ʻಮನೆಗೆ ಬಂದವರಿಗೆ ಚಹಾವನ್ನೂ ನೀಡಬಾರದೇ.?ʼ – ಏಕ್ನಾಥ್ ಶಿಂಧೆ
ಶಿಂಧೆ ನಿವಾಸದ ಚಹಾ ಬಿಲ್ 2. 68 ಕೋಟಿ ದಾಟಿದೆ ಎಂದಿದ್ದ ಅಜಿತ್ ಪವಾರ್
Team Udayavani, Feb 27, 2023, 5:39 PM IST
ಮುಂಬೈ: ಎನ್ಸಿಬಿ ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕ್ನಾಥ್ ಶಿಂಧೆ ಮೇಲೆ ಮಾಡಿದ್ದ ʻದುಬಾರಿ ಚಹಾ ಬಿಲ್ʼ ಆರೋಪಕ್ಕೆ ಮುಖ್ಯಮಂತ್ರಿ ಶಿಂಧೆ ಎದುರೇಟು ನೀಡುತ್ತಾ ʻಮನೆಗೆ ಬಂದವರಿಗೆ ಚಹಾವನ್ನೂ ನೀಡಬಾರದೇ.?ʼ ಎಂದು ಪ್ರಶ್ನಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಶಿಂಧೆ ನಿವಾಸದ ಚಹಾ ಬಿಲ್ 2 ಕೋಟಿ 68 ಲಕ್ಷ ರೂಪಾಯಿ ದಾಟಿದೆ ಎಂದು ಎನ್ಸಿಬಿ ನಾಯಕ ಅಜಿತ್ ಪವಾರ್ ಆರೋಪಿಸಿದ್ದರು.
ಅಜಿತ್ ಪವಾರ್ ಆರೋಪಕ್ಕೆ ಟಕ್ಕರ್ ನೀಡಿರುವ ಶಿಂಧೆ ,ʻಮನೆಗೆ ಬಂದವರಿಗೆ ಆತಿಥ್ಯ ನೀಡುವುದು ನಮ್ಮ ಸಂಪ್ರದಾಯ. ಎಷ್ಟೋ ಮಂದಿ ದೂರದ ಊರುಗಳಿಂದ ನನ್ನ ಭೇಟಿಗೆ ಬರುತ್ತಾರೆ. ಅವರಿಗೆ ಚಹಾ ಮತ್ತು ನೀರು ನೀಡುತ್ತೇವೆ. ಅವಷ್ಟೇ ಬಿಲ್ನಲ್ಲಿ ಸೇರಿದೆʼ ಎಂದು ಹೇಳಿದ್ದಾರೆ.
ʻನನ್ನನ್ನು ಭೇಟಿ ಮಾಡಲು ಬಂದವರಿಗೆ ಚಹಾವನ್ನಷ್ಟೇ ನೀಡುತ್ತೇವೆ ಹೊರತು ಬಿರಿಯಾನಿಯಲ್ಲ. ಉದ್ಧವ್ ಠಾಕ್ರೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ವ್ಯವಸ್ಥೆಗಳೆಲ್ಲವೂ ಆನ್ಲೈನ್ ಮೂಲಕವೇ ನಡೆದಿತ್ತು. ಆದರೂ ಠಾಕ್ರೆ ಇದಕ್ಕಾಗಿ 34 ಲಕ್ಷ ರೂ. ವ್ಯಯಿಸಿದ್ದಾರೆʼ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮೋದಿ- ಶಾ ದೇಶದ ಕೆಲಸ ಮಾಡುವುದು ಬಿಟ್ಟು ಚುನಾವಣಾ ಏಜೆಂಟ್ ಗಳಾಗಿದ್ದಾರೆ: ಸಿದ್ದರಾಮಯ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ