ಗೋ ಅಕ್ರಮ ಸಾಗಾಟ ಪತ್ತೆ: ಜಾನುವಾರು ರಕ್ಷಣೆ, ಆರೋಪಿ ಬಂಧನ
Team Udayavani, Apr 21, 2023, 6:10 AM IST
ಬಂಟ್ವಾಳ: ಗೋ ಅಕ್ರಮ ಸಾಗಾಟದ ಕುರಿತು ಖಚಿತ ಮಾಹಿತಿ ಪಡೆದ ಬಂಟ್ವಾಳ ಡಿವೈಎಸ್ಪಿ ನೇತೃತ್ವದ ತಂಡ ಬುಧವಾರ ರಾತ್ರಿ ಬಿ.ಸಿ. ರೋಡಿನ ನಾರಾಯಣ ಗುರು ವೃತ್ತದ ಬಳಿ ವಾಹನವೊಂದನ್ನು ತಡೆದು ವಿಚಾರ ನಡೆಸಿದಾಗ ಗೋಸಾಗಾಟ ಬೆಳಕಿಗೆ ಬಂದಿದ್ದು, ವಾಹನ ಸಹಿತ ಆರೋಪಿಯನ್ನು ಬಂಧಿಸಿ, ಎರಡು ಜಾನುವಾರುಗಳನ್ನು ರಕ್ಷಿಸಲಾಗಿದೆ.
ಸಜೀಪಮೂಡ ಕಾರಾಜೆ ನಿವಾಸಿ ಪ್ರದೀಪ್ ಸಿಕ್ವೇರ ಬಂಧಿತ ಆರೋಪಿ. ಆತ ಚಲಾಯಿಸುತ್ತಿದ್ದ ಪಿಕಪ್ನಲ್ಲಿ ಎರಡು ಜಾನುವಾರುಗಳಿದ್ದು, ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.
ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಟ್ ನೇತೃತ್ವದ ವಿಶೇಷ ಪತ್ತೆ ತಂಡ ಬಂಟ್ವಾಳ ನಗರ ಇನ್ಸ್ಪೆಕ್ಟರ್ ವಿವೇಕಾನಂದ ಅವರ ಸೂಚನೆಯಂತೆ ಪಿಎಸ್ಐ ರಾಮಕೃಷ್ಣ, ಎಚ್.ಸಿ.ಗಳಾದ ಮನೋಹರ, ಜಯಕುಮಾರ್, ಪಿಸಿಗಳಾದ ಜಮೀರ್ ಮತ್ತು ರಂಗನಾಥ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.