ಹಟ್ಟಿ ಚಿನ್ನದ ಗಣಿಗೆ 77ರ ಸಂಭ್ರಮ


Team Udayavani, Jul 17, 2023, 7:09 AM IST

HATTI GOLD MINES

ಹಳದಿ ಲೋಹದ ಹೊಳಪಿಗೆ ಎಲ್ಲಿಲ್ಲದ ಬೇಡಿಕೆ. ದೇಶದ ಏಕೈಕ ಚಿನ್ನದ ಗಣಿ ಫ‌ಸಲು ತೆಗೆಯುವ ಕಣಜ ಇರುವುದು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿಯಲ್ಲಿ. ಇಂಥ ಬಂಗಾರದ ಗಣಿಗೆ ಈಗ 77ರ ಸಂಭ್ರಮ. ಕಳೆದ ಏಳೂವರೆ ದಶಕಗಳಿಂದ ನಿರಂತರವಾಗಿ ಚಿನ್ನ ಉತ್ಪಾದಿಸಿಕೊಂಡು ಬರುತ್ತಿರುವ ಈ ಸಂಸ್ಥೆ ನಾಡಿನ ಹೆಮ್ಮೆಯಲ್ಲೊಂದು.

ಆರಂಭವಾಗಿದ್ದು ಯಾವಾಗ?
ಹಟ್ಟಿ ಪಟ್ಟಣದಲ್ಲಿ 1947, ಜು.7ರಂದು ಚಿನ್ನದಗಣಿ ಕಂಪನಿ ಶುರುವಾಯಿತು. 1956ರಲ್ಲಿ ದಿ ಹಟ್ಟಿ ಗೋಲ್ಡ್‌ ಮೈನ್ಸ್‌ ಕಂಪನಿ’ ಎಂದು ಮರು ನಾಮಕರಣ ಮಾಡಲಾಯಿತು. ಜು.8ಕ್ಕೆ 76 ವರ್ಷ ಪೂರೈಸಿ ಮುನ್ನುಗ್ಗುತ್ತಿದೆ. ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿ ಜಾಗತಿಕ ಸ್ವರ್ಣ ಕೌನ್ಸಿಲ್‌ನ ಸದಸ್ಯತ್ವ ಪಡೆದ ದೇಶದ ಮೊದಲ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವುದು ವಿಶೇಷ. ಕೆಜಿಎಫ್ ಅಸ್ತಿತ್ವ ಕಳೆದುಕೊಂಡಿದ್ದರೂ ಹಟ್ಟಿ ಮಾತ್ರ ತನ್ನ ಖದರ್‌ ಇನ್ನೂ ಉಳಿಸಿಕೊಂಡಿದೆ.

3, 200 ಅಡಿಗಳಿಗೂ ಆಳ
ಪ್ರತಿ 100 ಅಡಿ ಆಳದಲ್ಲಿ ಅದಿರು ಅಗೆದು ಸಂಸ್ಕರಣೆ ಮಾಡಿಕೊಂಡು ಬರುತ್ತಿದ್ದು, ಈಗ ಸರಿಸುಮಾರು 3, 200 ಅಡಿ ಆಳಕ್ಕಿಂತ ಹೆಚ್ಚು ಅದಿರು ತೆಗೆಯಲಾಗಿದೆ. ಸರಿಯಾದ ಆಮ್ಲಜನಕ ಸಿಗದ ಭೂಗರ್ಭದಾಳದಲ್ಲಿ ಕಾರ್ಮಿಕರು ಇಳಿದು ಚಿನ್ನ ಸೋಸುವ ಕಾಯಕ ಮಾಡುತ್ತಿದ್ದಾರೆ. ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನ ತೆಗೆಯುವುದು ಸುಲಭದ ಕೆಲಸವೇನಲ್ಲ. ಟನ್‌ಗಟ್ಟಲೇ ಅದಿರು ತೆಗೆದರೆ ಗ್ರಾಂಗಳ ಲೆಕ್ಕದಲ್ಲಿ ಚಿನ್ನ ಸಿಗುತ್ತದೆ.

4, 200 ಕಾರ್ಮಿಕರ ಶ್ರಮ
ಹಟ್ಟಿ ಗಣಿಯಲ್ಲಿ ಈಗ 4 200ಕ್ಕೂ ಅಧಿ ಕ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಹೈದ್ರಾಬಾದ್‌ ನಿಜಾಮರ ಕಾಲದಲ್ಲಿ ಬ್ರಿಟಿಷರಿಂದ ಶುರುವಾದ ಈ ಕಂಪನಿಯಲ್ಲಿ ಮಲ್ಲಪ್ಪ, ಸೆಂಟ್ರಲ್‌ ಹಾಗೂ ವಿಲೆØàಜ್‌ ಎನ್ನುವ ಮೂರು ಶಿಫ್ಟ್‌ಗಳಲ್ಲಿ ಕಾರ್ಮಿಕರು ಚಿನ್ನ ತೆಗೆಯುವಲ್ಲಿ ನಿರತರಾಗಿದ್ದಾರೆ. ಸೆಂಟ್ರಲ್‌ ಶಾಫ್ಟ್‌ ಬ್ರಿಟಿಷರಿಂದ ನಾಮಕರಣಗೊಂಡಿದ್ದು, ಹಟ್ಟಿಯಲ್ಲೇ ಇರುವ ಈ ವಿಭಾಗದಿಂದ 80 ಕಿಮೀ ವ್ಯಾಸದಲ್ಲಿ ಚಿನ್ನ ಸಿಗುತ್ತದೆ. ದೇವದುರ್ಗ ತಾಲೂಕಿನ ಊಟಿ ಹಾಗೂ ಮಾನವಿ ತಾಲೂಕಿನ ಹೀರಾ-ಬುದ್ಧಿನ್ನಿಯಲ್ಲೂ ಅದಿರು ಸಂಸ್ಕರಿಸಲಾಗುತ್ತಿದೆ. ಹಟ್ಟಿಯ ಪಶ್ಚಿಮ ದಿಕ್ಕಿನಲ್ಲಿ ಹಾಗೂ ವಂದಲಿ ಹೊಸೂರಿನಲ್ಲಿ ಡ್ರಿಲ್ಲಿಂಗ್‌ ಮುಗಿಸಿದ್ದು, ಗ್ರೇಡಿಂಗ್‌ ಆಧರಿಸಿ ಗಣಿಗಾರಿಕೆ ವಿಸ್ತರಿಸಲು ಕಂಪನಿ ಯೋಜನೆ ರೂಪಿಸಿದೆ.

ಟಾಪ್ ನ್ಯೂಸ್

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ

BJP 2

UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

Gujjadi: ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

Gujjadi: ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.