ಕಣ್ಣೂರಿನ ಹೊಟೇಲ್ ಈಗ ಡೀಗೊ ಮರಡೋನಾ ಮ್ಯೂಸಿಯಂ
Team Udayavani, Nov 28, 2020, 6:10 AM IST
ಕಣ್ಣೂರು: ಕೇರಳ, ಗೋವಾ, ಕೋಲ್ಕತಾ… ಇವೆಲ್ಲ ಭಾರತದಲ್ಲಿ ಫುಟ್ಬಾಲ್ ಹುಚ್ಚು ಹತ್ತಿಸಿಕೊಂಡಿರುವ ಸ್ಥಳಗಳು. ಇಲ್ಲಿ ಕ್ರಿಕೆಟಿಗೆ ಅನಂತರದ ಸ್ಥಾನ. ಇಂತಹ ನಗರಗಳು ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಡೀಗೊ ಮರಡೋನಾ ಅವರನ್ನು ದೇವರಂತೆಯೇ ಕಾಣುತ್ತವೆ. ಇಲ್ಲಿ ಕ್ರಿಕೆಟಿಗ ಸಚಿನ್ ಕೂಡ ಎರಡನೇ ದೇವರು!
2012, ಅ. 23ರಂದು ಕೇರಳದ ಕಣ್ಣೂರು ಜಿಲ್ಲೆಯ ಬ್ಲೂನೀಲ್ ಹೊಟೇಲ್ಗೆ ಮರಡೋನಾ ಆಗಮಿಸಿದ್ದರು. ಮೂರು ತಿಂಗಳ ಮುನ್ನವೇ ಹೊಟೇಲ್ನಲ್ಲಿ ಮರಡೋನಾ ಕಾರ್ಯದರ್ಶಿಗಳು ಎಲ್ಲ ವ್ಯವಸ್ಥೆ ಮಾಡಿಸಿದ್ದರೂ ಅತಿಥಿ ಯಾರೆಂದು ಹೇಳಿರಲಿಲ್ಲ. ಕೆಲವೇ ದಿನಗಳಿರುವಾಗ ಇಲ್ಲಿಗೆ ಆಗಮಿಸುತ್ತಿರುವವರು ಮರಡೋನಾ ಎಂದು ಗೊತ್ತಾದಾಗ ಮಾಲಕ ವಿ. ರವೀಂದ್ರನ್ ಅವರಿಗೆ ಸ್ವತಃ ದೇವರನ್ನೇ ಕಾಣುತ್ತಿರುವಷ್ಟು ಆನಂದ! ಕಾರಣ, ಅವರು ಮರಡೋನಾರ ಪರಮಭಕ್ತ.
ಎರಡು ದಿನಗಳ ಕಾಲ ಆ ಹೊಟೇಲ್ನಲ್ಲಿ ಮರಡೋನಾ ಇದ್ದರು. ಆ ವೇಳೆ ಮರಡೋನಾ ಬಳಸಿದ ತಟ್ಟೆ, ಲೋಟ, ಹಾಸಿಗೆ, ಹೊದಿಕೆಗಳು, ಊಟ ಮಾಡಿದ ವೇಳೆ ತಿಂದ ಪ್ರಾನ್ ಎಂಬ ಕಡಲಜೀವಿಯ ಚಿಪ್ಪನ್ನು ಅದೇ ಕೊಠಡಿಯಲ್ಲಿ ಈಗಲೂ ಸಂಗ್ರಹಿಸಿಡಲಾಗಿದೆ. ಮರಡೋನಾ ಭಕ್ತರಿಗೆ ಮಾತ್ರ ಈಗ ಕೊಠಡಿ ನೀಡಲಾಗುತ್ತದೆ. ಸದ್ಯ ಇದೊಂದು ಮ್ಯೂಸಿಯಂ ಆಗಿ ಬದಲಾಗಿದೆ.
ಅಂದು ಮರಡೋನಾ ಹೊಟೇಲ್ನ ಬಾಲ್ಕನಿಗೆ ಬಂದು ಅಭಿಮಾನಿಗಳಿಗೆ ಕಾಣಿಸಿಕೊಂಡಾಗ, ಕೇಳಿಬಂದ ಚಪ್ಪಾಳೆ ಶಬ್ದ ಇನ್ನೂ ರವೀಂದ್ರನ್ ಕಿವಿಯಲ್ಲಿ ಗುಂಯ್ ಗುಡುತ್ತಿದೆಯಂತೆ. ಅಂದು ಅಲ್ಲಿ ಅಷ್ಟು ಜನ ಸೇರಿದ್ದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ