ತುಳುನಾಡಿನಲ್ಲಿ ತುಳು ಫಲಕ ಅಭಿಯಾನ ಆರಂಭವಾಗಲಿ: ದಯಾನಂದ ಕತ್ತಲ್ಸಾರ್
Team Udayavani, Aug 19, 2020, 5:18 PM IST
ಬಜಪೆ: ಇಲ್ಲಿನ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆ ಬದಿಯ ಫಲಕ, ಬಸ್ ನಿಲ್ದಾಣ, ಮಾರುಕಟ್ಟೆ, ಸಾರ್ವಜನಿಕ ವಲಯದ ಫಲಕಗಳು ಕನ್ನಡದ ಕೆಳಗೆ ತುಳು ಭಾಷೆಯಲ್ಲಿ ಬರೆಯುವ ಮೂಲಕ ತುಳು ಅಭಿಮಾನದ ಜತೆಗೆ ತುಳು ಅಭಿಯಾನವನ್ನು ಅರಂಭಿಸಲು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಅವರು ಬಜಪೆ ಗ್ರಾ.ಪಂ.ಗೆ ಭೇಟಿ ನೀಡಿ, ಪಿಡಿಒ ಸಾಯೀಶ್ ಚೌಟ್ ಅವರೊಂದಿಗೆ ಸಮಾಲೋಚಿಸಿದರು.
ಈ ಸಂದರ್ಭ ದಯಾನಂದ ಕತ್ತಲ್ಸಾರ್ ಮಾತನಾಡಿ, ತುಳು ಭಾಷೆಗೆ ಸ್ವಂತ ಲಿಪಿಯಿದೆ. ತುಳುನಾಡಿನ ಮಠಾಧೀಶರುಗಳು ಸಹಿ ತುಳುವಿನಲ್ಲಿದೆ. ತುಳುವಿನ ಬಗ್ಗೆ ಹಲವಾರು ಮಂದಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಮಹಾನಗರ ಪಾಲಿಕೆಯ ರಸ್ತೆ, ಬೀದಿಗಳ ನಾಮಫಲಕ, ಸಂಸ್ಥೆಗಳ ಹೆಸರುಗಳು ಆಂಗ್ಲ, ಕನ್ನಡ ಜತೆಗೆ ತುಳು ಭಾಷೆಯಲ್ಲಿರಬೇಕಿದೆ. ತುಳು ಅಭಿಮಾನವನ್ನು ಬೆಳಸಲು ಬಜಪೆ ಗ್ರಾ.ಪಂ.ನಿಂದ ತುಳು ಅಭಿಯಾನ ಆರಂಭವಾಗಲಿ. ಯುವ ತುಳುನಾಡ್ ಮತ್ತು ಜೈ ತುಳುನಾಡ್ನ ಸದಸ್ಯರು ಫಲಕವನ್ನು ತುಳು ಲಿಪಿಯಲ್ಲಿ ಬರೆಯಲು ಸಿದ್ಧರಿದ್ದಾರೆ. ಬಜಪೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತುಳು ಲಿಪಿಯಲ್ಲಿ ಫಲಕವನ್ನು ಬರೆಯುವ ಮೂಲಕ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗುವುದು ಎಂದರು.
ದಯಾನಂದ ಕತ್ತಲ್ಸಾರ್ ಅವರನ್ನು ಬಜಪೆ ಗ್ರಾ.ಪಂ.ವತಿಯಿಂದ ಪಿಡಿಒ ಸಾಯೀಶ್ ಚೌಟ ಅಭಿನಂದಿಸಿದರು. ಉದ್ಯಮಿ ಕೃಷ್ಣ ಕಲ್ಲೋಡಿ, ವಕೀಲ ವಿನೋಧರ ಪೂಜಾರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ