ವಿಶ್ವವನ್ನು ಮೂರನೇ ಮಹಾಯುದ್ಧದ ಮೆಟ್ಟಿಲ ಬಳಿ ನಿಲ್ಲಿಸಿದ‌ ಮಾರ್ಷಲ್ ಹಾಗೂ ವಿದೂಷಕ


Team Udayavani, Feb 25, 2022, 5:55 PM IST

1-ere

ಜಲೆನಸ್ಕಿ, ವ್ಲಾಡಿಮಿರ್ ಪುಟಿನ್

ರಷ್ಯಾ ಹಾಗೂ ಉಕ್ರೇನ್ ಮಧ್ಯೆ ನಡೆಯುತ್ತಿರುವ ಜಟಾಪಟಿಯ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ರಸವತ್ತಾದ ಕಥೆಗಳು ಸೃಷ್ಟಿಯಾಗುತ್ತಿದ್ದು, ಒಬ್ಬ ಮಾರ್ಷಲ್ ಆರ್ಟ್ ಪ್ರವೀಣ, ಇನ್ನೊಬ್ಬ ರಂಗಭೂಮಿ ವಿದೂಷಕ ಸೇರಿ ವಿಶ್ವವನ್ನು ಮೂರನೇ ಮಹಾಯುದ್ಧದ ಅಂಚಿಗೆ ತಂದು ನಿಲ್ಲಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ರಷ್ಯಾ ಪ್ರಧಾನಿ ವ್ಲಾಡಿಮಿರ್ ಪುಟಿನ್ ಆರಂಭದಲ್ಲಿ ಮಾರ್ಷಲ್ ಆರ್ಟ್ ಎಕ್ಸಪರ್ಟ್ ಆದರೂ ರಾಜಕೀಯದಲ್ಲಿ ದೃಢವಾದ ಹೆಜ್ಜೆ ಇಡುತ್ತಾ ಬೆಳೆದರೆ‌ ಉಕ್ರೇನ್ ಪ್ರಧಾನಿ ಜಲೆನಸ್ಕಿ ಮೂಲತಃ ರಂಗಭೂಮಿಯ ಹಾಸ್ಯ ಕಲಾವಿದರು. ರಂಗದ ಮೇಲೆ ಪ್ರಧಾನಿ ಪಾತ್ರ ನಿರ್ವಹಿಸಿದ ಈ ವ್ಯಕ್ತಿ ಮುಂದೆ ಉಕ್ರೇನ್ ದೇಶದ ಪ್ರಧಾನಿಯಾಗಿಯೇ ಬೆಳೆದು‌ ನಿಂತರು.

ಯುದ್ಧದ ಹಿನ್ನೆಲೆಯಲ್ಲಿ ಈ ಎರಡೂ ರಾಜಕೀಯ ನಾಯಕರ ವ್ಯಕ್ತಿತ್ವ ಹಾಗೂ ಬೆಳಣಿಗೆಯ ಹಿನ್ನೋಟವನ್ನು ಈಗ ಗಮನಿಸೋಣ….

ಪುಟಿನ್ 1952 ರಲ್ಲಿ ರಷ್ಯಾದಲ್ಲಿ ಜನಿಸಿದರೆ, ಜಲೆನಸ್ಕಿ  1978 ರಲ್ಲ ಉಕ್ರೇನ್ ನಲ್ಲಿ ಹುಟ್ಟಿದರು. ಮಾರ್ಷಲ್ ಆರ್ಟ್ ಪ್ರವೀಣ ಪುಟಿನ್ ಕುಟುಂಬ ಜೋಸೆಫ್ ಸ್ಟ್ಯಾಲಿನ್ ಪರಿವಾರದಲ್ಲಿ ಕೆಲಸ ಮಾಡುತ್ತಿದ್ದರೆ, ಜಲೆನಸ್ಕಿ ಜ್ಯೂ ಸಮುದಾಯದಲ್ಲಿ ಜನಿಸಿದ್ದರು.

– ಪುಟಿನ್ ಹಾಗೂ ಜೆಲೆನಸ್ಕಿ ಇಬ್ಬರೂ ಕಾನೂನು ಪದವಿಧರರು. ಪುಟಿನ್ ಯುಎಸ್ಎಸ್ ಆರ್ ನ ಗುಪ್ತಚರ ಸಂಸ್ಥೆ ಕೆಜಿಬಿಯಲ್ಲಿ ಗುಪ್ತಚರನಾಗಿ ವೃತ್ತಿಗೆ ಸೇರಿದರೆ ಜಲೆನಸ್ಕಿ ರಂಗಭೂಮಿಯತ್ತ ಹೊರಳಿದರು.

1990ರ ವೇಳೆಗೆ ರಷ್ಯಾದ್ಯಂತ ಜಲೆನಸ್ಕಿ ತನ್ನ ರಂಗಪ್ರಯೋಗದಿಂದ ಹೆಸರುವಾಸಿಯಾದ. ತರಲೆ, ವ್ಯಂಗ್ಯ, ಹಾಸ್ಯದಿಂದ ಕೂಡಿರುತ್ತಿದ್ದ ಅವರ ಪ್ರಯೋಗಗಳು ಹೆಸರುವಾಸಿಯಾದವು.

ಆದರೆ 1996 ರ ಹೊತ್ತಿಗೆ ಪುಟಿನ್ ರಾಜಕೀಯವಾಗಿ ರಷ್ಯಾದಲ್ಲಿ ದೃಢ ಹೆಜ್ಜೆ ಇಡಲಾರಂಭಿಸಿದರು. ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ಮೇಯರ್ ಅಗಿ ಸೇವೆ ಸಲ್ಲಿಸಿ ಮಾಸ್ಕೋಗೆ ತೆರಳಿ ಅಂದಿನ ಪ್ರಧಾನಿ ಬೋರಿಸ್ ಯೆಲ್ಸಿನ್ ಬಣ ಸೇರಿ ರಷ್ಯಾದ ಪ್ರಧಾನಿ ಹಂತಕ್ಕೆ ಬೆಳೆದರು.ಆದರೆ ಈ ಅವಧಿಯಲ್ಲಿ ಜಲನೆಸ್ಕಿ ತನ್ನ ರಂಗ ಪ್ರಯೋಗ ಗಳಲ್ಲಿ ಸುಧಾರಣೆ ಮಾಡಿಕೊಳ್ಳುತ್ತಾ ಟಿವಿ ವಾಹಿನಿಗಳ ಜನಪ್ರಿಯ ಕಾಮಿಡಿಯನ್ ಆಗಿ ರೂಪುಗೊಂಡರು.

– 2015ರ ಸುಮಾರಿಗೆ ಉಕ್ರೇನ್ ನಲ್ಲಿ ರಾಜಕೀಯ ಸ್ವರೂಪ ಸಂಪೂರ್ಣವಾಗಿ ಬದಲಾಯಿತು. ಅದು ಈ ಇಬ್ಬರು ನಾಯಕರು ಈಗ ಪರಸ್ಪರ ಮುಖಾಮುಖಿಯಾಗುವ ಸ್ಥಿತಿಗೆ ತಂದು ನಿಲ್ಲಿಸಿದೆ. ೨೦೧೪ರಲ್ಲಿ ರಷ್ಯಾ ಪರ ನಿಲುವು ಹೊಂದಿದ್ದ ಉಕ್ರೇನ್ ಪ್ರಧಾನಿ ವಿಕ್ಟೋರ್ ಪದಚ್ಯುತಗೊಂಡರು . ರಷ್ಯಾ ವಿರೋಧಿ ನಿಲುವು ಉಕ್ರೇನ್ ನಲ್ಲಿ ತೀವ್ರಗೊಂಡಿತು. ಇದೇ ವರ್ಷ ಪುಟಿನ್ ಕ್ರೀಮಿಯಾ ಗೆದ್ದುಕೊಂಡರು.

– ರಷ್ಯಾದ ಈ ದಬ್ಬಾಳಿಕೆ ಖಂಡಿಸಿ ೨೦೧೫ರಲ್ಲಿ ಜಲೆನಸ್ಕಿ ಉಕ್ರೇನ್ ನ ಅತ್ಯಂತ ಜನಪ್ರಿಯ ಟಿವಿ ಕಾರ್ಯಕ್ರಮ ಸರ್ವಂಟ್ ಆಫ್ ದಿ‌‌ ಪೀಪಲ್ ಆರಂಭಿಸಿದರು. ಈ ನಾಟಕದಲ್ಲಿ ಆಕಸ್ಮಿಕವಾಗಿ ಉಕ್ರೇನ್ ಪ್ರಧಾನಿಯಾಗುವ ಶಿಕ್ಷಕನ ಪಾತ್ರವನ್ನು ಜಲೆನಸ್ಕಿ ನಿರ್ವಹಿಸಿದ. ಇದು ಉಕ್ರೇನ್ ನಲ್ಲಿ ಭಾರಿ ಜನಪ್ರಿಯವಾಯಿತು. ಈ ನಾಟಕದಲ್ಲಿ ರಷ್ಯಾ ದುರಾಕ್ರಮಣದಿಂದ ಉಕ್ರೇನ್ ಪಾರು ಮಾಡುವ ಕತೆ ಅಲ್ಲಿನ ಜನತೆಯ ಮೆಚ್ಚುಗೆ ಪಡೆದಿತ್ತು.

2019ರಲ್ಲಿ ಜಲೆನಸ್ಕಿ ಉಕ್ರೇನ್ ನಲ್ಲಿ ಸರ್ವೆಂಟ್ ಆಫ್ ದಿ ಪೀಪಲ್ ಎಂಬ ಹೆಸರಿನ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಉಕ್ರೇನ್ ಜನತೆ ಭಾರಿ ಬಹುಮತದೊಂದಿಗೆ ಈ ಪಕ್ಷವನ್ನು ಗೆಲ್ಲಿಸಿದರು. ಉಕ್ರೇನಿಯನ್ ಅಸ್ಮಿತೆಯನ್ನು ಬಲವಾಗಿ ಪ್ರತಿಪಾದಿಸಿದ ಅವರು ರಾಜಧಾನಿ ಕೀವ್ ನ ಉಚ್ಛಾರಣಾ ಶೈಲಿಯನ್ನೂ ಬದಲಿಸಿದರು.

– ಇದಕ್ಕೆ ಪ್ರತಿಯಾಗಿ ಉಕ್ರೇನ್ ನ ಪಶ್ಚಿಮ ಭಾಗದಲ್ಲಿ ತನ್ನ ನೆಲೆ ಬಲಪಡಿಸಿದ ಪುಟಿನ್ ಬಂಡುಕೋರರಿಗೆ ಪಾಸ್ ಪೋರ್ಟ್ ನೀಡಿ ಅವರ ಹೋರಾಟ ಮಾನ್ಯ ಮಾಡಿದರು .

– ಇದರಿಂದ ಕೆರಳಿದ ಜಲೆನಸ್ಕಿ ನ್ಯಾಟೋ‌ ಪಡೆಯತ್ತ ವಾಲಿದರೆ ಪುಟಿನ್ ಒನ್ ಪೀಪಲ್ ಒನ್ ನೇಶನ್ ವಾದವನ್ನು ಈಗ ಉಕ್ರೇನ್ ಮೇಲೆ‌ ಬಲವಾಗಿ ಯುದ್ಧ ಮುಖೇನ ಹೇರಲಾರಂಭಿಸಿದ್ದಾರೆ.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.