ರೈತನಿಗೆ ಗುಂಡೇಟು ಪ್ರಕರಣ : ಪೊಲೀಸರಿಂದ 6 ಮಂದಿ ಬೇಟೆಗಾರರ ಬಂಧನ
Team Udayavani, Sep 10, 2021, 9:00 PM IST
ಶ್ರೀರಂಗಪಟ್ಟಣ : ತಾಲೂಕಿನ ಮೇಳಾಪುರ ಗ್ರಾಮದಲ್ಲಿ ಬೇಟೆಗಾರಿಂದ ರೈತನಿಗೆ ಗುಂಡೇಟು ಪ್ರಕರಣದಲ್ಲಿ 6 ಜನ ಬೇಟೆಗಾರರನ್ನು ವಶಕ್ಕೆ ಪಡೆದು 1 ಬಂದೂಕು ಸೇರಿ 5 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಅಶ್ವಿನಿ ತಿಳಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಬಳಿ ಬುಧವಾರ ಈ ಘಟನೆ ನಡೆದಿದ್ದು ರೈತನಿಗೆ ಬೇಟೆಗಾರರು ಹಂದಿ ಬೇಟೆಯಾಡುವಾಗ ಸಿಡಿಸಿದ ಗುಂಡು ರೈತನಿಗೆ ತಾಗಿ ಗಾಯಗೊಂಡಿದ್ರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಹೆಬ್ಬಾಳದ ಶರತ್, ದೀಪ, ಮೈಸೂರು ತಾಲೂಕು ರಮ್ಮನಹಳ್ಳಿಯ ರವಿ, ಪ್ರಭು ಹಾಗೂ ಪಾಂಡವಪುರ ತಾಲ್ಲೂಕು ಮೇನಾಗರ ಗ್ರಾಮದ ದೇವರಾಜು ಎಂಬುವರನ್ನು ಪೊಲೀಸರು ಬಂಧಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ :ಶ್ರೀರಂಗಪಟ್ಟಣ : ಮನೆಮುಂದೆ ನಿಲ್ಲಿಸಿದ ರಿಕ್ಷಾ, ಬೈಕಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು