ChatGPT ನಮ್ಮ ಉದ್ಯೋಗ ಕಸಿಯಲಿದೆಯೇ? ಇನ್ಫೋಸಿಸ್ ನಾರಾಯಣ ಮೂರ್ತಿ ಅಭಿಪ್ರಾಯವೇನು?
ಕೆಲವು ತಿಂಗಳ ಹಿಂದೆ ಈ ಚಾಟ್ ಜಿಪಿಟಿ ಬಗ್ಗೆ ನನ್ನ ಮಗ ನನಗೆ ಮಾಹಿತಿ ನೀಡಿದ್ದ.
Team Udayavani, Mar 3, 2023, 3:58 PM IST
ನವದೆಹಲಿ: ಇತ್ತೀಚೆಗೆ ಚಾಟ್ ಜಿಪಿಟಿ(ChatGPT) ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಚಾಟ್ ಜಿಪಿಟಿ ನಮ್ಮ ಉದ್ಯೋಗಕ್ಕೆ ಕುತ್ತು ತರಲಿದೆಯೇ? ಎಂಬ ಬಗ್ಗೆ ವಿಶ್ಲೇಷಿಸಲಾಗುತ್ತಿದೆ. ಆದರೆ ಚಾಟ್ ಜಿಪಿಟಿ ಎಂಬ ಚಾಟ್ ಬಾಟ್, ಪಠ್ಯ ರೂಪದಲ್ಲಿ ನಾವು ಸಲ್ಲಿಸುವ ಪ್ರಶ್ನೆಗಳನ್ನು ಅರ್ಥೈಸಿ, ಅದಕ್ಕೆ ಪಠ್ಯರೂಪದಲ್ಲಿ ಉತ್ತರ ಕೊಡುತ್ತಿರುವ ಅದರ ಸಾಮರ್ಥ್ಯದ ಬಗ್ಗೆ ಹಲವರು ಪ್ರಶಂಶಿಸಿದ್ದಾರೆ.
ಇದನ್ನೂ ಓದಿ:ಕರ್ನಾಟಕ ಯಾರ ಎಟಿಎಂ ಆಗಿದೆ? ಅಮಿತ್ ಶಾಗೆ ಎಚ್.ಡಿ ಕುಮಾರಸ್ವಾಮಿ ಪ್ರಶ್ನೆ
ಆದರೂ ಇದರ ಹೊರತಾಗಿಯೂ ಚಾಟ್ ಜಿಪಿಟಿ ಶಾಲಾ ಶಿಕ್ಷಣದ ಮೇಲೆ ಬೀರಬಹುದಾದ ಸಂಭವನೀಯ ಪರಿಣಾಮಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಎಲ್ಲಾ ಪ್ರಶಂಸೆ, ಆಕ್ಷೇಪಗಳ ನಡುವೆ ಚಾಟ್ ಜಿಪಿಟಿ ಕುರಿತ ಆತಂಕದ ಬಗ್ಗೆ ಇನ್ಫೋಸಿಸ್ ಸ್ಥಾಪಕರಾದ ನಾರಾಯಣ ಮೂರ್ತಿಯವರು ಪ್ರತಿಕ್ರಿಯಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಈ ಚಾಟ್ ಜಿಪಿಟಿ ಬಗ್ಗೆ ನನ್ನ ಮಗ ನನಗೆ ಮಾಹಿತಿ ನೀಡಿದ್ದ. ಹೌದು ಇದು ನಿಮ್ಮ ಕಲ್ಪನೆಗೆ ತಕ್ಕ ಮಾಹಿತಿಯನ್ನು ಒದಗಿಸಿಕೊಡುವ ನೂತನ ವಿಧಾನವಾಗಿದೆ. ಹಾಗಂತ ಇದರ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ ಎಂದು ನಾರಾಯಣಮೂರ್ತಿ ತಿಳಿಸಿದ್ದಾರೆ.
“ಚಾಟ್ ಜಿಪಿಟಿ(Chat GPT) ಉದ್ಯೋಗವನ್ನು ಕಸಿದುಕೊಳ್ಳಲಾರದು ಎಂದು ಸ್ಪಷ್ಟಪಡಿಸಿರುವ ನಾರಾಯಣಮೂರ್ತಿ ಅವರು, 1977-1978ರಲ್ಲಿ ಪ್ರೋಗ್ರಾಮ್ ಜನರೇಟರ್ ಚಾಲ್ತಿಗೆ ಬಂದಾಗಲೂ ಕೂಡಾ ಪ್ರತಿಯೊಬ್ಬರು ತಮ್ಮ ಉದ್ಯೋಗಕ್ಕೆ ಕುತ್ತು ಬರಲಿದೆ ಎಂದು ಆತಂಕಗೊಂಡಿದ್ದರು. ಆದರೆ ಆ ರೀತಿ ಆಗಲೇ ಇಲ್ಲ. ಯಾಕೆಂದರೆ ಮನುಷ್ಯನ ಮೆದುಳು ಪ್ರಭಾವಶಾಲಿ ಹೊಂದಾಣಿಕೆಯ ಸಾಧನವಾಗಿದೆ. ತಂತ್ರಜ್ಞಾನ ಮತ್ತು ಮಾನವ ಕಲ್ಪನೆಯ ಸಹಾಯದಿಂದ ನಂತರ ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಇದನ್ನು ಬಳಸಿಕೊಳ್ಳಬಹುದಾಗಿದೆ” ಎಂದರು.
ಚಾಟ್ ಜಿಪಿಟಿ ತುಂಬಾ ಉತ್ತಮವಾಗಿದೆ. ಆದರೆ ನಾವು ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಬೇಕು. ನಂತರ ನಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಬಳಸಬೇಕು. ಆದರೆ ಚಾಟ್ ಜಿಪಿಟಿಯಾಗಲಿ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆಗಲಿ ಅವು ಎಂದಿಗೂ ಮಾನವರ ಸ್ಥಾನಕ್ಕೆ ಬದಲಿ ವ್ಯವಸ್ಥೆಯಾಗಲು ಸಾಧ್ಯವಿಲ್ಲ ಎಂದು ನಾರಾಯಣ ಮೂರ್ತಿ ವಿಶ್ಲೇಸಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ