ಹೈಟಿ ಭೂಕಂಪ: 300ಕ್ಕೂ ಹೆಚ್ಚು ಸಾವು
Team Udayavani, Aug 16, 2021, 7:20 AM IST
ಲೆಸ್ ಕೇಯೆಸ್ (ಹೈಟಿ): ಕೆರೀಬಿಯನ್ ದ್ವೀಪರಾಷ್ಟ್ರ ಹೈಟಿಯಲ್ಲಿ ಶನಿವಾರ ಸಂಭವಿಸಿದ ಭೂಕಂಪದ ಪರಿಣಾಮ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ ಸುಮಾರು 7.2 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಸಾವಿರಾರು ಮನೆ, ಕಟ್ಟಡಗಳು, ಶಾಲೆಗಳು, ಚರ್ಚುಗಳು, ಆಸ್ಪತ್ರೆಗಳು ನೆಲಕ್ಕುರುಳಿವೆ. ಶನಿವಾರದ ಕಂಪನವು 2010ರ ಜನವರಿಯಲ್ಲಿ 2.20 ಲಕ್ಷ ಮಂದಿ ಮೃತಪಟ್ಟ ಭೂಕಂಪಕ್ಕಿಂತಲೂ ಹೆಚ್ಚು ಪ್ರಬಲವಾಗಿತ್ತು ಎನ್ನಲಾಗಿದೆ.
ಭೂಕಂಪದ ತೀವ್ರತೆ ಕನಿಷ್ಠ ಎರಡು ನಗರಗಳಲ್ಲಿ ಹೆಚ್ಚಿದ್ದ ಕಾರಣ ಬಹಳಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಒಟ್ಟು 304 ಮಂದಿ ಮೃತಪಟ್ಟು, 1,800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹೈಟಿಯ ಆಸ್ಪತ್ರೆಗಳೆಲ್ಲ ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ. ಹಲವು ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿವೆ. ವೈದ್ಯಕೀಯ ವಿದ್ಯಾರ್ಥಿಗಳು, ರೋಗಿಗಳು, ವೈದ್ಯರು ಇದ್ದ ಆಸ್ಪತ್ರೆಯ ಕಟ್ಟಡವೂ ಧ್ವಂಸಗೊಂಡಿದೆ.
ಭೂಕಂಪ ಸಂಭವಿಸಿದ್ದೆಲ್ಲಿ?: ಹೈಟಿಯ ಪಶ್ಚಿಮ ದಲ್ಲಿರುವ ಪೆಟಿಟ್ ಟೌಡಿ ನಿಪ್ಪೆಸ್ ಎಂಬ ನಗರದಿಂದ 5 ಮೈಲುಗಳಷ್ಟು ದೂರದಲ್ಲಿ ಭೂಮಿ ಕಂಪಿಸಿತ್ತು. ಪ್ರಬಲ ಭೂಕಂಪ 200 ಮೈಲು ದೂರದ ಜಮೈಕಾದಲ್ಲೂ ಅನುಭವಕ್ಕೆ ಬಂದಿತ್ತು ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೇ ಹೇಳಿದೆ. ಇದಾದ ಬಳಿಕ 5.0 ಮತ್ತು 4.0 ತೀವ್ರತೆಯ 6 ಪಶ್ಚಾತ್ ಕಂಪನಗಳೂ ಸಂಭವಿಸಿವೆ. 2010ರಲ್ಲಿ ಸಂಭವಿಸಿದ್ದ ಹೈಟಿ ಭೂಕಂಪ 7.0 ತೀವ್ರತೆಯದ್ದಾಗಿತ್ತು. ಆ ದುರಂತದಲ್ಲಿ 2.20 ಲಕ್ಷ ಮಂದಿ ಸಾವಿಗೀಡಾಗಿದ್ದರು.
ಸಂಕಷ್ಟಗಳ ಸರಮಾಲೆ
ಕಳೆದ ತಿಂಗಳ ಜು. 7ರಂದು ಬಂಡುಕೋರರು ಅರಮನೆಯ ಒಳಕ್ಕೆ ನುಗ್ಗಿ ಹೈಟಿ ಅಧ್ಯಕ್ಷರನ್ನು ಹತ್ಯೆಗೈದಿದ್ದರು. ಇದರಿಂದ ಅಲ್ಲಿ ರಾಜಕೀಯ ಅಸ್ಥಿರತೆ ಮೂಡಿದೆ. ಇಂಥ ಬಿಕ್ಕಟ್ಟಿನ ಸಮಯದಲ್ಲೇ ಪ್ರಾಕೃತಿಕ ವಿಕೋಪ ಸಂಭವಿಸಿರುವುದು ಹೈಟಿ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸೋಮವಾರ ಅಥವಾ ಮಂಗಳವಾರ ಭಾರೀ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದೂ ಅಲ್ಲಿನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…