ಕೆಕೆಆರ್ ಟಿಸಿ ಗೆ 802 ಬಸ್ ಸೇರ್ಪಡೆ: 28ರಂದು ಸೇಡಂದಲ್ಲಿ ಲೋಕಾರ್ಪಣೆ


Team Udayavani, Mar 26, 2023, 2:37 PM IST

1-sad-sadsad

ಕಲಬುರಗಿ: ಬಸ್ ಅಭಾವ ಎದುರಿಸುತ್ತಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಹೊಸದಾಗಿ 802 ಬಸ್ ಗಳ ಸೇರ್ಪಡೆಯಾಗಿವೆ ಎಂದು ನಿಗಮದ ಅಧ್ಯಕ್ಷರಾಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.

ನಿಗಮದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 330 ಕೋ.ರೂ ವೆಚ್ಚದಲ್ಲಿ ಬಸ್ ಗಳ ಖರೀದಿ ಮಾಡಿ ನಿಗಮ ಕ್ಕೆ ಸೇರಿಸಲಾಗಿದೆ. ಹೊಸ ಬಸ್ ಗಳನ್ನು ಇದೇ ಮಾಚ್೯ 28 ರಂದು ಸಾರಿಗೆ ಸಚಿವ ಶ್ರೀ ರಾಮುಲು ಚಾಲನೆ ನೀಡುವರು ಎಂದು ವಿವರಿಸಿದರು.

ಹೊಸ ಬಸ್ ಗಳ ಸೇರ್ಪಡೆಯಿಂದ ಬಸ್ ಗಳ ಕೊರತೆ ನಿವಾರಣೆ ಯಾಗಲಿದ್ದು, ಗ್ರಾಮೀಣ ಭಾಗಕ್ಕೆ ಸಾರಿಗೆ ಸೇವೆ ಮತ್ತಷ್ಟು ವಿಸ್ತರಿಸಲಾಗಲಿದೆ. 802 ಬಸ್ ಗಳಲ್ಲಿ 6ವೋಲ್ವೋ, 40 ಎಸಿ ಸ್ಲೀಪರ್ ಬಸ್ ಗಳಿದ್ದು, ಒಟ್ಟಾರೆ ಎಲ್ಲ ಹೊಸ ಬಸ್ ಗಳು ಅತ್ಯಾಧುನಿಕ ತಾಂತ್ರಿಕತೆ ಹೊಂದಿವೆ ಎಂದು ತಿಳಿಸಿದರು.

ಸಾವಿರ ಕೋ.ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ: ಇದೇ ಮಾಚ್೯ 28ರಂದು ಬೆಳಿಗ್ಗೆ 11ಕ್ಕೆ ಸೇಡಂ ವಿಧಾನಸಭಾ ಕ್ಷೇತ್ರದ ಸಾವಿರ ಕೋ.ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಸಚಿವರು ನೆರವೇರಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶಾಸಕ ತೇಲ್ಕೂರ ತಿಳಿಸಿದರು.

ಕಾಗಿಣಾ ಏತ ನೀರಾವರಿಗೆ ಅಡಿಗಲ್ಲು

ಬಹು ದಶಕಗಳ ಬೇಡಿಕೆಯಾದ ಕಾಗಿಣಾ ಏತ ನೀರಾವರಿ ಯೋಜನೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾ. 28 ರಂದು ಅಡಿಗಲ್ಲು ನೆರವೇರಿಸುವರು.

160 ಕೋ. ರೂ ವೆಚ್ಚದ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದ್ದು, ಈ ಯೋಜನೆಯಿಂದ 40 ಹಳ್ಳಿಗಳ 75 ಸಾವಿರ ಎಕರೆ ಭೂಮಿ ನೀರಾವರಿಯಾಗಲಿದೆ. 650 ಕೋ.ರೂ ವೆಚ್ಚದ ಈ ಯೋಜನೆ ಸಾಕಾರಗೊಳಿಸದೇ ಹಾಗೆ ಬರಲಾಗಿತ್ತು. ಆದರೆ ತಾವು ಬಂದ ಮೇಲೆ ಚಾಲನೆ ದೊರಕಿರುವುದು ನಿಜಕ್ಕೂ ಒಂದು ಮೈಲುಗಲ್ಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗೂ ಚಾಲನೆ: ಮನೆ- ಮನೆಗೆ ನೀರು ಯೋಜನೆಯ ಮಾದರಿಯಂತೆ ಹರ ಖೇತ ಕೊ ಪಾನಿ ಯೋಜನೆಗೂ ಅಂದರೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್ ವೈ- ಎಚ್ ಕೆಕೆಪಿ) 93 ಕೋ.ರೂ ವೆಚ್ಚದ 28 ಬ್ಯಾರೇಜ್ ಗಳ ನಿರ್ಮಾಣ ಕಾರ್ಯಕ್ಕೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅಡಿಗಲ್ಲು ನೆರವೇರಿಸುವರು.

ಕಲಬುರಗಿ- ಯಾದಗಿರಿ ಜಿಲ್ಲೆಯ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಹೊಲಕ್ಕೆ ನೀರು ಕಲ್ಪಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು,ಸೇಡಂ ತಾಲೂಕಿನ ಕಮಲಾವತಿ ನದಿಗೆ ದೇವನೂರ ಗ್ರಾಮದ ಬಳಿ ಕಾಲುವೆ‌ ಮೂಲಕ ಹೊಲ ಕ್ಕೆ ನೀರು ಹರಿಸುವ ಕಾಮಗಾರಿ ಗೆ ಹಾಗೂ ತೊಟ್ನಳ್ಳಿ- ಸಂಗಾವಿ ಗ್ರಾಮದ ನಡುವೆ ತಲಾ 7.32 ಕೋ.ರೂ ವೆಚ್ಚದ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿ ಕಾಲುವೆ ‌ಮೂಲಕ ಹೊಲಗಳಿಗೆ ನೀರುಣಿಸುವ, ಅದೇ ರೀತಿ ಕಾಚಾವರ ಗ್ರಾಮದ ಬಳಿ 2.58 ಕೋ.ರೂ ಮೊತ್ತದ ಕಾಮಗಾರಿ, ಚಂದಾಪುರ ಗ್ರಾಮ್ ಮಲ್ಲಿಕಾರ್ಜುನ ದೇವಾಲಯ ಹತ್ತಿರ 2.81 ಕೋ.ರೂ ಮೊತ್ತದ ಕಾಮಗಾರಿ ಸೇರಿ ಒಟ್ಟಾರೆ 28 ಕಾಮಗಾರಿಗಳಿಗೆ 138 ಕೋ.ರೂ ಮೊತ್ತದ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡುವರು.

ಹೊಲದ ಪಕ್ಕದಲ್ಲೇ ಇರುವ ಹಳ್ಳ ಕೊಳ್ಳಗಳು, ಬ್ಯಾರೇಜ್, ಕೆರೆ ಕಾಲುವೆಗಳ ಮೂಲಕ ಹೊಲ ಕ್ಕೆ ನೀರು ಹರಿಸಿ ಚಿಕ್ಕ ಪುಟ್ಟ ಬೆಳೆಗಳನ್ನು ಬೆಳೆಯುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ ಎಂದರು.

ಅದಲ್ಲದೇ ಸನ್ನತಿ ಬ್ಯಾರೇಜ್ ದಿಂದ ಸೇಡಂ ತಾಲೂಕಿನ 54 ಕೆರೆಗಳಿಗೆ ನೀರು ತುಂಬುವ 592 ಕೋ.ರೂ ವೆಚ್ಚದ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ. ‌ಈಯೋಜನೆಯೂ ಮುಂದಿನ ದಿನಗಳಲ್ಲಿಕಾರ್ಯಾನುಷ್ಡಾನಗೊಳ್ಳಲಿದೆ ಎಂದರು.

ಸೇಡಂದಲ್ಲಿ ಬಸವಣ್ಣನವರ, ಅಂಬಿಗರ ಚೌಡಯ್ಯ, ಸಂಗೋಳಿ ರಾಯಣ್ಣ, ಮಾದಾರ ಚನ್ನಯ್ಯ, ಶಿವಾಜಿ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆಯಲ್ಲದೇ ದೇವಾಲಯ ಅಭಿವೃದ್ಧಿ ಗಳಿಗಾಗಿ 20 ಕೋ.ರೂ ಖರ್ಚು ಮಾಡಲಾಗಿದೆ. ‌ಕೊರೊನಾ ನಡುವೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಒಟ್ಟಾರೆ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಶ್ವೇತ ಪತ್ರದ ಪುಸ್ತಕವೊಂದನ್ನು ಹೊರ ತರಲಾಗುತ್ತಿದೆ. ಇದನ್ನು ಎಲ್ಲರಿಗೂ ವಿತರಿಸಲಾಗುವುದು ಎಂದು ರಾಜಕುಮಾರ ಪಾಟೀಲ್ ತೇಲ್ಕೂರ ಇದೇ ಸಂದರ್ಭದಲ್ಲಿ ತಿಳಿಸಿದರು. ಕೆಕೆಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಹಾಗೂ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

tdy-3

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು

Gujarat: ಕ್ರಿಕೆಟ್‌ ಬಾಲ್‌ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ

Gujarat: ಕ್ರಿಕೆಟ್‌ ಬಾಲ್‌ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ

2-saidapura

Saidapur: ನಿಂತಿದ್ದ ಲಾರಿಗೆ ಕ್ರೂಷರ್ ಢಿಕ್ಕಿ; ಐದು ಮಂದಿ ಸ್ಥಳದಲ್ಲೇ ಮೃತ್ಯು

Indore: ಚಾಕ್ಲೇಟ್‌,ಆಟಿಕೆ ಕೇಳಿದ್ದಕ್ಕೆ 8 ವರ್ಷದ ಮಗಳನ್ನು ಭೀಕರವಾಗಿ ಹತ್ಯೆಗೈದ ಪಾಪಿ ತಂದೆ

Indore: ಚಾಕ್ಲೇಟ್‌,ಆಟಿಕೆ ಕೇಳಿದ್ದಕ್ಕೆ 8 ವರ್ಷದ ಮಗಳನ್ನು ಭೀಕರವಾಗಿ ಹತ್ಯೆಗೈದ ಪಾಪಿ ತಂದೆ

Institution Ranking: ಬೆಂಗಳೂರಿನ ಐಐಎಸ್‌ಸಿ ದ್ವಿತೀಯ

Institution Ranking: ಬೆಂಗಳೂರಿನ ಐಐಎಸ್‌ಸಿ ದ್ವಿತೀಯ

Odisha train tragedy: ನಿದ್ದೆ ಇಲ್ಲದ ಆ ಮೂರು ರಾತ್ರಿಗಳು!

Odisha train tragedy: ನಿದ್ದೆ ಇಲ್ಲದ ಆ ಮೂರು ರಾತ್ರಿಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Institution Ranking: ಬೆಂಗಳೂರಿನ ಐಐಎಸ್‌ಸಿ ದ್ವಿತೀಯ

Institution Ranking: ಬೆಂಗಳೂರಿನ ಐಐಎಸ್‌ಸಿ ದ್ವಿತೀಯ

ಚರ್ಚೆಗೆ ಗ್ರಾಸವಾದ ಎಚ್‌.ಡಿ. ಕುಮಾರಸ್ವಾಮಿ ದಿಲ್ಲಿ ಭೇಟಿ

ಚರ್ಚೆಗೆ ಗ್ರಾಸವಾದ ಎಚ್‌.ಡಿ. ಕುಮಾರಸ್ವಾಮಿ ದಿಲ್ಲಿ ಭೇಟಿ

ಹೈಕೋರ್ಟ್‌ ಮೆಟ್ಟಿಲೇರಿದ ಡಿ. ರೂಪಾ; ವಿಚಾರಣೆಯಿಂದ ಹಿಂದೆ ಸರಿದ ನ್ಯಾ| ನಾಗಪ್ರಸನ್ನ

High Court ಮೆಟ್ಟಿಲೇರಿದ ಡಿ. ರೂಪಾ; ವಿಚಾರಣೆಯಿಂದ ಹಿಂದೆ ಸರಿದ ನ್ಯಾ| ನಾಗಪ್ರಸನ್ನ

cowcow slaughter; ಗೋಹತ್ಯೆ ನಿಷೇಧ ಕಾಯ್ದೆ ಸಂಪುಟದಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯcow slaughter; ಗೋಹತ್ಯೆ ನಿಷೇಧ ಕಾಯ್ದೆ ಸಂಪುಟದಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

cow slaughter; ಗೋಹತ್ಯೆ ನಿಷೇಧ ಕಾಯ್ದೆ ಸಂಪುಟದಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

Result ; ಜೂ. 12 ಅಥವಾ 14ಕ್ಕೆ ಸಿಇಟಿ ಫ‌ಲಿತಾಂಶ?

Result ; ಜೂ. 12 ಅಥವಾ 14ಕ್ಕೆ ಸಿಇಟಿ ಫ‌ಲಿತಾಂಶ?

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

tdy-3

VIDEO: ಅಂತರ್ಜಾತಿ ವಿವಾಹವಾದ ಸಹೋದರಿಯನ್ನು ಗಂಡನ ಮನೆಯಿಂದ ಬಲವಂತವಾಗಿ ಎಳೆದೊಯ್ದ ಸಹೋದರರು

Gujarat: ಕ್ರಿಕೆಟ್‌ ಬಾಲ್‌ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ

Gujarat: ಕ್ರಿಕೆಟ್‌ ಬಾಲ್‌ ಮುಟ್ಟಿದ್ದಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿ, ಹಲ್ಲೆ

2-saidapura

Saidapur: ನಿಂತಿದ್ದ ಲಾರಿಗೆ ಕ್ರೂಷರ್ ಢಿಕ್ಕಿ; ಐದು ಮಂದಿ ಸ್ಥಳದಲ್ಲೇ ಮೃತ್ಯು

Indore: ಚಾಕ್ಲೇಟ್‌,ಆಟಿಕೆ ಕೇಳಿದ್ದಕ್ಕೆ 8 ವರ್ಷದ ಮಗಳನ್ನು ಭೀಕರವಾಗಿ ಹತ್ಯೆಗೈದ ಪಾಪಿ ತಂದೆ

Indore: ಚಾಕ್ಲೇಟ್‌,ಆಟಿಕೆ ಕೇಳಿದ್ದಕ್ಕೆ 8 ವರ್ಷದ ಮಗಳನ್ನು ಭೀಕರವಾಗಿ ಹತ್ಯೆಗೈದ ಪಾಪಿ ತಂದೆ