ಅಧಿವೇಶನದ ನಂತರ ಬಿಎಸ್ ವೈ ವಿದೇಶ ಪ್ರವಾಸ
Team Udayavani, Dec 22, 2021, 9:13 PM IST
ಬೆಳಗಾವಿ : ಬೆಳಗಾವಿ ಅಧಿವೇಶ ಮುಗಿದ ನಂತರ ಮಾಜಿ ಸಿಎಂ ಯಡಿಯೂರಪ್ಪ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.
ಇದೇ ತಿಂಗಳ 24 ರಂದು ಬೆಳಿಗ್ಗೆ ದುಬೈಗೆ ಹೊರಡಲಿರುವ ಅವರು ಮೂರು ದಿನ ದುಬೈ ಪ್ರವಾಸ ಕೈಗೊಳ್ಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ದುಬೈ ಕನ್ನಡ ಸಂಘದ ಆಹ್ವಾನದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದುಬೈಗೆ ಪ್ರವಾಸ ತೆರಳುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಯಡಿಯೂರಪ್ಪ ಬುಧವಾರ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿದ್ದಾರೆ.
ವಿದೇಶಕ್ಕೆ ತೆರಳಲು ಆರ್ಟಿಪಿಸಿಆರ್ ಪರೀಕ್ಷೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ.
ಇದನ್ನೂ ಓದಿ : “ರಾಖಿ ಸಾವಂತ್ ಜತೆಗಿನ ವಿವಾಹ ಹೆತ್ತವರಿಗೆ ಗೊತ್ತಿಲ್ಲ’: ಪತಿ ರಿತೇಶ್ ಸಿಂಗ್ ಬಾಂಬ್