ಫೋನ್ ಕದ್ದಾಲಿಕೆ ಮಾತ್ರ ಅಲ್ಲ, ಆಪರೇಶನ್ ಕಮಲ ಕೂಡಾ ತನಿಖೆ ಆಗಲಿ: ಖರ್ಗೆ ಆಗ್ರಹ
Team Udayavani, Aug 19, 2019, 8:16 AM IST
ಬೆಂಗಳೂರು: ಕುಮಾರಸ್ವಾಮಿ ಸರಕಾರದಲ್ಲಿ ನಡೆಸಲಾಗಿದೆ ಎಂಬ ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸುವುದು ಉತ್ತಮ ಬೆಳವಣಿಗೆ. ಆದರೆ ಇದರ ಜೊತೆಗೆ ಆಪರೇಶನ್ ಕಮಲ ಪ್ರಕರಣವನ್ನೂ ತನಿಖೆ ನಡೆಸಬೇಕು ಎಂದು ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆ ನಡೆಸಬೇಕೆಂದು ನಾನು ಈ ಮೊದಲೂ ಹೇಳಿದ್ದೆ. ಸಿಬಿಐ ತನಿಖೆ ನಡೆಸಿದರೆ ಉತ್ತಮ. ಆದರೆ ತನಿಖೆ ಏಕಮುಖವಾಗಿ ನಡೆಯಬಾರದು. ನಿಷ್ಪಕ್ಷವಾದ ತನಿಖೆ ನಡೆಯುತ್ತದೆ ಎಂಬ ನಂಬಿಕೆ ಇದೆ ಎಂದು ಅಭಿಪ್ರಾಯ ಪಟ್ಟರು.