ದ.ಕೊರಿಯಾ: ಸೋಂಕಿನ ಮಧ್ಯೆಯೇ ನಡೆಯಿತು ಚುನಾವಣೆ

ಎಲ್ಲ ಅಭ್ಯರ್ಥಿಗಳಿಂದಲೂ ಕೋವಿಡ್‌-19ಗೆ ಮೊದಲ ಆದ್ಯತೆ

Team Udayavani, Apr 15, 2020, 5:45 PM IST

ದ.ಕೊರಿಯಾ: ಸೋಂಕಿನ ಮಧ್ಯೆಯೇ ನಡೆಯಿತು ಚುನಾವಣೆ

ಸಿಯೋಲ್‌: ಕೋವಿಡ್‌ ಹಾವಳಿಯನ್ನು ಸಮರ್ಥವಾಗಿ ಎದುರಿಸಿರುವ ಹಿರಿಮೆಗೆ ಪಾತ್ರವಾದ ದಕ್ಷಿಣ ಕೊರಿಯಾ ಇದೀಗ ಪಿಡುಗಿನ ಮಧ್ಯೆಯೆ ಸಂಸತ್ತಿನ 300 ಸ್ಥಾನಗಳಿಗೆ ಯಶಸ್ವಿಯಾಗಿ ಚುನಾವಣೆ ನಡೆಸಿ ಇನ್ನೊಂದು ಸಾಧನೆ ಮಾಡಿದೆ.

ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೆ ಇನ್‌ ಅವರಿಗೂ ಕೋವಿಡ್‌-19 ಒಂದು ರೀತಿಯಲ್ಲಿ ವರವಾಗಿ ಪರಿಣಮಿಸಿದೆ. ಮೂನ್‌ ಕೈಗೊಂಡ ಕ್ರಮಗಳಿಗೆ ಜಾಗತಿಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸಹಜವಾಗಿಯೇ ಚುನಾವಣೆಯಲ್ಲಿ ಇದು ಮತಗಳಾಗಿ ಪರಿವರ್ತಿತವಾಗುವ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿವೆ. ಹಲವು ದೇಶಗಳು ಕೋವಿಡ್‌ ಹತೋಟಿಗೆ ದಕ್ಷಿಣ ಕೊರಿಯಾದ ಸಲಹೆಗಳನ್ನು ಕೇಳುತ್ತಿವೆ.

ಹೀಗೆ ನಡೆಯಿತು ಮತದಾನ
ಮತದಾರರು ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಟೆಂಪರೇಚರ್‌ ಟೆಸ್ಟ್‌ ಪಾಸ್‌ ಆಗುವ ತನಕ ಮತಗಟ್ಟೆಯೊಳಗೆ ಪ್ರವೇಶವಿರಲಿಲ್ಲ. ಸ್ಯಾನಿಟೈಸರ್‌ನಲ್ಲಿ ಕೈತೊಳೆದ ಬಳಿಕ ಪ್ಲಾಸ್ಟಿಕ್‌ ಗ್ಲೌಸ್‌ ಧರಿಸಿ ಮತ ಹಾಕಬೇಕಿತ್ತು.

ಕ್ವಾರಂಟೈನ್‌ನಲ್ಲಿರುವವರಿಗೆ ಇ-ಮೈಲ್‌ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ವಿಶೇಷವೆಂದರೆ ಜನರು ಕೂಡ ಚುನಾವಣೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಒಂದು ವಾರದ ಹಿಂದೆಯೇ ಮತದಾನ ಪ್ರಕ್ರಿಯೆ ಶುರುವಾಗಿತ್ತು. ಎ.13ರಂದು ಅಂತಿಮ ಸುತ್ತಿನ ಮತದಾನ ನಡೆಯಿತು. ಮತಗಟ್ಟೆಗಳಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು.

ಅಧ್ಯಕ್ಷ ಮೂನ್‌ ಕೂಡ ಟೆಂಪರೇಚರ್‌ ಟೆಸ್ಟ್‌ ಪಾಸ್‌ ಆಗದ ಕಾರಣ ಒಂದು ತಾಸಿಗೂ ಅಧಿಕ ಹೊತ್ತು ಮತಗಟ್ಟೆಯ ಹೊರಗೆ ಕಾದು ನಿಲ್ಲಬೇಕಾಯಿತು.

ಈ ಚುನಾವಣೆಯ ಮುಖ್ಯ ವಿಷಯವೇ ಕೋವಿಡ್‌ ಆಗಿತ್ತು. ಸಾಮಾನ್ಯವಾಗಿ ಉದ್ಯೋಗ ಸೃಷ್ಟಿ, ಸಾರ್ವತ್ರಿಕ ಆರೋಗ್ಯ ಯೋಜನೆ, ಆರ್ಥಿಕತೆ ಈ ಮುಂತಾದ ವಿಷಯಗಳು ಪ್ರಚಾರದಲ್ಲಿ ಪ್ರಾಮುಖ್ಯ ಪಡೆಯುತ್ತಿದ್ದವು. ಆದರೆ ಈ ಸಲ ಎಲ್ಲ ಅಭ್ಯರ್ಥಿಗಳು ಕೋವಿಡ್‌-19ಗೆ ಮೊದಲ ಆದ್ಯತೆ ನೀಡಿದ್ದರು.

ದೊಡ್ಡ ರ್ಯಾಲಿಗಳ ಬದಲು ಚಿಕ್ಕ ಗುಂಪನ್ನುದ್ದೇಶಿಸಿ ಮಾತನಾಡುವ ಪ್ರಚಾರದ ಮೊರೆ ಹೋಗಲಾಯಿತು. ಹಸ್ತಲಾಘವ ಬಿಲುಕುಲ್‌ ಇರಲಿಲ್ಲ. ಇನ್ನು ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಮುದ್ದಾಡುವುದು ದೂರವೇ ಉಳಿಯಿತು. ಹೀಗೆ ಹಲವು ಬದಲಾವಣೆಗಳನ್ನು ಈ ಚುನಾವಣೆ ಕಂಡಿತು.

ದಕ್ಷಿಣ ಕೊರಿಯಾ ಕೋವಿಡ್‌ ಗೆದ್ದದ್ದೇಗೆ?
ಚೀನಕ್ಕೆ ಒತ್ತಿಕೊಂಡಿರುವ ದಕ್ಷಿಣ ಕೊರಿಯಾದಲ್ಲಿ ಆರಂಭದ ದಿನಗಳಲ್ಲಿ ಕೋವಿಡ್‌ ಭೀತಿ ದಟ್ಟವಾಗಿಯೇ ಇತ್ತು. ಆದರೆ ಸರಕಾರ ಸಕಾಲದಲ್ಲಿ ಕೈಗೊಂಡ ಕ್ರಮಗಳು ವೈರಾಣು ವ್ಯಾಪಕವಾಗಿ ಪ್ರಸರಣವಾಗುವುದನ್ನು ತಡೆಯಿತು. ಫೆಬ್ರವರಿಯಲ್ಲಿ ನಿತ್ಯ ಸರಾಸರಿ 900ರಂತೆ ಕೋವಿಡ್‌ ಸೋಂಕು ವರದಿಯಾಗುತ್ತಿತ್ತು. ಎಪ್ರಿಲ್‌ಗಾಗುವಾಗ ಈ ಸಂಖ್ಯೆ 50ಕ್ಕಿಳಿಯಿತು.

ವ್ಯಾಪಕವಾದ ಪರೀಕ್ಷೆ, ಸೂಕ್ಷ್ಮ ಕಣ್ಗಾವಲು, ಸಾಮಾಜಿಕ ಅಂತರದ ಪಾಲನೆ, ವಿದೇಶಗಳಿಂದ ಬಂದವರಿಗೆ ಕಟ್ಟುನಿಟ್ಟಿನ ಕ್ವಾರಂಟೈನ್‌ ಈ ಮುಂತಾದ ಕ್ರಮಗಳಿಂದ ದಕ್ಷಿಣ ಕೊರಿಯಾ ಕೋವಿಡ್‌ ವಿರುದ್ಧ ಗೆಲುವು ಸಾಧಿಸಿತು. ಈ ಮಾದರಿಯನ್ನೀಗ ಇಡೀ ಜಗತ್ತು ಅನುಸರಿಸುತ್ತಿದೆ.

ಸೋಮವಾರಕ್ಕಾಗುವಾಗ ದಕ್ಷಿಣ ಕೊರಿಯಾದಲ್ಲಿದ್ದದ್ದು 10,537 ಸೋಂಕಿನ ಪ್ರಕರಣಗಳು. ಇಷ್ಟರ ತನಕ 237 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 7000 ಮಂದಿ ಗುಣಮುಖರಾಗಿದ್ದಾರೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.