ದೇಶದ ಪ್ರಗತಿಗೆ ರಾವ್ ಕೊಡುವೆ ಅವಿಸ್ಮರಣೀಯ : ಪ್ರಧಾನಿ ಮೋದಿ
ಪಿವಿಎನ್ಗೆ ಮೋದಿ ನುಡಿನಮನ
Team Udayavani, Jun 28, 2021, 9:08 PM IST
ಹೈದರಾಬಾದ್: ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ರವರ ಜನ್ಮಶತಾಬ್ದಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ನ ಹಿರಿಯ ಮುತ್ಸದ್ದಿಯಾಗಿದ್ದ ರಾವ್ ಅವರನ್ನು ಮನಸಾರೆ ಹಾಡಿ ಹೊಗಳಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, “”ದೇಶದ ಪ್ರಗತಿಗೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ನೀಡಿದ ಕಾಣಿಕೆಯನ್ನು ಈ ದೇಶ ಸದಾ ಸ್ಮರಿಸುತ್ತದೆ. ಅವರಲ್ಲಿದ್ದ ಜ್ಞಾನ ಹಾಗೂ ನೈಪುಣ್ಯತೆ ಅನನ್ಯವಾದದ್ದು” ಎಂದು ಮೋದಿ ಶ್ಲಾ ಸಿದ್ದಾರೆ. ಇದರ ಜೊತೆಯಲ್ಲೇ, ಕಳೆದ ವರ್ಷ ಮನ್ ಕೀ ಬಾತ್ನಲ್ಲಿ ಇದೇ ದಿನ ತಾವು ಪಿ.ವಿ. ನರಸಿಂಹ ರಾವ್ ಅವರನ್ನು ನೆನಪಿಸಿಕೊಂಡಿದ್ದ ಮಾತಿನ ತುಣುಕನ್ನು ಕೂಡ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಡಾ. ಸಿಂಗ್ ನಮನ
ಪಿವಿಎನ್ ಅವರ 100ನೇ ಹುಟ್ಟುಹಬ್ಬದ ಪ್ರಯುಕ್ತ ತೆಲಂಗಾಣ ಕಾಂಗ್ರೆಸ್ ಆಯೋಜಿಸಿದ್ದ ವಚ್ಯುìವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, “”ಭಾರತ ಕಂಡ ಅಪರೂಪದ ಆಡಳಿತಗಾರ ಹಾಗೂ ರಾಜತಂತ್ರಜ್ಞರಾಗಿದ್ದ ಪಿ.ವಿ.ಎನ್, ಆರ್ಥಿಕತೆ ಹಾಗೂ ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಹೊಸ ನೀತಿಗಳನ್ನು ಜಾರಿಗೆ ತಂದರು” ಎಂದು ತಿಳಿಸಿದರು.
ಇದನ್ನೂ ಓದಿ :2025ರೊಳಗೆ ಟಾಟಾ ಸಂಸ್ಥೆಯಿಂದ 10 ಹೊಸ ವಿದ್ಯುತ್ ಚಾಲಿತ ಕಾರುಗಳ ಬಿಡುಗಡೆ
ಅವಿವಾದಿತ ದೀಪಧಾರಿ: ನಾಯ್ಡು
ಪಿವಿಎನ್ಗೆ ಟ್ವಿಟರ್ನಲ್ಲಿ ಗೌರವ ಸಲ್ಲಿಸಿರುವ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, “”ಅತ್ಯುತ್ತಮ ಆಡಳಿತಗಾರರಾಗಿ, ರಾಜತಾಂತ್ರಿಕರಾಗಿ, ದೂರದೃಷ್ಟಿಯುಳ್ಳವರಾಗಿದ್ದ ಅವರು ದೇಶವನ್ನು ಪ್ರಗತಿಯೆಡೆಗೆ ಕೊಂಡೊಯ್ದ ಅವಿವಾದಿತ ದೀಪಧಾರಿ” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ