ವನಿತಾ ಏಕದಿನ ಕ್ರಿಕೆಟ್‌ ಸರಣಿ: ಅಮೇಲಿಯಾ ಕೆರ್‌ ಶತಕ; ಭಾರತಕ್ಕೆ ಮತ್ತೆ ಸೋಲು


Team Udayavani, Feb 15, 2022, 11:15 PM IST

ವನಿತಾ ಏಕದಿನ ಕ್ರಿಕೆಟ್‌ ಸರಣಿ: ಅಮೇಲಿಯಾ ಕೆರ್‌ ಶತಕ; ಭಾರತಕ್ಕೆ ಮತ್ತೆ ಸೋಲು

ಕ್ವೀನ್ಸ್‌ಟೌನ್‌ (ನ್ಯೂಜಿಲ್ಯಾಂಡ್‌): ವನಿತಾ ಏಕದಿನದಲ್ಲಿ ದ್ವಿಶತಕ ಬಾರಿಸಿದ ಸಾಹಸಿ ಅಮೇಲಿಯಾ ಕೆರ್‌ ಭಾರತದೆದುರಿನ ದ್ವಿತೀಯ ಮುಖಾಮುಖಿಯಲ್ಲಿ ಅಮೋಘ 119 ರನ್‌ ಹೊಡೆದು ನ್ಯೂಜಿಲ್ಯಾಂಡಿಗೆ 3 ವಿಕೆಟ್‌ ರೋಚಕ ಗೆಲುವು ತಂದಿತ್ತಿದ್ದಾರೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಕಿವೀಸ್‌ 2-0 ಮುನ್ನಡೆ ಸಾಧಿಸಿತು.

270 ರನ್‌ ಬಾರಿಸಿದರೆ ನಾವು ಸೇಫ್‌ ಎಂದು ನಾಯಕಿ ಮಿಥಾಲಿ ರಾಜ್‌ ಪಂದ್ಯಕ್ಕೂ ಮುನ್ನ ಹೇಳಿದ್ದರು. ಅದರಂತೆ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ 6 ವಿಕೆಟಿಗೆ ಸರಿಯಾಗಿ 270 ರನ್‌ ರಾಶಿ ಹಾಕಿತು. ಆದರೆ ಇದನ್ನು ಉಳಿಸಿಕೊಳ್ಳುವಲ್ಲಿ ಮಾತ್ರ ವಿಫಲವಾಯಿತು. ನ್ಯೂಜಿಲ್ಯಾಂಡ್‌ 49 ಓವರ್‌ಗಳಲ್ಲಿ 7 ವಿಕೆಟಿಗೆ 273 ರನ್‌ ಬಾರಿಸಿ ಜಯ ಸಾಧಿಸಿತು.

ಇದರಲ್ಲಿ ವನ್‌ಡೌನ್‌ ಆಟಗಾರ್ತಿ ಅಮೇಲಿಯಾ ಕೆರ್‌ ಕೊಡುಗೆ ಅಜೇಯ 119 ರನ್‌. ಇದು ಅವರ 2ನೇ ಶತಕ. 135 ಎಸೆತ ನಿಭಾಯಿಸಿದ ಕೆರ್‌ 7 ಬೌಂಡರಿ ಹೊಡೆದರು. ಅವರಿಗೆ ಮ್ಯಾಡ್ಡಿ ಗ್ರೀನ್‌ (52) ಉತ್ತಮ ಬೆಂಬಲ ನೀಡಿದರು. ಈ ಜೋಡಿ 4ನೇ ವಿಕೆಟಿಗೆ 128 ರನ್‌ ಪೇರಿಸಿ ಭಾರತದ ಗೆಲುವಿನ ಯೋಜನೆಯನ್ನು ವಿಫಲಗೊಳಿಸಿತು.

ಇದನ್ನೂ ಓದಿ:ಐಪಿಎಲ್‌ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ಥಾನ ಲೀಗ್‌ ತೊರೆದ ಹೇಲ್ಸ್‌

ಭಾರತದ ಬ್ಯಾಟಿಂಗ್‌ ಅಮೋಘವಾಗಿಯೇ ಇತ್ತು. ಆರಂಭಿಕರಾದ ಎಸ್‌. ಮೇಘನಾ 49, ಶಫಾಲಿ ವರ್ಮ 24, ಯಾಸ್ತಿಕಾ ಭಾಟಿಯಾ 31 ರನ್‌ ಹೊಡೆದರು. ನಾಯಕಿ ಮಿಥಾಲಿ ರಾಜ್‌ (ಅಜೇಯ 66) ಮತ್ತು ಕೀಪರ್‌ ರಿಚಾ ಘೋಷ್‌ (65) 4ನೇ ವಿಕೆಟಿಗೆ 124 ರನ್‌ ರಾಶಿ ಹಾಕಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ-6 ವಿಕೆಟಿಗೆ 270 (ಮಿಥಾಲಿ 66, ರಿಚಾ 65, ಮೇಘನಾ 49, ಡಿವೈನ್‌ 42ಕ್ಕೆ 2). ನ್ಯೂಜಿಲ್ಯಾಂಡ್‌-49 ಓವರ್‌ಗಳಲ್ಲಿ 7 ವಿಕೆಟಿಗೆ 273 (ಕೆರ್‌ ಔಟಾಗದೆ 119, ಗ್ರೀನ್‌ 52, ಡಿವೈನ್‌ 33, ದೀಪ್ತಿ 52ಕ್ಕೆ 4). ಪಂದ್ಯಶ್ರೇಷ್ಠ: ಅಮೇಲಿಯಾ ಕೆರ್‌.

ಟಾಪ್ ನ್ಯೂಸ್

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.