ರ ಕಿದಿಯೂರು ಶ್ರೀಕೃಷ್ಣನಂತೆ ಸರ್ವಜನ ಪ್ರಿಯರಾದವರು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ನುಡಿದರು.
ಅವರು ಸೋಮವಾರ ಉಡುಪಿ ಕಿದಿಯೂರು ಹೊಟೇಲಿನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ಅವರ ಜನ್ಮದಿನದ ಪ್ರಯುಕ್ತ ನಡೆದ ಅಭಿನಂದನೆ ಸಮಾರಂಭ ಮತ್ತು ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ಕೊಡಮಾಡಿದ “ಧರ್ಮ ರತ್ನಾಕರ’ ಪ್ರಶಸ್ತಿಯನ್ನು ಭುವನೇಂದ್ರ ಕಿದಿಯೂರು ಅವರಿಗೆ ನೀಡಿ ಆಶೀರ್ವಚನ ನೀಡಿದರು.
ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವ ಚನ ನೀಡಿ, ಕೇವಲ ತನ್ನ ಉದರವನ್ನು ಮಾತ್ರ ಪೋಷಿಸುತ್ತಿದ್ದರೆ ಅದು ಬದುಕು ಅಲ್ಲ. ಸಮಾಜದಲ್ಲಿ ಇನ್ನೂ 10 ಮಂದಿಯ ಬದುಕನ್ನು ರೂಪಿ ಸುವ ಜವಾಬ್ದಾರಿ ಹೊತ್ತರೆ ಮಾತ್ರ ನಿಜವಾದ ಬದುಕು ಎಂದರು.
ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ| ಜಿ. ಶಂಕರ್, ಜೋತಿಷ ವಿದ್ವಾನ್ ಕಬ್ಯಾಡಿ ಜಯ ರಾಮ ಆಚಾರ್ಯ, ಕಿದಿಯೂರು ಹೊಟೇಲಿನ ನಿರ್ದೇಶಕಿ ಹೀರಾ ಬಿ. ಕಿದಿಯೂರು, ಡಾ| ಯಜ್ಞೆàಶ್ ಬಿ. ಕಿದಿಯೂರು, ಡಾ| ಬೃಜೇಶ್ ಬಿ. ಕಿದಿಯೂರು, ಡಾ| ಭವ್ಯಶ್ರೀ ಕಿದಿಯೂರು, ಡಾ| ಅಭಿನ್ ದೇವದಾಸ್, ಯುವರಾಜ್ ಮಸ್ಕತ್, ಹಿರಿಯಣ್ಣ ಟಿ. ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು.
ಜಿತೇಶ್ ಕಿದಿಯೂರು ಸ್ವಾಗತಿಸಿ ದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಕಿದಿಯೂರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ