ನಲಿ-ಕಲಿ ಯೋಜನೆ ಮರು ಪರಾಮರ್ಶೆಗೆ ಸಚಿವ ಸುರೇಶ್ ಕುಮಾರ್ ನಿರ್ದೇಶನ
Team Udayavani, May 13, 2020, 7:23 PM IST
ಬೆಂಗಳೂರು: ನಲಿ-ಕಲಿ ಯೋಜನೆ ಕುರಿತು ಮರುಪರಾಮರ್ಶೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಈ ಕಾರ್ಯಕ್ರಮ ವೈಶಿಷ್ಟ್ಯತೆಯನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಲಿ-ಕಲಿ ಮತ್ತು ಕಲಿ-ನಲಿ ತರಗತಿಗಳು ಅತ್ಯಂತ ವಿಶಿಷ್ಟವಾಗಿದೆ. ಈ ತರಗತಿಗಳ ಮೂಲಕ ಮಕ್ಕಳಿಗೆ ಕಲಿಸುತ್ತಿರುವ ರೀತಿ ಅಪಾರ ಮನ್ನಣೆ ಗಳಿಸಿದೆ. ಒಂದು ರೀತಿಯಿಂದ ನಾವು ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆಯ ಪ್ಲ್ಯಾಗ್ ಶಿಪ್ ಕಾರ್ಯಕ್ರಮಗಳೆಂದರೆ ತಪ್ಪಾಗಲಾರದು ಎಂದರು.
ಆದರೆ, ಕೋವಿಡ್-19 ನಂತರದ ದಿನಗಳಲ್ಲಿ ಈ ನಲಿ-ಕಲಿ ಮತ್ತು ಕಲಿ-ನಲಿ ತರಗತಿಗಳ ಬಗ್ಗೆ ನಾವು ಮರು ಚಿಂತನೆ ಮಾಡಬೇಕಿದೆ. ಸಾಮಾಜಿಕ ಅಂತರ ಇಟ್ಟುಕೊಂಡು ಈ ಕಾರ್ಯಕ್ರಮದ ವೈಶಿಷ್ಟ್ಯತೆಯನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕಿದೆ. ಈ ಕುರಿತು ಇಲಾಖೆ ಸೂಕ್ತ ಪಠ್ಯ ರೂಪಿಸಲು ಅಗತ್ಯ ಕ್ರಮದ ಬಗ್ಗೆ ಹೆಜ್ಜೆ ಇಡಬೇಕು ಎಂದು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.