ಮಾಸ್ಕ್ ನಿಬಂಧನೆ ತೆರವು ಆವಶ್ಯಕವೇ?
Team Udayavani, May 20, 2021, 7:07 AM IST
ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆ ಸಂಸ್ಥೆ (ಸಿಡಿಸಿ) ಎರಡು ಡೋಸ್ ಲಸಿಕೆ ಪಡೆದ ಅಮೆರಿಕನ್ನರು ಮಾಸ್ಕ್ ಧರಿಸುವುದು ಬೇಡ ಎಂಬ ಪ್ರಕಟನೆೆ ನೀಡಿದ್ದು, ಅಮೆರಿಕ ಹಾಗೂ ಇತರೆಡೆ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲಿಯೂ ಈ ನಿಯಮ ಜಾರಿಗೊಳಿಸಬಹುದೇ ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ ನಮ್ಮ ತಜ್ಞರು ಹೀಗೆ ಹೇಳಿದ್ದಾರೆ.
ವೈಜ್ಞಾನಿಕ ಆಧಾರವಿಲ್ಲ
ಅಮೆರಿಕದ ಸಿಡಿಸಿ ಸಿದ್ಧಾಂತಕ್ಕೆ ವಿಜ್ಞಾನಲೋಕದ ಬೆಂಬಲವಿಲ್ಲ. ಯಾವುದೇ ದೇಶದ ಶೇ. 70ರಷ್ಟು ಜನಸಂಖ್ಯೆಗೆ ಲಸಿಕೆ ಪೂರ್ಣಪ್ರಮಾಣದಲ್ಲಿ ದೊರತರೆ ಮಾತ್ರ ಆ ದೇಶದಲ್ಲಿ ತಕ್ಕಮಟ್ಟಿಗಿನ ರೋಗ ನಿರೋಧಕತೆ ಸೃಷ್ಟಿಯಾಗಿದೆ ಎಂದರ್ಥ. ಅಷ್ಟಾಗುವ ಮೊದಲೇ ಕೊರೊನಾ ನಿಬಂಧನೆಗಳನ್ನು ಸಡಿಲಿಸುವುದು ಸರಿಯಲ್ಲ. ಭಾರತದಲ್ಲಂತೂ ಹಾಗೆ ಮಾಡಲು ಸಾಧ್ಯವೇ ಇಲ್ಲ ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ (ಐಎಂಸಿ) ಡಾ| ಜೆ.ಎ. ಜಯಲಾಲ್ ಹೇಳಿದ್ದಾರೆ.
ಅಮೆರಿಕ-ಭಾರತ ಪರಿಸ್ಥಿತಿ ಭಿನ್ನ
ಕೊರೊನಾ ವೈರಾಣುಗಳು ವೇಗವಾಗಿ ರೂಪಾಂತರಗೊಳ್ಳುತ್ತಿವೆ. ಹಾಲಿ ಲಸಿಕೆಗಳು ಹೊಸ ಪೀಳಿಗೆಯ ವೈರಾಣುಗಳನ್ನು ಎದುರಿಸುವಲ್ಲಿ ಶಕ್ತಿಶಾಲಿಯಲ್ಲ. ಹಾಗಾಗಿ, ಎರಡು ಡೋಸ್ ಲಸಿಕೆ ಪಡೆದವರೂ ಸೇಫ್ ಆಗಿ ಇರಲೇಬೇಕು ಎಂದು ದಿಲ್ಲಿಯ ಗಂಗಾರಾಮ್ ಆಸ್ಪತ್ರೆಯ ಡಾ| ಚಾಂದ್ ವಟ್ಟಾಲ್ ತಿಳಿಸಿದ್ದಾರೆ. ಜನಸಂಖ್ಯೆ ಹಾಗೂ ಲಸಿಕೆ ಅಭಿಯಾನ ವಿಚಾರದಲ್ಲಿ ಭಾರತ- ಅಮೆರಿಕದ ಪರಿಸ್ಥಿತಿ ಪರಸ್ಪರ ವಿಭಿನ್ನ. ನಮ್ಮಲ್ಲಿ ಅಮೆರಿಕದ ಹಾಗೆ ನಿಬಂಧನೆ ತೆರವುಗೊಳಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಆರೋಗ್ಯ ಸಚಿವಾಲಯ ಏನು ಹೇಳುತ್ತದೆ?
ಕೇಸ್ಗಳು ತಕ್ಕಮಟ್ಟಿಗೆ ಇಳಿದಿವೆಯಾದರೂ ಸಂಪೂರ್ಣವಾಗಿ ನಿಂತಿಲ್ಲ. ಹಾಗಾಗಿ, ಕೊರೊನಾ ನಿಬಂಧನೆಗಳನ್ನು ಸಡಿಲ ಮಾಡುವಂತೆಯೇ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಗೆ ತಜ್ಞರ ಸಲಹಾ ಸಮಿತಿ ಈಗಾಗಲೇ ಶಿಫಾರಸು ಮಾಡಿದೆ. ಸಮಿ ತಿಯ ಸದಸ್ಯರೊಬ್ಬರಾದ ಏಮ್ಸ್ ನಿರ್ದೇಶಕ ಡಾ| ಗುಲೇರಿಯಾ, ಕೊರೊನಾ ವೈರಾಣುವಿನ ಹೊಸ ಪೀಳಿಕೆಯ ವೈರಾಣುಗಳು ಬಹುಬೇಗನೇ ರೂಪಾಂತರಗೊಳ್ಳುತ್ತಿದೆ. ಹಾಗಾಗಿ ನಿಯಮ ಹಿಂಪಡೆದರೆ ಅಪಾಯ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ