ಜೂಜು ಅಡ್ಡೆಯ ಮೇಲೆ ಕೋಳಾಲ ಪೋಲೀಸರ ದಾಳಿ : ಮೂವರು ವಶಕ್ಕೆ
Team Udayavani, Dec 11, 2021, 8:42 PM IST
ಕೊರಟಗೆರೆ; ಸರ್ಕಾರಿ ಶಾಲಾ ಅವರಣದಲ್ಲಿ ಇಸ್ಪೀಟು ಜೂಜು ಅಡ್ಡೆಯ ಮೇಲೆ ಕೋಳಾಲ ಪೋಲಿಸ್ ಅಧಿಕಾರಿಗಳ ತಂಡ ದಾಳಿ ಮಾಡಿ ಮೂರು ಜನ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಹೊಸಪಾಳ್ಯ ಗ್ರಾಮದ ಸರ್ಕಾರಿ ಶಾಲಾ ಅವರಣದಲ್ಲಿ ಇಸ್ಪೀಟು ಅಡ್ಡೆಯ ಮೇಲೆ ಕೋಳಾಲ ಪಿಎಸ್ಐ ಮಹಾಲಕ್ಷ್ಮಮ್ಮ ಅವರ ಪೋಲಿಸ್ ತಂಡವು ದಾಳಿ ಮಾಡಿ ಮೂರು ಜನ ಆರೋಪಿಗಳಾದ ಜಗದೀಶ್, ಚಿಕ್ಕರಾಮಯ್ಯ, ನರಸಿಂಹಮೂರ್ತಿ , ಬಂಧಿಸಿ ಪಣಕ್ಕಿಟ್ಟಿದ್ದ 4000 ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಭಂದ ಕೋಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂರು ಆರೋಪಿಗಳನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕುಂದಾಪುರ : ಅನಾರೋಗ್ಯ ಪೀಡಿತ ಬಾಲಕನ ಚಿಕಿತ್ಸೆಗಾಗಿ ಯಕ್ಷ ವೇಷ ಧರಿಸಿ ಧನ ಸಂಗ್ರಹ