ನಾನು ನನ್ನ ಕನಸು: ಬ್ರೇಕ್ ಕೊಡುವ ಸಿನಿಮಾ ʼಓ ಮೈ ಲವ್ʼ
Team Udayavani, Jul 15, 2022, 5:54 PM IST
ಆರಂಭದಿಂದಲೂ ಸದ್ದು ಮಾಡುತ್ತಲೇ ಬರುತ್ತಿರುವ ಶಶಿಕುಮಾರ್ ಪುತ್ರ ಅಕ್ಷಿತ್ ನಾಯಕರಾಗಿ ನಟಿಸಿರುವ “ಓ ಮೈ ಲವ್’ ಚಿತ್ರ ಇಂದು ತೆರೆಕಾಣುತ್ತಿದೆ. ಈ ಮೂಲಕ ಔಟ್ ಅಂಡ್ ಔಟ್ ಲವ್ ಕಂ ಫ್ಯಾಮಿಲಿ ಡ್ರಾಮಾ ತೆರೆ ಮೇಲೆ ಬಂದಂತಾಗುತ್ತದೆ. ಸ್ಮೈಲ್ ಶ್ರೀನು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ, “ಓ ಮೈ ಲವ್’ ಚಿತ್ರಕ್ಕೆ ಜಿ. ರಾಮಾಂಜಿನಿ ಕಥೆ ಬರೆದು, “ಜಿಸಿಬಿ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
ಚಿತ್ರದ ಎಲ್ಲಾ ಹಾಡುಗಳಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿದ್ದು,ಚರಣ್ ಅರ್ಜುನ್ ಸಂಗೀತವಿದೆ. “ಓ ಮೈ ಲವ್’ ಚಿತ್ರದಲ್ಲಿ ನಾಯಕ ಅಕ್ಷಿತ್ ಶಶಿಕುಮಾರ್ ಮತ್ತು ನಾಯಕಿಯಾಗಿ ಕೀರ್ತಿ ಕಲ್ಕೆರೆ ತೆರೆಮೇಲೆ ಜೋಡಿಯಾಗಿ ಅಭಿನಯಿಸಿದ್ದಾರೆ.
“ಸಿನಿಮಾದಲ್ಲಿ ಮನಮುಟ್ಟುವಂಥ ಒಳ್ಳೆಯ ಪಾತ್ರಗಳಿದ್ದು, ಇಡೀ ಚಿತ್ರತಂಡದ ಪ್ರಯತ್ನದಿಂದ ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿ ದೆ ಎನ್ನುವುದು ನಿರ್ದೇಶಕರ ಮಾತು. ಒಂದೇ ಸಿನಿಮಾಕ್ಕೆ ಸೋತು ಸುಣ್ಣ ವಾಗುವ ಈ ಕಾಲದಲ್ಲಿ ಒಂದರ ಹಿಂದೊಂದರಂತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ನಂತರ ದೊಡ್ಡ ದೊಡ್ಡ ಪ್ರಾಜೆಕ್ಟ್ಗೆ ಕೈ ಹಾಕುವ ಯೋಜನೆ ಶ್ರೀನು ಅವರಿಗಿದೆ.
ಚಿತ್ರದ ಬಗ್ಗೆ ಮಾತನಾಡುವ ಶ್ರೀನು, “ಸಾಕಷ್ಟು ವರ್ಷಗಳಿಂದ ಇಂಥದ್ದೊಂದು ಸಿನಿಮಾ ಮಾಡುವ ಕನಸಿತ್ತು. ಓ ಮೈ ಲವ್ ಸಿನಿಮಾ ಮೂಲಕ ಅದು ಕೈಗೂಡಿದೆ. ಇದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಇರುವ ನೀಟ್ ಸಿನಿಮಾ. ಚಿಕ್ಕವರಿಂದ ದೊಡ್ಡವರವರೆಗೂ ಯಾವುದೇ ಮುಜುಗರ ವಿಲ್ಲದೇ ನೋಡಬಹುದಾದ ಸಿನಿಮಾ. ತಾರಾಗಣ, ತಾಂತ್ರಿಕ ಬಳಗ ಸೇರಿದಂತೆ ಎಲ್ಲರಿಗೂ ಬ್ರೇಕ್ ಕೊಡುವಂಥ ತಾಕತ್ತು ಈ ಸಿನಿಮಾಗಿದೆ. ಖಂಡಿತಾ ಇದು ಆಗೇ ಆಗುತ್ತೆ ಎಂಬ ಭರವಸೆಯಿದೆ’ ಅಂತಾರೆ ಸ್ಮೈಲ್ ಶ್ರೀನು.
ಇನ್ನು “ಓ ಮೈ ಲವ್’ ಸಿನಿಮಾ ದಲ್ಲಿ ಬಹುಭಾಷಾ ನಟ ದೇವ ಗಿಲ್ ಖಳನಟನಾಗಿ ಕಾಣಿಸಿ ಕೊಂಡಿದ್ದಾರೆ. ಉಳಿದಂತೆ ಎಸ್. ನಾರಾಯಣ್, ದೇವಗಿಲ್, ಸಾಧು ಕೋಕಿಲ, ಪವಿತ್ರಾ ಲೋಕೇಶ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ