ಚಾಮರಾಜನಗರ ಜಿಲ್ಲೆಯಲ್ಲಿ 36 ಹೊಸ ಪ್ರಕರಣಗಳು ದೃಢ! ಕೋವಿಡ್ ಅಲ್ಲದ ಕಾರಣದಿಂದ ವೃದ್ಧ ಸಾವು
ಕೋವಿಡ್ ಅಲ್ಲದ ಕಾರಣದಿಂದ 80 ವರ್ಷದ ವೃದ್ಧ ಸಾವು
Team Udayavani, Jul 21, 2020, 6:56 PM IST
ಚಾಮರಾಜನಗರ: ಕೋವಿಡ್ ದೃಢೀಕೃತವಾಗಿದ್ದರೂ, ಕೋವಿಡ್ ಅಲ್ಲದ (ಪಾರ್ಶ್ವವಾಯು) ಕಾರಣದಿಂದ ಓರ್ವ ವೃದ್ಧರು ಜಿಲ್ಲೆಯಲ್ಲಿಂದು ಮೃತಪಟ್ಟಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಇಂದು 36 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು 382 ಪ್ರಕರಣಗಳಾಗಿದ್ದು, 210 ಮಂದಿ ಬಿಡುಗಡೆಯಾಗಿದ್ದಾರೆ. 167 ಸಕ್ರಿಯ ಪ್ರಕರಣಗಳಿವೆ.
ಯಳಂದೂರು ತಾಲೂಕಿನ 80 ವರ್ಷದ ವೃದ್ಧ ಮೃತಪಟ್ಟವರು. ಇವರು ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದರು. ಸೋಮವಾರ ರಾತ್ರಿ ಮೃತಪಟ್ಟರು. ಮರಣದ ಬಳಿಕ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ. ಪಾಸಿಟಿವ್ ಇದ್ದರೂ ಸಾವಿಗೆ ಕೋವಿಡ್ ಕಾರಣವಲ್ಲ ಎಂದು ಪರಿಗಣಿಸಿ, ಈ ಪ್ರಕರಣವನ್ನು ಕೋವಿಡೇತರ ಕಾರಣದಿಂದ ಸಂಭವಿಸಿದ ಸಾವು ಎಂದು ನಮೂದಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್ನಿಂದ 4 ಜನರು ಹಾಗೂ ಕೋವಿಡೇತರ ಕಾರಣದಿಂದ ಓರ್ವರು ಮೃತಪಟ್ಟಿದ್ದಾರೆ.
ಈ ವೃದ್ಧರು ಮಾಂಬಳ್ಳಿಯಲ್ಲಿ ಬಫರ್ಜೋನ್ ನಲ್ಲಿದ್ದರು. ಇದರಿಂದ ಸೋಂಕು ತಗುಲಿರಬಹುದೆಂದು ಅಂದಾಜಿಸಲಾಗಿದೆ. ಮೃತರ ಅಂತ್ಯಕ್ರಿಯೆಯನ್ನು ಅವರ ತೋಟದಲ್ಲಿ ಪಿಎಫ್ಐ ಕಾರ್ಯಕರ್ತರು ಜಿಲ್ಲಾಡಳಿತದ ಮಾರ್ಗಸೂಚಿಯ ಪ್ರಕಾರ ನಡೆಸಿದರು.
ಜಿಲ್ಲೆಯಲ್ಲಿ ಇಂದು 11 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು, ಗುಂಡ್ಲುಪೇಟೆ ತಾಲೂಕಿನಿಂದ 12, ಯಳಂದೂರು ತಾಲೂಕಿನಿಂದ 11, ಕೊಳ್ಳೇಗಾಲ ತಾಲೂಕಿನಿಂದ 6, ಚಾಮರಾಜನಗರ ತಾಲೂಕಿನಿಂದ 5 ಹಾಗೂ ಹನೂರು ತಾಲೂಕಿನಿಂದ 02 ಪ್ರಕರಣಗಳು ವರದಿಯಾಗಿವೆ. ಒಟ್ಟು 324 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. 288 ನೆಗೆಟಿವ್ ಬಂದಿವೆ.
ತಾಲೂಕುವಾರು ಇಂದು ದೃಢಪಟ್ಟ ರೋಗಿಗಳ ವಿವರ ಇಂತಿದೆ:
ಗುಂಡ್ಲುಪೇಟೆ ತಾಲೂಕು: 41 ವರ್ಷದ ಪುರುಷ ಹಂಗಳ. 60 ವರ್ಷದ ಪುರುಷ ಬೇರಂಬಾಡಿ. 40 ವರ್ಷದ ಪುರುಷ, 11 ವರ್ಷದ ಬಾಲಕ, ನಾಯಕರಬೀದಿ, ಗುಂಡ್ಲುಪೇಟೆ. 63 ವರ್ಷದ ಮಹಿಳೆ ಬಿ.ಎನ್. ರಸ್ತೆ ಗುಂಡ್ಲುಪೇಟೆ. 24 ವರ್ಷದ ಯುವಕ ತೊಂಡವಾಡಿ. 37 ವರ್ಷದ ಪುರುಷ, 25 ವರ್ಷದ ಯುವತಿ, 20 ವರ್ಷದ ಯುವತಿ, 7 ವರ್ಷದ ಬಾಲಕ, 9 ವರ್ಷದ ಬಾಲಕ ಹಂಗಳ. 24 ವರ್ಷದ ಯುವಕ ಯುವಕ ಸೋಮಹಳ್ಳಿ.
ಯಳಂದೂರು ತಾಲೂಕು: 44 ವರ್ಷದ ಪುರುಷ ಮದ್ದೂರು. 30 ವರ್ಷದ ಯುವಕ ಗೌತಮ ಬಡಾವಣೆ, ಪಟ್ಟಣ. 80 ವರ್ಷದ ವೃದ್ಧ, 33 ವರ್ಷದ ಮಹಿಳೆ, 35 ವರ್ಷದ ಪುರುಷ, 40 ವರ್ಷದ ಮಹಿಳೆ, 19 ವರ್ಷದ ಯುವಕ, 60 ವರ್ಷದ ಪುರುಷ, 50 ವರ್ಷದ ಮಹಿಳೆ, 39 ವರ್ಷದ ಮಹಿಳೆ, 30 ವರ್ಷದ ಮಹಿಳೆ ಎಲ್ಲರೂ ಮಾಂಬಳ್ಳಿ.
ಚಾಮರಾಜನಗರ ತಾಲೂಕು: 34 ವರ್ಷದ ಫಾರ್ಮಾಸಿಸ್ಟ್, ಹೌಸಿಂಗ್ ಬೋರ್ಡ್ ಕಾಲೋನಿ. ಚಾ.ನಗರ. 32 ವರ್ಷದ ಯುವಕ ಮಲ್ಲಯ್ಯನಪುರ, 39 ವರ್ಷದ ಪುರುಷ ರಾಮಸಮುದ್ರ. 60 ವರ್ಷದ ಪುರುಷ ಹುರಳಿನಂಜನಪುರ. 40 ವರ್ಷದ ಪುರುಷ, ಬೇಡರಪುರ.
ಕೊಳ್ಳೇಗಾಲ ತಾಲೂಕು: 25 ವರ್ಷದ ಯುವಕ ದೇವಾಂಗಪೇಟೆ, ಪಟ್ಟಣ. 26 ವರ್ಷದ ಯುವಕ ಹರಳೆ. 18 ವರ್ಷದ ಯುವಕ ಬಿವಿಎಸ್ ಕ್ವಾರ್ಟರ್ಸ್, ಪಟ್ಟಣ. 49 ವರ್ಷದ ಪುರುಷ ಚಿಕ್ಕನಾಯಕರ ಬೀದಿ. 62 ವರ್ಷದ ಪುರುಷ ಈದ್ಗಾ ಮೊಹಲ್ಲಾ ಪಟ್ಟಣ. 43 ವರ್ಷದ ಪುರುಷ ದಕ್ಷಿಣ ಬಡಾವಣೆ, ಪಟ್ಟಣ.
ಹನೂರು ತಾಲೂಕು: 24 ವರ್ಷದ ಯುವಕ ಮಹದೇಶ್ವರ ಬೆಟ್ಟ. 32 ವರ್ಷದ ಯುವಕ ಗೆಜ್ಜಲನತ್ತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ