ತನ್ನ ಮಗನನ್ನು ಸರಕಾರಿ ಶಾಲೆಗೆ ಸೇರಿಸಿ ಮಾದರಿಯಾದ ಪ್ರಧಾನ ಸಿವಿಲ್ ನ್ಯಾಯಾಧೀಶರು
Team Udayavani, Dec 22, 2021, 9:12 PM IST
ಕುಷ್ಟಗಿ: ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ ಅವರ ಮಗ ಶ್ರೀನಿವಾಸ ನನ್ನು ಇಲ್ಲಿನ ಇಂದಿರಾ ನಗರದ ಅಂಗನವಾಡಿ ಕೇಂದ್ರಕ್ಕೆ ಹೆಸರು ದಾಖಲಿಸುವ ಮೂಲಕ ಮಾದರಿಯಾಗಿದ್ದಾರೆ.
ಸರಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಸಡ್ಡೆ ವ್ಯಕ್ತಪಡಿಸುವ ಇಂದಿನ ದಿನಮಾನಗಳಲ್ಲಿ ಜನಪ್ರತಿನಿಧಿಗಳು, ಸರ್ಕಾರಿ ಸೇವೆಯಲ್ಲಿರುವವರೇ ಎಷ್ಟೇ ಹಣ ಖರ್ಚಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಸರ್ವೆ ಸಾಮಾನ್ಯ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣದವರೆಗೂ ಖಾಸಗಿ ಶಾಲೆಯಲ್ಲಾದರೆ ಉತ್ತಮ ಶಿಕ್ಷಣ ಸಿಗಲಿದೆ ಎನ್ನುವ ಭ್ರಮೆಯಲ್ಲಿರುವವರಿಗೆ ಕುಷ್ಟಗಿಯ ನ್ಯಾಯಾಧೀಶರ ನಡೆ ನೈತಿಕತೆ ಪ್ರಶ್ನಿಸುವಂತಿದೆ.
ಪಟ್ಟಣದ 4ನೇ ವಾರ್ಡನ 15ನೇ ಅಂಗನವಾಡಿ ಕೇಂದ್ರದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ತಳವಾರ ಅವರ ಮಗನಿಗೆ ಶ್ರೀನಿವಾಸ 3ವರ್ಷ 10 ತಿಂಗಳಾಗಿದ್ದರಿಂದ ಹೆಸರು ದಾಖಲಿಸಿದರು. ಬುಧವಾರ ಬೆಳಗ್ಗೆ ನ್ಯಾಯಾಧಿಶರ ಮಗನನ್ನು ಅಂಗನವಾಡಿ ಕಾರ್ಯಕರ್ತೆ ಸುನೀತಾ ಅಬ್ಬಿಗೇರಿ, ಸಹಾಯಕಿ ದುರಗಮ್ಮ ಆರತಿ ಬೆಳಗಿ ಸ್ವಾಗತಿಸಿಕೊಳ್ಳಲಾಯಿತು.
ನ್ಯಾಯಾಧೀಶರ ಮಗ ನಮ್ಮ ಅಂಗನವಾಡಿ ಕೇಂದ್ರ ಸೇರಿಸಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ. ನ್ಯಾಯಾಧೀಶರ ಈ ನಡೆಯಿಂದ ನಮ್ಮ ಅಂಗನವಾಡಿ ಕೇಂದ್ರಗಳಿಗೆ ವಿಶ್ವಾಸಾರ್ಹತೆ ಹೆಚ್ಚಿದ್ದು ಸಂತಸವಾಗಿದೆ ಎಂದು ಸಿಡಿಪಿಓ ಅಮರೇಶ ಹಾವಿನಾಳ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!