
Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ
ಮಾವುತ ಹೇಗಾದರೂ ಮಾಡಿ ಹೊರಡಬೇಕೆಂದು ಬೈಕ್ ಏರಿ ಕುಳಿತುಕೊಳ್ಳುತ್ತಾನೆ.
Team Udayavani, Sep 29, 2023, 3:52 PM IST

ನವದೆಹಲಿ: ಪ್ರಾಣಿಗಳು ಮಾನವನ ಜತೆ ಉತ್ತಮ ಬಾಂಧವ್ಯ ಹೊಂದಿರುವ ಘಟನೆ ಬಗ್ಗೆ ಓದಿರುತ್ತೀರಿ. ಅದೇ ರೀತಿ ತನ್ನ ಪ್ರೀತಿಯ ಮಾವುತ ಮತ್ತು ಆನೆಯ ನಡುವಿನ ಬಾಂಧವ್ಯದ ಕುರಿತು ಸೆರೆಯಾದ ಈ ವೈರಲ್ ವಿಡಿಯೋದ ಎಲ್ಲರ ಹೃದಯವನ್ನು ಗೆದ್ದಿದೆ.
ಇದನ್ನೂ ಓದಿ:CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ
ವೈರಲ್ ವಿಡಿಯೋದಲ್ಲಿ ಮಾವುತ ಬೈಕ್ ಏರಿ ಹೊರಡಲು ಸಿದ್ಧವಾಗುತ್ತಿದ್ದಂತೆಯೇ ಆನೆ ಓಡಿ ಬಂದು ತನ್ನ ಸೊಂಡಿಲಿನಿಂದ ಆತನನ್ನು ಮುದ್ದಾಡಿ ಬಿಟ್ಟು ಹೋಗದಂತೆ ತಡೆಯುತ್ತದೆ. ಕೊನೆಗೆ ಮಾವುತ ಬೈಕ್ ನಿಂದ ಕೆಳಗಿಳಿದಾಗ ಆನೆ ಮಾವುತನನ್ನು ಸೊಂಡಿಲಿನಿಂದ ಬಿಗಿದಪ್ಪಿಕೊಳ್ಳುತ್ತದೆ. ಮಾವುತ ಕೂಡಾ ಅದನ್ನು ಪ್ರೀತಿಯಿಂದ ಮೈದಡವಿ, ಸಂತೈಸುತ್ತಾನೆ. ಹಿಂದೆ-ಮುಂದೆ ಓಡಾಡಿ ಆನೆ ಸಂತಸ ವ್ಯಕ್ತಪಡಿಸುತ್ತದೆ.
ಏತನ್ಮಧ್ಯೆ ಮಾವುತ ಹೇಗಾದರೂ ಮಾಡಿ ಹೊರಡಬೇಕೆಂದು ಬೈಕ್ ಏರಿ ಕುಳಿತುಕೊಳ್ಳುತ್ತಾನೆ. ತಕ್ಷಣವೇ ಓಡಿಬಂದ ಆನೆ…ಮಾವುತನನ್ನು ತಡೆದು, ಆತನನ್ನು ಬೈಕ್ ನಿಂದ ಹಿಂದಕ್ಕೆ ಸರಿಸುವ ವಿಡಿಯೋ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.
ಈ ವಿಡಿಯೋವನ್ನು ಐಆರ್ ಎಎಸ್(Indian Railway accounts service) ಅಧಿಕಾರಿ ಅನಂತ್ ರುಪಾನ್ಗುಡಿ ಅವರು ಎಕ್ಸ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಆನೆ ಮತ್ತು ಮಾವುತನ ನಡುವಿನ ಬಾಂಧವ್ಯ ಎಂದು ಕ್ಯಾಪ್ಶನ್ ನೀಡಿದ್ದರು.
\
The bonding between the elephant and it’s caretaker – it won’t just let him go! ❤️ #elephants #bonding @Gannuuprem pic.twitter.com/AOkTmi7ceJ
— Ananth Rupanagudi (@Ananth_IRAS) September 27, 2023
ವಿಡಿಯೋಕ್ಕೆ ನೂರಾರು ಮಂದಿ ಕಮೆಂಟ್ ವ್ಯಕ್ತಪಡಿಸಿದ್ದಾರೆ. ನೋಡಿ ಆನೆ ಎಷ್ಟು ಸೌಮ್ಯವಾಗಿ ವರ್ತಿಸುತ್ತಿದೆ. ತಾನು ಬಲಿಷ್ಠ ಎಂದು ಗೊತ್ತಿದ್ದರೂ ಕೂಡಾ ಮಾವುತನ ಬಗೆಗಿನ ಅದರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bridge: ನಾಲ್ಕು ವರ್ಷವಾದರೂ ದುರಸ್ತಿಯಾಗದ ಸೇತುವೆಗೆ ʼಶ್ರದ್ಧಾಂಜಲಿʼ ಅರ್ಪಿಸಿದ ಗ್ರಾಮಸ್ಥರು

Miracle: ಬೋರ್ ವೆಲ್ ನಲ್ಲಿ ನೀರಿನ ಬದಲು ಹಾಲು… ಪಾತ್ರೆ ಜೊತೆಗೆ ಮುಗಿಬಿದ್ದ ಜನ

UP: ನಿದ್ರೆ ಬರುವ ಪಾಯಸ ಕೊಟ್ಟು ಫಸ್ಟ್ ನೈಟ್ ದಿನವೇ ಚಿನ್ನಾಭರಣದೊಂದಿಗೆ ಪರಾರಿಯಾದ ನವವಧುಗಳು

Drunk driver: ಮದ್ಯದ ಅಮಲಿನಲ್ಲಿ ರೈಲ್ಲೇ ಹಳಿ ಮೇಲೆ ಟ್ರಕ್ ನಿಲ್ಲಿಸಿ ಪರಾರಿಯಾದ ಚಾಲಕ

Watch: ಇಳಿ ವಯಸ್ಸಲ್ಲೂ ಬತ್ತದ ಉತ್ಸಾಹ…97 ವರ್ಷದ ಅಜ್ಜಿಯ ಪ್ಯಾರಾಗ್ಲೈಡಿಂಗ್ ಸಾಹಸ!
MUST WATCH
ಹೊಸ ಸೇರ್ಪಡೆ

Journey: ಸೆಟ್ಟೇರಿದ ಸ್ನೇಹಿತರ ನಡುವಿನ ಸಿನಿಮಾ

Kalaburagi; ಜಾತಿ ಜನಗಣತಿ ವರದಿ ಜಾರಿಯಾಗಲಿ: ಬಿಕೆ ಹರಿಪ್ರಸಾದ್

Aamir Khan: ಮಾಲಿವುಡ್ನ “ಜಯ ಜಯ ಜಯ ಜಯ ಹೇ” ರಿಮೇಕ್ ನಲ್ಲಿ ಆಮಿರ್ ನಟನೆ?

ನಿವೃತ್ತ ಮೆಸ್ಕಾಂ ಇಂಜಿನಿಯರ್ ಮನೆಗೆ ಕನ್ನ… 9ಲಕ್ಷ ರೂ. ಮೌಲ್ಯದ ನಗನಗದು ದೋಚಿದ ಕಳ್ಳರು

ಸೋಲದೇವನಹಳ್ಳಿ: ಲೀಲಾವತಿ ಪಶು ವೈದ್ಯಕೀಯ ಆಸ್ಪತ್ರೆ ಉದ್ಘಾಟಿಸಿದ ಡಿಕೆ ಶಿವಕುಮಾರ್