ರೇವಣ್ಣ ಸರಿಯಾಗಿ ನಿಂಬೆಹಣ್ಣು ಮಂತ್ರಿಸಿದ್ದರೆ ಬುಗುರಿ ಆಡಿಸಬಹುದಿತ್ತು: R. ಅಶೋಕ್‌

ಸದನದಲ್ಲಿ ಸ್ವಾರಸ್ಯಕರ ಚರ್ಚೆ !

Team Udayavani, Jul 15, 2023, 6:50 AM IST

vidhana soudha

ಬೆಂಗಳೂರು: ರೇವಣ್ಣ ಸರಿಯಾಗಿ ನಿಂಬೆಹಣ್ಣು ಮಂತ್ರಿಸಿ 40 ಸ್ಥಾನ ಗೆದ್ದಿದ್ದರೆ ಬುಗುರಿ ಆಡಿಸುತ್ತಿದ್ದರು!

ಶುಕ್ರವಾರ ವಿಧಾನಸಭೆಯಲ್ಲಿ ಹೀಗೊಂದು ಸ್ವಾರಸ್ಯಕರ ಚರ್ಚೆಗೆ ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಕಾರಣರಾದರು.

ಜಿಎಸ್‌ಟಿ ಮಸೂದೆ ಕುರಿತು ಮಾತನಾಡುತ್ತಿದ್ದ ರೇವಣ್ಣ, ಜಲ್ಲಿ ಕ್ರಷರ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಇದರಿಂದ ಸಾಕಷ್ಟು ತೆರಿಗೆ ಬರಲಿದೆ. ಕ್ರಷರ್‌ ಮಾಲಕರಿಗೂ ಬಿಸಿ ತಟ್ಟುತ್ತದೆ. ಬಸಣ್ಣಂದು ನಂದು ಏನೂ ಇಲ್ಲ. ಸುಳ್ಳು ಹೇಳಬಾರದು, ನನ್ನ ಕೆಲಸ ಎಲ್ಲ ಮಾಡಿಕೊಟ್ಟವ್ರೆ. ಅಶೋಕಣ್ಣ ಪಾಪ ಕಂದಾಯ ಮಂತ್ರಿ ಇದ್ದಾಗ ಕೆಲಸ ಮಾಡಿಕೊಟ್ಟಿದ್ದಾರೆ ಎಂದು ಮಾತು ಹೊರಳಿಸಿದರು.

ಧಡಕ್ಕನೇ ಎದ್ದುನಿಂತ ಅಶೋಕ್‌, ಇಷ್ಟು ದಿನ ಸಿದ್ರಾಮಣ್ಣನ ಮೇಲೆ ಪ್ರೀತಿ ಅಂತಿದ್ದೆ. ಈಗ ನನ್ಯಾಕಣ್ಣೋ ಹಿಡ್ಕಂಡಿದ್ಯ ಎನ್ನುತ್ತಿದ್ದಂತೆ, ನಾನು ಯಾರತ್ರನೂ ವಿರೋಧ ಕಟ್ಕೊಳಲ್ಲ ಎಂದು ರೇವಣ್ಣರ ಕಾಲೆಳೆದರು. ಹಂಗಂತೀಯ, ಸಿದ್ರಾಮಣ್ಣನ ವಿರುದ್ಧ ಚುನಾವಣ ಪ್ರಚಾರಕ್ಕೆ ಬರೆಲೇ ಇಲ್ಲ. ಅನೇಕರು ನಿನ್ನೇ ಬಿಟೊದ್ರು. ನೀನು ಸರಿಯಾಗಿ ನಿಂಬೆಹಣ್ಣು ಮಂತ್ರಿಸಿದ್ದರೆ ಚುನಾವಣೇಲಿ ಗೇಮ್‌ ಏನೋ ಆಗ್ತಿತ್ತು. ಕನಿಷ್ಠ 40 ಸೀಟ್‌ ಬಂದಿದ್ರೂ ಬುಗ್ರಿ ಆಡಿಸ್ದಂಗೆ ಆಡಿಸ್ತಿದ್ದೆ ಎಂದು ಕಿಚಾಯಿಸಿದರು.

ಅಷ್ಟೇ ಹಾಸ್ಯವಾಗಿ ಮಾತಿಗಿಳಿದ ರೇವಣ್ಣ, ನಮ್‌ ಮಾತು ಕೇಳಿದ್ರೆ ಆಗ್ತಿತ್ತು. ನೀವಿಬ್ರೂ ಸೇರ್ಕೊಂಡು ನಮ್ಮನ್ನು ತೆಗ್ಯಕ್ಕೆ ಹೋದ್ರಿ. ನೀವೂ ಹೋದ್ರಿ, ನಾವೂ ಹೋದ್ವಿ. ಅವರಿಗೆ ಅನುಕೂಲ ಆಯ್ತು ಎಂದು ಕಾಲೆಳೆದರು. ಮತ್ತೆ ಅಶೋಕ ಮಾತನಾಡುತ್ತಾ, ನೀನು ಜ್ಯೋತಿಷಿ ಚೇಂಜ್‌ ಮಾಡ್ಕೊಟ್ಟಂತೆ… ಅವ್ರಾದ್ರೆ ರಾಹುಕಾಲ, ಗುಳಿಕಕಾಲ ಎಲ್ಲ ಸರಿಯಾಗಿ ಹೇಳ್ತಿದ್ರು. ಪಾಪ ಸಿಕ್ಕಿದ್ರು, ಈಗ ಬೇರೆ ಜ್ಯೋತಿಷಿ ನೋಡ್ಕೊಂಡಿದ್ಯಂತೆ, ಇಲ್ಲ ಅಂದಿದ್ರೆ ಇಂಧನ, ಪಿಡಬ್ಲ್ಯುಡಿ ಎರಡೂ ಇಲಾಖೆ ನಿಂಗೇ ಫಿಕ್ಸ್‌ ಆಗ್ತಿತ್ತು ಎಂದು ಹಾಸ್ಯ ಮಾಡಿದರು.

ಎಲ್ರೂ ನಮ್‌ ಸಂಬಂಧಿಕರೇ
ಅಶೋಕಣ್ಣ, ಬೊಮ್ಮಾಯಿ ಅಣ್ಣ ಆಗ್ಲಿ ಯಾರ ಜೊತ್ಗೂ ನಂದು ವಿರೋಧ ಇಲ್ಲ. ಎಲ್ಲ ಸಂಬಂಧಿಕರಿದ್ದಂತೆ. ಪರಮೇಶ್ವರಣ್ಣ ಕುಮಾರಣ್ಣನೂ ಚೆನ್ನಾಗವ್ರೆ ಎಂದು ರೇವಣ್ಣ ಹೇಳುತ್ತಿದ್ದಂತೆ, ಇನ್ಯಾರು ಬಾಕಿ ರೇವಣ್ಣ ಎಂದು ಬಿಜೆಪಿಯ ಸುನಿಲ್‌ ಕುಮಾರ್‌ ಚಟಾಕಿ ಹಾರಿಸಿದರು. ಅಶೋಕ್‌ ಮಧ್ಯಪ್ರವೇಶಿಸಿ, ಎಚ್‌.ಕೆ. ಪಾಟೀಲ್‌ ಒಬ್ರೆ ನಿಂಗೆ ವಿರೋಧಿ ಅನ್ಸತ್ತಲ್ವ ಎಂದು ಪ್ರಶ್ನಿಸುತ್ತಿದ್ದಂತೆ, ಅವ್ರೇ ಸುಮ್ನಿದ್ರು. ನನ್ಯಾಕೆ ಎತ್ತಿ ಕಟ್ಟೀರಿ ಎಂದು ಸಚಿವ ಪಾಟೀಲ್‌ ಹೇಳಿದರು.

ಸಚಿವ ಎಂ.ಬಿ. ಪಾಟೀಲ್‌ ಎದ್ದುನಿಂತು, ಹಾಗಿದ್ರೆ ರಾಮಲಿಂಗಾ ರೆಡ್ಡಿ ಇರ್ಬೇಕಲ್ವ ರೇವಣ್ಣ ಎನ್ನುತ್ತಿದ್ದಂತೆ, ರಾಮಲಿಂಗಾ ರೆಡ್ಡಿ ಆಗ್ಲಿ ಯಾರ ಹತ್ರ ಆಗ್ಲಿ ನಾನು ದ್ವೇಷ ಕಟ್ಕಳಲ್ಲ. ನಮ್ಗೆ ಡಕೋಟ ಬಸ್‌ ಕೊಟ್ಟವ್ರೆ. ಒಂದಿಪ್ಪತ್‌ ಬಸ್‌ ಕೇಳ್ಳೋದಿದೆ ಅವ್ರ ಹತ್ರ ಈಗ. ಅಶೋಕಣ್ಣ ನಂಗೆ ಇಂಧನ ಇಲಾಖೆ ಕೊಡೋಕ್ಕೆ ದಿಲ್ಲೀಲಿ ಚರ್ಚೆ ಆಗಿತ್ತು ಎಂದು ಹಳೆಯ ವಿಷಯಕ್ಕೆ ಹೊರಳುವವರಿದ್ದರು.

ಅಷ್ಟರಲ್ಲಿ ಎಸ್‌.ಟಿ. ಸೋಮಶೇಖರ್‌, ನನ್‌ ಬಗ್ಗೆ ಮಾತಾಡಿದ್ರೆ ಮಾತ್ರ ಹುಷಾರ್‌ ಅಂತಾರೆ ಎನ್ನುತ್ತಿದ್ದಂತೆ, ನೀವ್‌ ಸಸ್ತ ಅದೀರಿ, ನಾವಾದ್ರೆ ಹಂಗಲ್ಲ ಎಂದು ಎಚ್‌.ಕೆ. ಪಾಟೀಲ್‌ ಧ್ವನಿಗೂಡಿಸಿದರು. ಈ ಎಚ್‌.ಕೆ. ಪಾಟೀಲ್‌ಗ‌ೂ, ಎಂ.ಬಿ. ಪಾಟೀಲ್‌ಗ‌ೂ ಕಾನೂನು, ಕೈಗಾರಿಕೆ ಕೊಟ್ಟವ್ರೆ. ಏನ್‌ ಕೆಲ್ಸ ಮಾಡಿಸ್ಕಳದು? ಎಚ್‌.ಕೆ. ಪಾಟೀಲ್‌ ಹತ್ರ ಹೋಗಿ ಯಾವ್‌ ಕಾನೂನು ಸರಿ ಮಾಡಿಸ್ಕಳ್ಳಿ? ಎಂ.ಬಿ. ಪಾಟೀಲ್‌ ಹತ್ರ ಹೋಗಿ ಯಾವ್‌ ಇಂಡಸ್ಟ್ರಿ ತರ್ಲಿ? ಮೋಸ ಆಗೋಯ್ತು ನಂಗೆ ಎಂದು ರೇವಣ್ಣ ಚಟಾಕಿ ಹಾರಿಸಿ ಸದನವನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು.

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.