ಅರಂತೋಡು: ಬಸ್ ಹೊಳೆಗೆ ಪಲ್ಟಿಯಾಗಿ ಇಬ್ಬರು ಗಂಭೀರ; ಹಲವರಿಗೆ ಗಾಯ
Team Udayavani, Mar 17, 2022, 1:11 PM IST
ಅರಂತೋಡು: ಸರಕಾರಿ ಬಸ್ ವೊಂದು ಭೀಕರ ಅಪಘಾತಕ್ಕೆ ತುತ್ತಾದ ಘಟನೆ ಸಂಪಾಜೆಯಲ್ಲಿ ಗುರುವಾರ ನಡೆದಿದೆ.
ಮಂಗಳೂರಿನಿಂದ ಮಡಿಕೇರಿ ಕಡೆಗೆ ಸಾಗುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಸಂಪಾಜೆಯ ಗಡಿಕ್ಕಲು ಸಮೀಪ ಮುಂದಿನ ಟಯರ್ ಸ್ಫೋಟಗೊಂಡು ಪಲ್ಟಿಯಾಗಿ ಹೊಳೆಗೆ ಬಿದ್ದಿದೆ.
ಇದನ್ನೂ ಓದಿ:ಹಿಜಾಬ್ ವಿಚಾರ: ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿ
ಘಟನೆಯಲ್ಲಿ ಹಲವು ಪ್ರಯಾಣಿಕರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ…