ಬೀದಿ ಬದಿಯ ಮಕ್ಕಳಿಗೆ ಆಸರೆಯಾಗಿದೆ “ಪೊಲೀಸ್ ಪಾಠ ಶಾಲೆ”..!
Team Udayavani, Aug 21, 2019, 5:30 PM IST
ಅಹಮದಬಾದ್ : ಶಿಕ್ಷಣ ಪ್ರತಿ ಮಕ್ಕಳ ಹಕ್ಕು. ಆದರೆ ಪ್ರತಿಯೊಬ್ಬರಿಗೂ ದಕ್ಕುವ ಹಕ್ಕಲ್ಲ. ಭಾರತ ಎಷ್ಟೇ ಮುಂದುವರೆದರೂ, ಸರ್ಕಾರ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದರೂ, ಕೆಲ ಗ್ರಾಮೀಣ ಪ್ರದೇಶದ ಮಕ್ಕಳು ಹಾಗೂ ಬೀದಿ ಬದಿಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂಥವರ ಏಳಿಗೆಗಾಗಿ ನೂರಾರು ಸಂಘ ಸಂಸ್ಥೆಗಳು ದುಡಿಯುತ್ತಿದೆ. ಇದೀಗ ಗುಜುರಾತಿನ ಅಹಮದಬಾದ್ ಟ್ರಾಫಿಕ್ ಪೊಲೀಸರು ಬೀದಿ ಬದಿಯ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.
ಹೌದು. ಟ್ರಾಫಿಕ್ ಪೊಲೀಸರನ್ನು ವಾಹನ ತಡೆದು ದಂಡ ಹಾಕುವುದನ್ನು ನೋಡಿದ್ದೇವೆ. ಇಲ್ಲಿನ ಟ್ರಾಫಿಕ್ ಪೊಲೀಸರು ತಮ್ಮ ಕರ್ತವ್ಯದ ಜೊತೆ ಜೊತೆಗೆ ಶಿಕ್ಷಣದಿಂದ ವಂಚಿತರಾಗಿರುವ ಫುಟ್ ಪಾತ್ ಬದಿಯ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಉಚಿತ ಆಹಾರವನ್ನು ನೀಡುತ್ತಿದೆ. ನಗರದ ಮೂರು ಕಡೆಗಳಲ್ಲಿ “ಪೊಲೀಸ್ ಪಾಠ ಶಾಲಾ” ಎನ್ನುವ ಕೇಂದ್ರವನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡುತ್ತಿದ್ದಾರೆ.
ಸಂಚಾರ ಪೊಲೀಸ್ ಎ.ಸಿ.ಪಿ.ಅಂಕಿತ್ ಪಾಟೀಲ್ ಹೇಳುವ ಪ್ರಕಾರ “ಬೀದಿ ಬದಿಯಲ್ಲಿ ಅಲೆಯುವ ಮಕ್ಕಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಗಳಿರುತ್ತವೆ, ಅಂಥ ಮಕ್ಕಳಿಗೆ ಶಿಕ್ಷಣ ಕೊಟ್ಟು ಅವರಲ್ಲಿ ವಿದ್ಯೆಯ ಬಗ್ಗೆ ಜ್ಞಾನವನ್ನು ಬಿತ್ತಿದರೆ ಅವರು ತಾವು ಆಗಿಯೇ ಪ್ರತಿನಿತ್ಯ ಶಾಲೆಗೆ ಬರುತ್ತಾರೆ” ಎನ್ನುತ್ತಾರೆ.
Gujarat: Ahmedabad City Traffic Police imparts free education to children residing on footpaths under their project called ‘Police Pathshala’. Around 150-200 children are getting education in three centers across the city. pic.twitter.com/YydKzeKMrJ
— ANI (@ANI) August 21, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ