ಕೇಬಲ್ ಕಾರ್ ಅಪಘಾತ: ಮೃತರಿಗೆ 25 ಲಕ್ಷ ರೂ. ಪರಿಹಾರ
Team Udayavani, Apr 16, 2022, 9:45 PM IST
ರಾಂಚಿ: ಜಾರ್ಖಂಡ್ನ ದೇವಗಡ ಜಿಲ್ಲೆಯ ತ್ರಿಕೂಟ್ ಹಿಲ್ಸ್ನಲ್ಲಿ ಏ. 12ರಂದು ಸಂಭವಿಸಿದ್ದ ಕೇಬಲ್ ಕಾರ್ ಅಪಘಾತದಲ್ಲಿ ಸಾವಿಗೀಡಾದವರಿಗೆ ಕೇಬಲ್ ಕಾರ್ ಸೌಲಭ್ಯ ಒದಗಿಸಿರುವ ಕಂಪನಿಯಾದ ದಾಮೋದರ್ ರೋಪ್ ವೇಸ್ ತಲಾ 25 ಲಕ್ಷ ರೂ. ನಗದು ಪರಿಹಾರ ಘೋಷಿಸಿದೆ.
ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಅವರ ಆಪ್ತ ಸಂಬಂಧಿಕರಿಗೆ ಈ ಪರಿಹಾರವನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಈಗಾಗಲೇ, ದೇವಗಡ ಜಿಲ್ಲಾಡಳಿತಕ್ಕೆ ಚೆಕ್ಗಳನ್ನು ವಿತರಿಸಲಾಗಿದೆ ಎಂದು ಕಂಪನಿ ಪ್ರಕಟಿಸಿದೆ.
ಮತ್ತೊಂದೆಡೆ, ಜಿಲ್ಲಾಡಳಿತವೂ ಜಾರ್ಖಂಡ್ ಪ್ರಾಕೃತಿಕ ವಿಕೋಪ ನಿರ್ಹವಣಾ ಇಲಾಖೆಗೆ ಪತ್ರ ಬರೆದು ಘಟನೆಯಲ್ಲಿ ಮೃತಪಟ್ಟವರಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೋರಿದೆ.