ಡ್ಯಾಂಗೆ ಬಿದ್ದು ವೃದ್ಧೆ ಸಾವು
Team Udayavani, Mar 14, 2023, 5:59 AM IST
ಕಾರ್ಕಳ: ಗುಂಡ್ಯಡ್ಕ ಕೌಡೂರು ನಿವಾಸಿ ವೃದ್ಧೆ ಬಡ್ದು ಹಾಂಡ್ತಿ (73) ಅವರು ಪಳ್ಳಿ ಗ್ರಾಮದ ಕಲ್ಲಪ್ಪು ಸೇತುವೆ ಬಳಿ ಇರುವ ನೀರಿನ ಡ್ಯಾಂಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ವೃದ್ಧೆಗೆ ಸರಿಯಾಗಿ ಕಣ್ಣು ಕಾಣದೆ ಇದ್ದು, ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಉಡುಪಿ ಖಾಸಗಿ ಆಸ್ಪತ್ರೆಯಿಂದ ಹೊರರೋಗಿಯಾಗಿ ಔಷಧ ಪಡೆಯುತ್ತಿದ್ದರು. ಅವರ ಶವ ಪಳ್ಳಿ ಗ್ರಾಮದ ಕಲ್ಲಪ್ಪು ಸೇತುವೆ ಬಳಿ ಇರುವ ನೀರಿನ ಡ್ಯಾಂನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಸೇತುವೆ ಬಳಿ ಇರುವ ನೀರಿನ ಡ್ಯಾಂಗೆ ಆಕಸ್ಮಿಕವಾಗಿ ಬಿದ್ದು ಅವರು ಮೃತಪಟ್ಟಿರುವುದಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.