ಕೇರಳ ಚುನಾವಣಾ ಅಖಾಡ: ವಟ್ಟಿಯೂರ್ಕಾವ್ -ಮಾಜಿ ಟಿ.ವಿ. ನಿರೂಪಕಿ ವೀಣಾ ಐಕ್ಯರಂಗದ ಅಭ್ಯರ್ಥಿ
ನಾಯರ್ ಡಿಡಿ ನ್ಯೂಸ್, ಏಷ್ಯಾನೆಟ್ ಪ್ಲಸ್, ಕೇರಳದ ಕೈರಳಿ ಟಿವಿಯಲ್ಲಿ ನಿರೂಪಕಿಯಾಗಿದ್ದರು.
Team Udayavani, Mar 17, 2021, 2:45 PM IST
ಕಾಸರಗೋಡು, ಮಾ.17: ರಾಜ್ಯದಲ್ಲೇ ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಒಂದಾಗಿರುವ ವಟ್ಟಿಯೂರ್ಕಾವ್ನಲ್ಲಿ ಐಕ್ಯರಂಗದ ಅಭ್ಯರ್ಥಿಯಾಗಿ ಪಯ್ಯನ್ನೂರು ನಿವಾಸಿ, ಮಾಜಿ ಟಿ.ವಿ. ನಿರೂಪಕಿ, ವಕೀಲೆ, ಯೂತ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯಾಗಿರುವ ವೀಣಾ ಎಸ್.ನಾಯರ್ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ:ಟೈಮ್ ಮುಖಪುಟದಲ್ಲಿ ತೃತೀಯ ಲಿಂಗಿ ಎಲಿಯಟ್ ಫೋಟೊ : ಹಾಲಿವುಡ್ ತಾರೆಯರ ಸಂಭ್ರಮ
ಐಕ್ಯರಂಗದ ಅಭ್ಯರ್ಥಿಯಾಗಿ ವೀಣಾ ಎಸ್.ನಾಯರ್ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈಕೆ ಡಿಸಿಸಿ ಕಾಸರಗೋಡು ಜಿಲ್ಲಾ ಮಾಜಿ ಅಧ್ಯಕ್ಷ, ಕೆಪಿಸಿಸಿ ಸದಸ್ಯ ಕೆ.ಪಿ.ಕುಂಞಿಕಣ್ಣನ್ ಅವರ ಪುತ್ರ ತಿಲಕ್ ಅವರ ಪತ್ನಿಯಾಗಿದ್ದಾರೆ. ವಟ್ಟಿಯೂರ್ಕಾವ್ನಲ್ಲಿ ಎಡರಂಗದಿಂದ ಹಾಲಿ ಶಾಸಕ ಪಿ.ಪ್ರಶಾಂತ್, ಬಿಜೆಪಿಯಿಂದ ವಿ.ವಿ.ರಾಜೇಶ್ ಸ್ಪರ್ಧಿಸುತ್ತಿದ್ದಾರೆ.
ವಕೀಲರಾಗಿರುವ ವೀಣಾ ನಾಯರ್ ಟಿವಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ನಾಯರ್ ಡಿಡಿ ನ್ಯೂಸ್, ಏಷ್ಯಾನೆಟ್ ಪ್ಲಸ್, ಕೇರಳದ ಕೈರಳಿ ಟಿವಿಯಲ್ಲಿ ನಿರೂಪಕಿಯಾಗಿದ್ದರು.
2015ರಲ್ಲಿ ವೀಣಾ ನಾಯರ್ ವಟ್ಟಿಯೂರ್ಕಾವ್ ಕ್ಷೇತ್ರದ ಸಾಸ್ತಾಮಂಗಲಂ ವಾರ್ಡ್ ನ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಎಲ್ ಡಿಎಫ್ ನ ಬಿಂದು ಶ್ರೀಕುಮಾರ್ ಎದುರು ವೀಣಾ ಪರಾಜಯಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ