ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ‌ ನೀವು ?ಡಿಕೆಶಿಗೆ ಬಿಜೆಪಿ

ಮತಾಂತರ : ಬಿಜೆಪಿ  ಕಾಂಗ್ರೆಸ್ ಟ್ವೀಟ್ ವಾರ್

Team Udayavani, Dec 22, 2021, 11:42 AM IST

ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ‌ ನೀವು ?ಡಿಕೆಶಿಗೆ ಬಿಜೆಪಿ

ಬೆಂಗಳೂರು: ಮತಾಂತರ ನಿಷೇಧ ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣ ಘಟಕದ ಮಧ್ಯೆ ಭಾರಿ ಟ್ವೀಟ್ ವಾರ್ ಪ್ರಾರಂಭವಾಗಿದೆ. ಸದನದಲ್ಲಿ ಮಸೂದೆಯ ಪ್ರತಿಯನ್ನು ಹರಿದು ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಬುಧವಾರ(ಡಿಸೆಂಬರ್ 22) ಸರಣಿ ಟ್ವೀಟ್ ಮಾಡಿದೆ.

“ಮಾನ್ಯ ಡಿಕೆಶಿ ಅವರೇ ನೀವು ಸದನದಲ್ಲಿ ಮತಾಂತರ‌‌ ನಿಷೇಧಕ್ಕಾಗಿ ಮಂಡಿಸಿದ ವಿಧೇಯಕದ ಪ್ರತಿಯನ್ನು ಹರಿದು ಹಾಕಿದಿರಿ. ಇರಲಿ, ತೊಂದರೆ ಇಲ್ಲ.
ಏಕೆಂದರೆ ನಿಮಗಾಗಲಿ , ನಿಮ್ಮ ಅಧಿನಾಯಕ ರಾಹುಲ್ ಗಾಂಧಿಯವರಿಗಾಗಲಿ ಸಂಸದೀಯ ವ್ಯವಸ್ಥೆ ಹಾಗೂ ನಡಾವಳಿಯಲ್ಲಿ ನಂಬಿಕೆಯೇ ಇಲ್ಲ.
ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ‌ ನೀವು ?

ಡಿಕೆಶಿ ಅವರೇ ನಿಮಗೆ ಅನುಕೂಲಕರ ವಾತಾವರಣ ಇಲ್ಲ ಎಂದಾದರೆ ನೀವು ವಿಧೇಯಕದ ಪ್ರತಿಯಷ್ಟೇ ಅಲ್ಲ, ಸದನದ ನಿಯಮಾವಳಿಗಳನ್ನೇ ಹರಿದು ಬಿಸಾಡಬಲ್ಲಿರಿ ! ಏಕೆಂದರೆ ನಿಮಗೆ ಸದನ, ವ್ಯವಸ್ಥೆ, ನಿಯಮ ಇತ್ಯಾದಿಗಳ ಮೇಲೆ ಗೌರವವೇ ಇಲ್ಲ. ಹೇಗಾದರೂ ಮಾಡಿ ಸೋನಿಯಾ ಗಾಂಧಿ ಮೆಚ್ಚುಗೆ ಗಳಿಸಬೇಕೆಂಬುದಷ್ಟೇ ನಿಮ್ಮ ಧ್ಯೇಯ ಡಿಕೆಶಿ ಅವರೇ ಕನಕಪುರದ ಬೆಟ್ಟದ ಮೇಲೆ ಏಸುಕ್ರಿಸ್ತನ ಏಕಶಿಲಾ ವಿಗ್ರಹ ಸ್ಥಾಪನೆ ಮಾಡಲು ಹೊರಟವರಲ್ಲವೇ ನೀವು ?
ಯಾರ ಓಲೈಕೆಗೆ ನೀವು ಈ ಕೆಲಸಕ್ಕೆ ಮುಂದಾಗಿದ್ದಿರಿ ? ಸೋನಿಯಾ ಗಾಂಧಿ ಮೆಚ್ಚುಗೆ ಗಳಿಸುವುದಕ್ಕಲ್ಲವೇ ? ನಿಮಗೆ ಸ್ವಧರ್ಮ, ರಾಷ್ಟ್ರಧರ್ಮದ ಮೇಲೆ ಕಿಂಚಿತ್ತಾದರೂ ನಂಬಿಕೆ ಇದೆಯೇ ? ಎಂದು ಟ್ವೀಟ್ ಮಾಡಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತಿರುಗೇಟು ನೀಡಿದೆ. “ಕೊಟ್ಟ ಕುದುರೆ ಏರಲಾರದೆ, ಸುಮ್ಮನೇ ಮೈಪರಚುಕೊಳ್ಳುವವರು, ವೀರರೂ ಅಲ್ಲ, ಧೀರರೂ ಅಲ್ಲ. ಈ ಮಾತು ಕೇಂದ್ರ – ರಾಜ್ಯದ ಬಿಜೆಪಿ ಸರ್ಕಾರಗಳು ಈಗಿರುವ ಕಾನೂನನ್ನು ಸಮರ್ಪಕವಾಗಿ ಬಳಸಿಲ್ಲ ಎಂಬುದಕ್ಕೆ ಸಾಕ್ಷಿ ಬಲವಂತದ ಮತಾಂತರಕ್ಕೊಳಪಟ್ಟವರು ಎಷ್ಟು ದೂರು ನೀಡಿದ್ದಾರೆ? ಸಮೀಕ್ಷೆ ಆಗಿದೆಯೇ? ವರದಿ ಇದೆಯೇ? ಎಂಬುದನ್ನ ಸದನದ ಮುಂದಿಟ್ಟು ಮಾತಾಡಲಿ.

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುತ್ತದೆ ಹಿಂದೂ ಸಂಸ್ಕೃತಿ. ಅದಕ್ಕೆ ಬೇಕಿರುವುದು ಪ್ರೀತಿ, ನಂಬಿಕೆಯೇ ಹೊರತು, ಜಾತಿ, ಧರ್ಮ ಎನ್ನುವ ಲೆಕ್ಕಾಚಾರಗಳಲ್ಲ. ರಾಜ್ಯ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ  ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ಮದುವೆಯಾಗಲು ಹೆಣ್ಣು   ಗಂಡಿನ ಸಮ್ಮತಿಯಲ್ಲ ಬದಲಿಗೆ ಸರ್ಕಾರದ ಸಮ್ಮತಿ ಬೇಕಿದೆ.

ಮತಾಂತರ ನಿಷೇಧ ಕಾಯ್ದೆಯು ಒಂದು ಕಪ್ಪು ಚುಕ್ಕೆಯಂತಿದೆ. ಬಾಬಾಸಾಹೇಬ್‌ ಅಂಬೇಡ್ಕರ್‌ ಹಾಗೂ ಸಂವಿಧಾನವನ್ನು ಈ ಕಾಯ್ದೆಯು ಮೀರಿದೆ. ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾ ಸಂಸ್ಥೆಗಳು ಬಲವಂತದ ಮತಾಂತರ ಮಾಡುತ್ತಿವೆ ಎನ್ನುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಸಚಿವರ ಮಕ್ಕಳು ಅಂತಹ ಸಂಸ್ಥೆಗಳಲ್ಲೇ ಓದುತ್ತಿಲ್ಲವೇ ” ಎಂದು ಪ್ರಶ್ನೆ ಮಾಡಿದೆ.

ಟಾಪ್ ನ್ಯೂಸ್

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.