Karnataka: ಔಷಧ ಅಭಾವ: ತಪ್ಪದ ರೋಗಿಗಳ ಪರದಾಟ: ಕಂಪೆನಿಗಳಿಗೆ 117 ಕೋ.ರೂ. ಬಾಕಿ
Team Udayavani, Jun 30, 2023, 8:05 AM IST
ಬೆಂಗಳೂರು: ರಾಜ್ಯದಲ್ಲಿ ಔಷಧಗಳ ಅಭಾವ ಮರುಕಳಿಸಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ 20ಕ್ಕೂ ಹೆಚ್ಚು ಅಗತ್ಯ ಔಷಧ ಗಳಿಲ್ಲದೆ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಇದರ ಬೆನ್ನಲ್ಲೇ ಕೆಎಸ್ಎಂಎಸ್ಸಿಎಲ್ 731 ಔಷಧಗ ಳ ಖರೀದಿಗೆ 650 ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಿ
ದರೂ 117 ಕೋಟಿ ರೂ. ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಬಿಡ್ಗೆ ಕಂಪೆನಿಗಳು ಹಿಂದೇಟು ಹಾಕಿವೆ.
ಆರೋಗ್ಯ ಇಲಾಖೆ ಅಧೀನದ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್ಎಂಎಸ್ಸಿಎಲ…) ಸಂಸ್ಥೆಯು ಔಷಧ ಖರೀದಿಸಿ ಜಿಲ್ಲಾ, ತಾಲೂಕು ಆಸ್ಪತ್ರೆಗಳಿಗೆ ಪೂರೈಸುತ್ತಿದೆ. ಆದರೆ 2020-21ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಟೆಂಡರ್ ನಡೆದಿರಲಿಲ್ಲ. 2021-22ರಲ್ಲಿ ಅಗತ್ಯ ಔಷಧ ಪೂರೈಸುವಲ್ಲಿ ನಿಗ ಮ ವಿಫಲವಾಗಿತ್ತು. ಈ ಹಿಂದೆ ಔಷಧ ಪೂರೈಸಿದ್ದ ಕಂಪೆನಿಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ಎಚ್ಎಂ)ದಿಂದ 117 ಕೋಟಿ ರೂ. ನೀಡಲು ಬಾಕಿ ಇದೆ. ಹೀಗಾಗಿ 2022-23ನೇ ಸಾಲಿಗೆ ಆಹ್ವಾನಿಸಿರುವ ಟೆಂಡರ್ನಲ್ಲಿ ಬಿಡ್ಗೆ ಪ್ರತಿಷ್ಠಿತ ಕಂಪನಿಗಳು ಹಿಂದೇಟು ಹಾಕುತ್ತಿವೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಔಷಧ ಖರೀದಿಸಿ ದಾಸ್ತಾನು ಮಾಡಿಕೊಳ್ಳಲು ಕನಿಷ್ಠ 3 ತಿಂಗಳು ಬೇಕು. ಇತ್ತ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ಬೇಕಿರುವ ಔಷಧ ಇಲ್ಲದೆ ರೋಗಿಗಳು ಹೈರಾಣಾಗಿದ್ದಾರೆ.
ಜು. 5ರ ವರೆಗೆ ಟೆಂಡರ್ ಮುಂದಕ್ಕೆ
ಔಷಧ ಸಂಗ್ರಹಣೆಗಾಗಿ 2022-23ನೇ ಸಾಲಿಗೆ 650 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. 731 ಔಷಧ ಖರೀದಿಗೆ 30 ಪ್ಯಾಕೇಜ್ ಮಾಡಲಾಗಿದ್ದು, 30 ಟೆಂಡರ್ಗಳಿಗೂ ಪ್ರತ್ಯೇಕವಾಗಿ ಬಿಡ್ ಮಾಡಬೇಕಾಗುತ್ತದೆ. ಒಂದು ಪ್ಯಾಕೇಜ್ನಲ್ಲಿ 25ರಿಂದ 30 ಔಷಧಗಳು ಇರಲಿವೆ. ಜೂ. 28 ಟೆಂಡರ್ನಲ್ಲಿ ಪಾಲ್ಗೊಳ್ಳಲು ಕೊನೆಯ ದಿನವಾಗಿತ್ತು. ಆದರೆ 20 ಔಷಧ ಕಂಪೆನಿಗಳು ಒಂದು ವಾರ ಟೆಂಡರ್ ಮುಂದೂಡುವಂತೆ ಮನವಿ ಸಲ್ಲಿಸಿದ್ದವು. ಇದನ್ನು ಪರಿಗಣಿಸಿ ಸರಕಾರದಿಂದ ಅನುಮತಿ ಪಡೆದು ಜು. 5ರ ವರೆಗೆ ಟೆಂಡರ್ ಮುಂದೂಡಲಾಗಿದೆ ಎಂದು ಕೆಎಸ್ಎಂಎಸ್ಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಎಸ್. ರಂಗಪ್ಪ “ಉದಯವಾಣಿ’ಗೆ ತಿಳಿಸಿದ್ದಾರೆ.
ಪೂರೈಕೆಯಾಗದೆ ಸಂಕಷ್ಟ ಅಗತ್ಯ ಔಷಧಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರಕಾರದ ಪ್ರಧಾನ ಮುಖ್ಯ ಕಾರ್ಯದರ್ಶಿ ಗಳು ಇತ್ತೀಚೆಗೆ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್ಒ)ಗಳೊಂದಿಗೆ ಸಭೆ ನಡೆಸಿದ್ದಾರೆ. ಅಗತ್ಯ ಔಷಧಗಳನ್ನು ಸ್ಥಳೀಯವಾಗಿ ಖರೀದಿಸು ವಂತೆ ನಿರ್ದೇಶನ ಕೊಟ್ಟಿದ್ದಾರೆ. ಆದರೆ ಡಿಎಚ್ಒಗಳು ಸಮರ್ಪಕ ವಾಗಿ ಔಷಧ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪವಿದೆ. ಬಹಳಷ್ಟು ಕಂಪೆನಿಗಳು ಟೆಂಡರ್ಗೆ ಕಾಲಾವ ಕಾಶ ನೀಡುವಂತೆ ಕೇಳಿದ್ದು, ಆದರೂ ಕೆಲವು ಔಷಧಗಳ ಕೊರತೆ ಉಂಟಾಗಬಹುದು. ಒಂದು ವೇಳೆ ಟೆಂಡರ್ ಅಂತಿಮಗೊಳ್ಳದಿದ್ದರೆ ಮರು ಟೆಂಡರ್ಗೆ ಮತ್ತೆ 3 ತಿಂಗಳು ಬೇಕಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
~ ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ