40 ಲಕ್ಷ ಕೊಟ್ಟರೆ ಕೋಟಿ ನೀಡುವುದಾಗಿ ನಂಬಿಸಿ 35 ಲಕ್ಷ ದೋಚಿದರು!


Team Udayavani, Feb 12, 2022, 10:34 AM IST

40 ಲಕ್ಷ ಕೊಟ್ಟರೆ ಕೋಟಿ ನೀಡುವುದಾಗಿ ನಂಬಿಸಿ 35 ಲಕ್ಷ ದೋಚಿದರು!

ಚಾಮರಾಜನಗರ/ಕೊಳ್ಳೇಗಾಲ : 40 ಲಕ್ಷ ರೂ. ನೀಡಿದರೆ 1 ಕೋಟಿ ರೂ. ನೀಡುವುದಾಗಿ ನಂಬಿಸಿ ತಮ್ಮಿಂದ 35 ಲಕ್ಷ ರೂ. ಪಡೆದು ಪರಾರಿಯಾಗಿದ್ದಾರೆ ಎಂದು ಖಾಸಗಿ ಆಸ್ಪತ್ರೆಯ
ಮ್ಯಾನೇಜಿಂಗ್‌ ಡೈರೆಕ್ಟರ್‌ ಅವರು ನಾಲ್ವರ ವಿರುದ್ಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಮೈಸೂರಿನ ಪಿನಿಕಲ್‌ ಆಸ್ಪತೆ ಮ್ಯಾನೇಜಿಂಗ್‌ ಡೈರೆಕ್ಟರ್‌ ಶಂಕರ್‌ ( ಮೂಲ ಸ್ಥಳ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಎಲದಳ್ಳಿ) ಎಂಬುವರು, ಶ್ರೀರಂಗಪಟ್ಟಣದ ಮೂಷಾ, ಮತೀನ್‌, ತೆಳ್ಳನೂರು ಗ್ರಾಮದ ಶಿವು ಹಾಗೂ ಕಣ್ಣೂರು ಗ್ರಾಮದ ಮಹೇಶ್‌ ವಿರುದ್ಧ ವಂಚನೆ ಪ್ರಕರಣದ ದೂರು ನೀಡಿದ್ದಾರೆ.

ಶಂಕರ್‌ ಅವರ ಕಾರಿನ ಚಾಲಕ ರಘುವಿಗೆ ಹನೂರು ತಾಲೂಕಿನ ಕಣ್ಣೂರು ಗ್ರಾಮದ ಮಹೇಶ್‌, ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಮದ ಶಿವು ಪರಿಚಯವಾಗಿ, 2021ನೇ
ಅಕ್ಟೋಬರ್‌ನಲ್ಲಿ ಮತೀನ್‌ ಎಂಬ ವ್ಯಕ್ತಿ ಪರಿಚಯವಿದ್ದು, ಆತನಿಗೆ 40 ಲಕ್ಷ ರೂ. ನೀಡಿದರೆ, ಅದರ ಬದಲಿಗೆ 1 ಕೋಟಿ ನೀಡುತ್ತಾರೆ ಎಂದು ತಿಳಿಸಿದರು. ಇದನ್ನು ನಂಬಿ ನಾವು ಹಣ ನೀಡಿದೆವು ಎಂದು ದೂರುದಾರರು ತಿಳಿಸಿದ್ದಾರೆ.

ದೂರಿನ ಸಾರಾಂಶ ಇಂತಿದೆ: 2021ರ ಡಿಸೆಂಬರ್‌ 7 ರಂದು ಶ್ರೀರಂಗಪಟ್ಟಣಕ್ಕೆ ಹೋಗಿ ಮೂಷಾ ಮತ್ತು ಮತಿನ್‌ ಅವರನ್ನು ಭೇಟಿಯಾಗಿ ಅವರಿಗೆ 10 ಲಕ್ಷ ರೂ. ನೀಡಿದೆವು. ಅವರು 50 ಸಾವಿರ ರೂ. ನೀಡಿ ಇದನ್ನು ಖರ್ಚು ಮಾಡಿ ಎಂದು ಹೇಳಿದರು. ನಂತರ ಡಿ. 15ರಂದು ನಾನು ಮತ್ತು ಚಾಲಕ ರಘು 25 ಲಕ್ಷ ರೂ. ಹಣ ಸಿದ್ಧಪಡಿಸಿಕೊಂಡು ಮತಿನ್‌ಗೆ ಫೋನ್‌ ಮಾಡಿದೆವು. ಆತ ಕೊಳ್ಳೇಗಾಲಕ್ಕೆ ಬರಲು ಸೂಚಿಸಿದ. ಅಲ್ಲಿ ಶಿವು ಮತ್ತು ಮಹೇಶ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ತಮಿಳುನಾಡಿನ ಸತ್ಯಮಂಗಲ ಮಾರ್ಗ ಬಣ್ಣಾರಿ ದೇವಾಲಯಕ್ಕೆ ಬರಲು ತಿಳಿಸಿದ.
ಅಲ್ಲಿಗೆ ಹೋದ ಬಳಿಕ ಒಂದು ದಿನ ಕಾಯಿಸಿ, ಮತ್ತೆ ಮಧುವನಹಳ್ಳಿಗೆ ಬನ್ನಿ ಎಂದ.

ಇದನ್ನೂ ಓದಿ : ಕೋಟ ಶ್ರೀನಿವಾಸ ಪೂಜಾರಿಗೆ ಮತ್ತೆ ಪರಿಷತ್ ಸಭಾನಾಯಕ ಸ್ಥಾನ

ಮಧುವನಹಳ್ಳಿ ಗ್ರಾಮದ ಹೊರವಲಯದಲ್ಲಿ ಕಾರನ್ನು ನಿಲ್ಲಿಸಿಕೊಂಡು ನಿಂತಿದ್ದೆವು. ಎರಡು ಪ್ರತ್ಯೇಕ ಕಾರಿನಲ್ಲಿ ಬಂದ ಮತಿನ್‌ ಹಾಗೂ ಮೂಷಾ ನಮ್ಮಿಂದ 25 ಲಕ್ಷ ರೂ. ಪಡೆದು ಕಾರಿನಲ್ಲಿಟ್ಟರು. ಉಳಿಕೆ 5 ಲಕ್ಷ ರೂ.ಗಳಿಗೆ ಚೆಕ್‌ ಪಡೆದರು. ಆ ಹಣವನ್ನು ಮತಿನ್‌ ತೆಗೆದುಕೊಂಡು ಹೋದ.

ಮೂಷಾ, ಹಣವನ್ನು ಇಲ್ಲಿ ಲೆಕ್ಕ ಹಾಕಲಾಗುವುದಿಲ್ಲ, ಮುಂದೆ ನಿರ್ಜನ ಪ್ರದೇಶಕ್ಕೆ ಬನ್ನಿ ಎಂದು ಕಾರಿನಲ್ಲಿ ಹೋದರು. ನಾವು ಅವರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೆವು. ಆಗ 3 ಮಂದಿ ಪೊಲೀಸ್‌ ಸಮವಸ್ತ್ರದ ಮಾರು ವೇಷದಲ್ಲಿ ಬಂದು, ಮೂಷಾ ಕಾರನ್ನು ಅಡ್ಡಗಟ್ಟಿ, ಬಳಿಕ ನಮ್ಮನ್ನು ಪರಿಶೀಲಿಸುವ ನಾಟಕ ಆಡಿ, ಸ್ಟೇಷನ್‌ಗೆ ನಡೆಯಿರಿ ಎಂದು ಮೂಷಾನ ಕಾರನ್ನು ಹತ್ತಿ ಎಲ್ಲರೂ ಪರಾರಿಯಾದರು. ಬಳಿಕ ಮತಿನ್‌ ಫೋನ್‌ ಮಾಡಿದಾಗ, ಪೊಲೀಸರಿಗೆ ಈ ವಿಚಾರ ಹೇಳಿದರೆ ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ತಡವಾಗಿ ದೂರು ನೀಡುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.