ಮಂಗಳವಾರದ ರಾಶಿ ಫಲ : ಈ ರಾಶಿಯ ಅವಿವಾಹಿತರಿಗೆ ಶುಭ ಸುದ್ದಿ, ದೂರದ ಪ್ರಯಾಣ
Team Udayavani, Oct 11, 2022, 7:19 AM IST
ಮೇಷ: ಅವಿವಾಹಿತರಿಗೆ ವಿವಾಹ ಯೋಗ. ದಂಪತಿಗಳಲ್ಲಿ ಪ್ರೇಮ ಅನುರಾಗ ವೃದ್ಧಿ. ಮನೋರಂಜನೆಗಾಗಿ ಪ್ರಯಾಣ, ಧನ ವ್ಯಯ. ಗೃಹದಲ್ಲಿ ಸಂಭ್ರಮದ ವಾತಾವರಣ. ದೂರದ ವ್ಯವಹಾರಗಳಲ್ಲಿ ಪ್ರಗತಿ.
ವೃಷಭ: ಪರರ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಮಾತಿನಲ್ಲಿ ಸ್ಪಷ್ಟತೆ ತೋರಿಬರುವುದು. ಅನಿರೀಕ್ಷಿತ ಧನಾಗಮನ. ದೂರ ಪ್ರಯಾಣ ವರ್ಚಸ್ಸು ವೃದ್ಧಿ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡದಿರಿ.
ಮಿಥುನ: ವಿದ್ಯೆ ಜ್ಞಾನ ಪ್ರದರ್ಶನದಿಂದ ಗೌರವ ವೃದ್ಧಿ. ಜನ ಮನ್ನಣೆ. ನಿರೀಕ್ಷಿತ ಧನ ಸಂಚಯನ. ಕುಟುಂಬ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಮಿತ್ರರಿಂದ ಸಹಾಯ. ದೇವತಾ ಕಾರ್ಯಗಳಿಂದ ನೆಮ್ಮದಿ ಲಭಿಸೀತು.
ಕರ್ಕ: ದೂರ ಪ್ರಯಾಣ. ಆರೋಗ್ಯ ಗಮನಿಸಿ. ಅನಗತ್ಯ ವಿಚಾರಗಳಿಗೆ ಆಸ್ಪದ ನೀಡದಿರಿ. ಪರವೂರಿನ ವ್ಯವಹಾರಗಳಲ್ಲಿ ಧನ ಸಂಪತ್ತು ವೃದ್ಧಿ. ಬಂಧುಗಳಿಂದ ತಾಯಿ ಸಮಾನರಿಂದ ಉತ್ತಮ ಮಾರ್ಗದರ್ಶನ.
ಸಿಂಹ: ಪಾಲುದಾರಿಕಾ ವಿಚಾರ ವ್ಯವಹಾರಗಳಲ್ಲಿ ಲಾಭ. ಪರಸ್ಪರ ಸಹಕಾರ ಮನೋಭಾವ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರುವುದು. ಉತ್ತಮ ಧನ ವೃದ್ಧಿ. ಜವಾಬ್ದಾರಿಯುತ ಮಾತುಗಳಿಂದ ಜನಮನ್ನಣೆ ಲಭಿಸೀತು.
ಕನ್ಯಾ: ಭೂಮ್ಯಾದಿ ಆಸ್ತಿ, ಗೃಹ, ವಾಹನಾದಿ ವಿಚಾರಗಳಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ನೂತನ ಮಿತ್ರರ ಸಮಾಗಮ. ಗೃಹೋಪಕರಣ ವಸ್ತು ಸಂಗ್ರಹ. ಗೃಹದಲ್ಲಿ ಸಂತಸದ ವಾತಾವರಣ ನೆಮ್ಮದಿ.
ತುಲಾ: ಪರ ಸ್ತ್ರೀ ಪುರುಷರಿಂದ ಸಹಾಯ. ಕೆಲಸ ಕಾರ್ಯಗಳಲ್ಲಿ ಚುರುಕುತನ, ಬುದ್ಧಿವಂತಿಕೆಯಿಂದ ಕೂಡಿದ ಪ್ರವೃತ್ತಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಗೃಹದಲ್ಲಿ ಮನೋರಂಜನೆ ಸಂಭ್ರಮ. ಸೌಂದರ್ಯ ಪದಾರ್ಥಗಳ ಖರೀದಿ. ಮಕ್ಕಳಿಂದ ಸುಖ ಸಂತೋಷ.
ವೃಶ್ಚಿಕ: ದೂರ ಪ್ರಯಾಣ. ಆರೋಗ್ಯದ ಬಗ್ಗೆ ಉದಾಸೀನತೆ ಮಾಡದಿರಿ. ಮಿತ್ರರ ಸಹಕಾರ. ನಿರಂತರ ಧನಸಂಚಯನ. ವಾಕ್ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಸಾಮಾಜಿಕ ಸುಧಾರಣೆ ಕಾರ್ಯಗಳಲ್ಲಿ ಆಸಕ್ತಿ.
ಧನು: ಕೆಲಸ ಕಾರ್ಯಗಳಲ್ಲಿ ಮಗ್ನತೆ. ನಿರೀಕ್ಷಿಸಿದಂತೆ ಸಫಲತೆ. ಕೀರ್ತಿ ಶ್ರೇಯಸ್ಸು ಲಭಿಸಿದ ಸಂತೋಷ. ಪರವೂರು, ಪರದೇಶದ ವ್ಯವಹಾರಗಳಲ್ಲಿ ಧನ ಲಾಭ ನೆಮ್ಮದಿ. ಅನಿರೀಕ್ಷಿತ ಧನಾಗಮನ. ಆರೋಗ್ಯದಲ್ಲಿ ಸುಧಾರಣೆ.
ಮಕರ: ಆರೋಗ್ಯ ಗಮನಿಸಿ. ಹೆಚ್ಚಿದ ದೈಹಿಕ ಶ್ರಮ. ಮಿತ್ರರಿಂದ ಸಹಾಯ. ಸೇವಕ ವರ್ಗದವರಿಂದ ಸಹಕಾರ. ಉದ್ಯೋಗದಲ್ಲಿ ಪ್ರಗತಿ. ಹಠಮಾಡದೇ ಕಾರ್ಯ ಪ್ರವೃತ್ತರಾಗಿ. ದಂಪತಿಗಳಲ್ಲಿ ಪರಸ್ಪರ ಸಹಕಾರ.
ಕುಂಭ: ವಿದ್ಯೆ, ಅಧ್ಯಯನ ಸಂಬಂಧ ವಿಚಾರಗಳಲ್ಲಿ ಪ್ರಗತಿ. ಉತ್ತಮ ಸ್ಥಾನ ಗೌರವಾದಿ ಪ್ರಾಪ್ತಿ. ಸಂದರ್ಭೋಚಿತವಾಗಿ ಪ್ರತಿಭೆ ಪ್ರದರ್ಶನ. ಕೆಲಸ ಕಾರ್ಯಗಳಲ್ಲಿ ಸಫಲತೆ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ.
ಮೀನ: ದೂರ ಪ್ರಯಾಣ. ನೂತನ ಮಿತ್ರರ ಭೇಟಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಮಿತ್ರರಿಂದ ಉತ್ತಮ ಸಹಕಾರ. ಅವಿವಾಹಿತರಿಗೆ ವಿವಾಹ ಭಾಗ್ಯ. ಮಕ್ಕಳಿಂದ ಸುವಾರ್ತೆ. ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು. ಕೀರ್ತಿ ಸಂಪಾದನೆ. ಅನಿರೀಕ್ಷಿತ ಧನ ಸಂಚಯನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ