ಮರ ಮಾರಾಟ ಮಾಡಿ ಮಗನ ಸ್ಮಾರಕ ನಿರ್ಮಿಸುವ ಸ್ಥಿತಿ ಬಂದಿದೆ
Team Udayavani, Feb 15, 2020, 10:13 PM IST
ಕುಣಿಗಲ್: ಐಎಎಸ್ ಅಧಿಕಾರಿಯಾಗಿ ನಾಡಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿ, ಬಡ ಜನರಿಗೆ ಆಶ್ರಯವಾಗಿದ್ದ ನನ್ನ ಮಗ ಡಿ.ಕೆ.ರವಿಯ ಸಮಾಧಿ ಹಾಗೂ ಸ್ಮಾರಕವನ್ನು ಮರ ಮಾರಾಟ ಮಾಡಿ ನಿರ್ಮಿಸುವ ಸ್ಥಿತಿ ಬಂದಿದೆ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ.
ಶನಿವಾರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದ ಡಿ.ಕೆ.ರವಿ ಅವರ ಸಮಾಧಿ ಬಳಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಮಗ ತೀರಿಕೊಂಡು ಐದು ವರ್ಷ ಕಳೆದಿದೆ. ಅವನ ಸಮಾಧಿ ನಿರ್ಮಾಣ ಆಗಿಲ್ಲ. ನನ್ನ ಕೈಯಲ್ಲಿ ಬಿಡಿಗಾಸೂ ಇಲ್ಲ. ಹೊಲದಲ್ಲಿ ಬೆಳೆದಿರುವ ಮರಗಳನ್ನು ಮಾರಿ 1.10 ಲಕ್ಷ ರೂ.ಇಟ್ಟುಕೊಂಡಿದ್ದೇನೆ. ಗೋರಿ ಹಾಗೂ ಸ್ಮಾರಕ ನಿರ್ಮಾಣಕ್ಕೆ ಈ ಹಣ ಸಾಕಾಗುವುದಿಲ್ಲ. ತಾವು ಅಲ್ಪ, ಸ್ವಲ್ಪ ಹಣ ಕೊಡುತ್ತೇವೆ ಎಂದು ಕೋಲಾರ ಜಿಲ್ಲೆಯ ಜನ ಹೇಳಿದ್ದಾರೆ. ಇದರ ನಿರ್ಮಾಣದ ವೆಚ್ಚಕ್ಕೆ ಸುಮಾರು 15 ರಿಂದ 20 ಲಕ್ಷ ರೂ.ತಗುಲಲಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ವೈಯಕ್ತಿಕವಾಗಿ ಎರಡು ಲಕ್ಷ ಹಾಗೂ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಒಂದು ಲಕ್ಷ ರೂ.ನೀಡಿದ್ದಾರೆ.
ನನ್ನ ದೊಡ್ಡ ಮಗ ರಮೇಶ ಅಪಘಾತದಲ್ಲಿ ಕೈ ಕಾಲು ಮುರಿದುಕೊಂಡು ಹಾಸಿಗೆ ಹಿಡಿದಿದ್ದಾನೆ. ಮೃತ ಡಿ.ಕೆ.ರವಿ ಅವರಿಗೆ ಸರ್ಕಾರದಿಂದ ಬರುವ ಎಲ್ಲಾ ಹಣವನ್ನು ನಿಮಗೆ ಕೊಡುತ್ತೇವೆ ಎಂದು ನನ್ನ ಸೋಸೆ ಡಿ.ಕೆ.ರವಿ ಹೆಂಡತಿ ಕುಸುಮಾ ಹೇಳಿದ್ದರು. ಆದರೆ, ಒಂದು ನಯಾ ಪೈಸೆ ನಮಗೆ ಕೊಡಲಿಲ್ಲ. ಮಗನ ಹಣವನ್ನೆಲ್ಲಾ ಆಕೆಯೇ ಇಟ್ಟುಕೊಂಡಿದ್ದಾಳೆ. ಫೆ 20ರಂದು ಸ್ಮಾರಕಕ್ಕೆ ಚಾಲನೆ ನೀಡಲಾಗುವುದು. ಸ್ಮಾರಕಕ್ಕೆ ಸಹಾಯ ಮಾಡುವವರು ಕುಣಿಗಲ್ ತಾಲೂಕು ಹುಲಿಯೂರುದುರ್ಗ ಎಸ್ಬಿಐ ಶಾಖೆಯ ಖಾತೆ ನಂಬರ್: 54034196402, ಐಎಫ್ಎಸ್ಸಿ ಕೋಡ್. ಎಸ್ಬಿಐಎನ್0040160ಗೆ ಜಮಾ ಮಾಡಬಹುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ