ಏಪ್ರಿಲ್-ಮೇನಲ್ಲೇ ಗರಿಷ್ಠ ಸಾವಿನ ಪ್ರಕರಣ
ಸಕ್ರಿಯ ಸೋಂಕು ಪ್ರಕರಣ 4,08,212ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ 97.36% ಆಗಿದೆ.
Team Udayavani, Jul 26, 2021, 10:00 AM IST
ನವದೆಹಲಿ: ದೇಶದಲ್ಲಿ ಇದುವರೆಗೆ ಕೊರೊನಾದಿಂದ ಸಂಭವಿಸಿದ ಸಾವುಗಳ ಅರ್ಧದಷ್ಟು ಪ್ರಕರಣಗಳು ಏಪ್ರಿಲ್ -ಮೇನಲ್ಲಿಯೇ ದೃಢಪಟ್ಟಿವೆ. ಈ ಬಗ್ಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ವರದಿಯಲ್ಲೇ ಉಲ್ಲೇಖಿಸಲಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ದೆಹಲಿ ರಾಜ್ಯಗಳಿಂದ ಈ ಅವಧಿಯಲ್ಲಿ ದೇಶದಲ್ಲಿ ದೃಢಪಟ್ಟ ಹತ್ತು ಸಾವುಗಳ ಪೈಕಿ 4 ಈ ರಾಜ್ಯಗಳಿಂದಲೇ ವರದಿಯಾಗಿದೆ. ಹೀಗಾಗಿ, ಆ ಎರಡು ತಿಂಗಳು ಎಷ್ಟು ಭಯಾನಕವಾಗಿದ್ದವು ಎಂಬುದನ್ನು ತೋರಿಸಿದೆ. ಮೂರು ರಾಜ್ಯಗಳು ಏಪ್ರಿಲ್-ಮೇನಲ್ಲಿ ಶೇ.41ರಷ್ಟು ಸಾವಿನ ಪ್ರಕರಣಗಳನ್ನು ದಾಖಲಿಸಿವೆ.
2020ರ ಏಪ್ರಿಲ್ ಮತ್ತು 2021ರ ಮೇ ಅವಧಿಯಲ್ಲಿ 3,29,065 ಸೋಂಕಿನಿಂದ ಸಾವು ಉಂಟಾಗಿದೆ. 1,66,632 ಸಾವಿನ ಪ್ರಕರಣಗಳು ಈ ಅವಧಿಯಲ್ಲಿಯೇ ದೃಢಪಟ್ಟಿವೆ ಎಂದು ಕೇಂದ್ರ ಹೇಳಿದೆ. ಇದೇ ವೇಳೆ, ಕೇರಳದಲ್ಲಿ ಭಾನುವಾರ ಒಂದೇ ದಿನ 17,466 ಹೊಸ ಪ್ರಕರಣಗಳು ದೃಢಪಟ್ಟಿವೆ. 66 ಮಂದಿ ಸೋಂಕಿನಿಂದ ಸಾವಿ ಗೀಡಾಗಿದ್ದಾರೆ. ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.12 ಆಗಿದೆ. ಜು.24 ರಂದು ಅದು ಶೇ.11.91ಕ್ಕೆ ಇಳಿಕೆಯಾಗಿತ್ತು.
ಇನ್ನೊಂದೆಡೆ, ಶನಿವಾರದಿಂದ ಭಾನುವಾರದ ಅವಧಿಯಲ್ಲಿ ದೇಶದಲ್ಲಿ 39,742 ಸೋಂಕು ಪ್ರಕರಣ ಮತ್ತು 535 ಮಂದಿ ಅಸುನೀಗಿದ್ದಾರೆ. ಸಕ್ರಿಯ ಸೋಂಕು ಪ್ರಕರಣ 4,08,212ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ 97.36% ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ