ಪೇಜಾವರ ಶ್ರೀಗಳ ವೃಂದಾವನದ ಮುಂದೆ ಮಂತ್ರ ಪಠಣ: ವಿದ್ಯಾಪೀಠಕ್ಕೆ ಆಗಮಿಸುತ್ತಿರುವ ಭಕ್ತರು
Team Udayavani, Dec 30, 2019, 9:55 AM IST
ಬೆಂಗಳೂರು: ಉಡುಪಿ ಅಷ್ಟಮಠದ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶ ತೀರ್ಥ ಶ್ರೀಪಾದರು ರವಿವಾರ ಉಡುಪಿಯಲ್ಲಿ ಹರಿಪಾದ ಸೇರಿದ್ದಾರೆ. ಅವರ ಇಚ್ಛೆಯಂತೆ ಬೆಂಗಳೂರಿನ ಪುರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳ ಬೃಂದಾವನ ಮಾಡಲಾಗಿದೆ.
ಸೋಮವಾರ ಮುಂಜಾನೆಯಿಂದಲೇ ಭಕ್ತಾದಿಗಳು ಪೂರ್ಣಪ್ರಜ್ಞಾ ವಿದ್ಯಾಪೀಠಕ್ಕೆ ಆಗಮಿಸಿ ಶ್ರೀಗಳ ಬೃಂದಾವನಕ್ಕೆ ನಮಸ್ಕರಿಸುತ್ತಿದ್ದಾರೆ.
ಮುಂಜಾನೆಯಿಂದಲೇ ಶಿಷ್ಯವೃಂದದಿಂದ ಬೃಂದಾವನದ ಬಳಿ ಮಂತ್ರ ಪಠಣ ನಡೆಯುತ್ತಿದೆ.
12 ದಿನಗಳ ನಂತರ ಮಠದ ಕಿರಿಯ ಶ್ರೀಪಾದರಾದ ಶ್ರೀ ವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ಮಹಾ ಸಮಾರಾಧನೆಗ ನಡೆಯಲಿದೆ ಎಂದು ವರದಿಯಾಗಿದೆ.
ಬೃಂದಾವನಸ್ಥರಾದ 48 ದಿನಗಳ ನಂತರ ಬೃಂದಾವನದಲ್ಲಿ ಇರಿಸಿರುವ ಸಾಲಿಗ್ರಾಮ ಪಾತ್ರೆ ಸಿಗುವವರೆಗೆ ಮಣ್ಣನ್ನು ಬಿಡಿಸಲಾಗುತ್ತದೆ. ಅಲ್ಲಿಗೆ ನಿತ್ಯಾಭಿಷೇಕ ಮಾಡಲು ನೀರು ತಲುಪುವಂತೆ ನಾಳವೊಂದನ್ನು ಜೋಡಿಸಲಾಗುತ್ತದೆ. ವೃಂದಾವನ ಜಾಗಕ್ಕೆ ಮುಂದೆ ನಿತ್ಯ ಪೂಜೆ ಸಲ್ಲುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್