ಬೆಂಗಳೂರು ಚಿತ್ರೋತ್ಸವ : ಹಲವಾರು ವೈವಿಧ್ಯ-ದೇಶೀಯ ಚಿತ್ರ ಸೀಸನ್‌ನ ಕೊನೇ ಚಿತ್ರೋತ್ಸವ

ಈ ಬಾರಿಯ ಮತ್ತೊಂದು ವಿಶೇಷ ಹಾಗೂ ಬೆಳವಣಿಗೆಯಂದರೆ, ಬಿಫೆಸ್ ಸ್ಕ್ರಿಪ್ಟ್‌ ಲ್ಯಾಬ್‌.

Team Udayavani, Feb 26, 2020, 1:12 PM IST

vidya-shankar

ಉದಯವಾಣಿ ಪ್ರತಿನಿಧಿಯಿಂದ ಬೆಂಗಳೂರು ಫೆ. 26 : ಐಟಿ ರಾಜಧಾನಿ ಬೆಂಗಳೂರು 12 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಜ್ಜಾಗಿದೆ. ಇಂದು (ಬುಧವಾರ) ಚಾಲನೆಗೊಳ್ಳುವ ಚಿತ್ರೋತ್ಸವ ಮಾ. 4 ರವರೆಗೂ ನಡೆಯಲಿದೆ. ಈಗಾಗಲೇ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಈ ಚಿತ್ರೋತ್ಸವ ದೇಶೀಯ ಚಿತ್ರ ಸೀಸನ್‌ನ ಕೊನೇ ಚಿತ್ರೋತ್ಸವ.

ಯಶವಂತಪುರ ಬಳಿಯ ಒರಿಯಾನ್‌ ಮಾಲ್‌, ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ, ರಾಜಾಜಿನಗರದ ನವರಂಗ್‌ ಥಿಯೇಟರ್‌ ಹಾಗೂ ಡಾ. ರಾಜ್‌ ಭವನಕ್ಕೆ ವಿಸ್ತರಣೆಗೊಂಡಿರುವುದು ವಿಶೇಷ. ಸುಮಾರು 60 ದೇಶಗಳ 200 ಕ್ಕೂ ಹೆಚ್ಚು ಚಲನಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಿದ್ಧತೆ ಕುರಿತು ವಿವರಿಸಿದ ಚಿತ್ರೋತ್ಸವ ಕಲಾ ನಿರ್ದೇಶಕ ಎನ್‌। ವಿದ್ಯಾಶಂಕರ್‌, ‘ಪ್ರತಿನಿಧಿಗಳು ಹಾಗೂ ಸಿನಿಮಾ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳೂ ಸೇರಿದಂತೆ ಸುಮಾರು 10 ಸಾವಿರ ಮಂದಿ ಈ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಸಂಬಂಧ ಪೂರ್ವ ಸಿದ್ಧತೆ ಮುಗಿದಿದೆ’ ಎಂದು ಉದಯವಾಣಿಗೆ ತಿಳಿಸಿದ್ದಾರೆ.

ಈ ಬಾರಿಯ ಉತ್ಸವದ ಥೀಮ್ ‘ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಿನಿಮಾ ‘. ಹಾಗಾಗಿ ಈ ಥೀಮ್ ನ್ನು ಚಿತ್ರಿಸುವ ಹಾಗೂ ಆ ಕುರಿತು ಹೇಳುವಂಥ ಹಲವು ಚಿತ್ರಗಳಿಗೆ ಪ್ರಾಮುಖ್ಯ ನೀಡಲಾಗಿದೆ. ವಿವಿಧ ವಿಭಾಗಗಳಲ್ಲಿ ಭಾರತೀಯ ಪಾರಂಪರಿಕ ಸಂಗೀತ ಪ್ರಧಾನ ಚಿತ್ರಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ.

ಕನ್ನಡದ ಸಂಧ್ಯಾರಾಗ, ಹಂಸಗೀತೆ, ಶ್ರೀ ಪುರಂದರ ದಾಸರು, ಮಲಯ ಮಾರುತ, ವಾಣಿ ಸೇರಿದಂತೆ ಹಿಂದಿಯ ತಾನ್‌ಸೇನ್‌. ಬೈಜು ಬಾವ್ರಾ, ತೆಲುಗಿನ ಶಂಕರಾಭರಣಂ, ಮರಾಠಿಯ ಸಂತ ತುಕಾರಾಂ, ತೆಲುಗಿನ ತ್ಯಾಗಯ್ಯ, ತಮಿಳಿನ ಮೀರಾ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು ವಿದ್ಯಾಶಂಕರ್‌.

ಈ ಬಾರಿಯ ಮತ್ತೊಂದು ವಿಶೇಷ ಹಾಗೂ ಬೆಳವಣಿಗೆಯಂದರೆ, ಬಿಫೆಸ್ ಸ್ಕ್ರಿಪ್ಟ್‌ ಲ್ಯಾಬ್‌. ಎರಡು ವರ್ಷದಿಂದ ಈ ಸ್ಕ್ರಿಪ್ಟ್‌ ಲ್ಯಾಬ್‌ ಮಾಡುತ್ತಿದ್ದೆವು. ಇದರಲ್ಲಿ ಹೆಸರಾಂತ ಸಿನಿಮಾ ನಿರ್ದೇಶಕರು ಹೊಸಬರಿಗೆ ಸ್ಕ್ರಿಪ್ಟ್‌ ಇತ್ಯಾದಿ ಕುರಿತು ಹೇಳುತ್ತಿದ್ದರು. ಹೀಗೆ ತರಬೇತಿಯಲ್ಲಿ ಪಾಲ್ಗೊಂಡ ಐವರು ಈಗ ಸ್ಕ್ರಿಪ್ಟ್ ರಚಿಸಿದ್ದಾರೆ. ಅದರ ಕುರಿತು ಚರ್ಚೆ ಹಾಗೂ ಮಾರ್ಗದರ್ಶನ ಈ ಲ್ಯಾಬ್‌ನಲ್ಲಿ ನಡೆಯಲಿದೆ ಎಂಬುದು ವಿದ್ಯಾಶಂಕರ್‌ ರ ವಿವರಣೆ.

ಈ ಚಿತ್ರೋತ್ಸವದಲ್ಲಿ ಕ್ಲಾಸಿಕ್ ಚಿತ್ರಗಳ ಮರು ವೀಕ್ಷಣೆ ಮತ್ತೊಂದು ವಿಶೇಷ. ಬೈಸಿಕಲ್‌ ಥೀವ್ಸ್‌ನಿಂದ ಹಿಡಿದು ದಿ ಜನರಲ್ ಇತ್ಯಾದಿ ಚಿತ್ರಗಳಿವೆ. ಹಲವಾರು ವಿಶ್ವ ಸಿನಿಮಾಗಳ ಭಾರತೀಯ ಪ್ರೀಮಿಯರ್‌ ಈ ಚಿತ್ರೋತ್ಸವದಲ್ಲಾಗುತ್ತಿದೆ. ಅಕಿರಾ ಕುರಸೋವಾ ಸೇರಿದಂತೆ ಹಲವರ ಚಿತ್ರಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತಿದೆ.

ಮಾಸ್ಟರ್‌ ಕ್ಲಾಸಸ್‌, ವಿಚಾರ ಸಂಕಿರಣ ಚಿತ್ರೋತ್ಸವದ ಭಾಗವಾಗಿದೆ. ಸ್ಪರ್ಧೆಗಳ ಪೈಕಿ ಏಷ್ಯನ್ ಚಲನಚಿತ್ರ ವಿಭಾಗ, ಚಿತ್ರ ಭಾರತಿ ಹಾಗೂ ಕನ್ನಡ ಸಿನಿಮಾಗಳ ವಿಭಾಗದಲ್ಲಿ ನಡೆಯಲಿದೆ.

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DIRECTORS-FILM-BAZAR

ಡೈರೆಕ್ಟರ‍್ಸ್‌ ಫಿಲಂ ಬಜಾರ್‌ಗೆ ಚಿತ್ರೋತ್ಸವದಲ್ಲಿ ಮೆಚ್ಚುಗೆ

Anant-Nag

ಅನಂತ್‌ನಾಗ್‌ “ಮಿಲಿಟರಿ’ ಕನಸು

film-bazaar

ಫಿಲಂ ಬಜಾರ್‌ಗೆ ಮೆಚ್ಚುಗೆ

Illiralare-2-3

ಹೊಸ ಚಿತ್ರದ ಹಲವು ದೃಶ್ಯಗಳು ನಮ್ಮನ್ನು ಕಾಡುತ್ತವೆ : ಇಟಾಲೋ ಸ್ಪಿನೆಲಿ

talaq

ಅಸಹಾಯಕ ಮಹಿಳೆಯ ಮೌಲ್ಯಯುತ ಚಿತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.