ಡೈಲಿ ಡೋಸ್‌: ಇದು ಚುನಾವಣೆ ಸಮಯ… ಕಾಲರ್‌ ಹಿಡಿದರೂ ಖುಷಿಯಲ್ಲಿ…

ಚುನಾವಣೆ ಸಮಯದಲ್ಲಿ ಮಾತಿಗಿಂತ ಅದನ್ನಾಡುವ ಧಾಟಿಗೇ ಹೆಚ್ಚು ಅರ್ಥ

Team Udayavani, Mar 18, 2023, 7:50 AM IST

poli

ಚುನಾವಣೆ ಹತ್ತಿರ ಬಂತೆ‌ಂದರೆ, ಮೊದಲಿಗೆ ಹಾಲಿ ಶಾಸಕರ ಹಾಗೂ ಆ ಪಕ್ಷದ ಬೆಂಬಲಿಗರು ದುರ್ಬೀನು ಹಿಡಿದುಕೊಂಡು “ಎಲ್ಲಿ ಸಮಸ್ಯೆ ಇದೆ? ಯಾವೂರಿಗೆ ನೀರು ಬರುವುದಿಲ್ಲ? ಎಲ್ಲಿ ರಸ್ತೆ ಸರಿ ಇಲ್ಲ” ಎಂದು ಮೂಲೆ ಮೂಲೆಯನ್ನೂ ಬಿಡದೆ ಹುಡುಕುತ್ತಾರೆ. ಆಯಾ ಏರಿಯಾದ (ವಾರ್ಡಿನ) ಪಾರ್ಟಿ ಮುಖ್ಯಸ್ಥನನ್ನೂ ಜತೆಗೇ ಕರೆದುಕೊಂಡು “ಎಲ್ಲಪ್ಪ ಸಮಸ್ಯೆ ಇದೆ, ಇದ್ದರೆ ಹೇಳಿಬಿಡು, ನಾಳೆ ಸಾಹೇಬ್ರು ಬರುವಾಗ ಹೆಚ್ಚು ಕಡಿಮೆ ಆದರೆ ನಿನ್ನನ್ನೇ ಫಿಟ್‌ ಮಾಡೋದು” ಎಂದು ಹೆದರಿಸುತ್ತಾರೆ.

ಇಲ್ಲಿಗೆ ಮುಗಿಯದು. “ಏನ್‌ ತಾಯಿ, ಏರಿಯಾದಲ್ಲಿ ಏನೂ ಸಮಸ್ಯೆ ಇಲ್ವಲ್ಲ?” ಎಂದು ಕೆಲವರ ಮನೆ ಬಾಗಿಲು ಬಡಿದು ಬಡಿದು ಕೇಳುತ್ತಾರೆ. ಅವರು ಇಲ್ಲಪ್ಪ ಎಂದರೆ, “ಕುಡಿಯುವ ನೀರು ಬರ್ತಾ ಇದೆಯಾ? ಚರಂಡಿ ಪ್ರಾಬ್ಲಿಮ್‌ ಇದೆಯಾ? ಬೀದಿ ಲೈಟು ಓಕೆನಾ” ಎಂದು ರೊಬೋಟ್‌ನಂತೆ ಕೇಳುತ್ತಾರೆ. ಎಲ್ಲ ಮುಗಿದೂ ಸಾಹೇಬ್ರಿಗೆ “ಹವಾಮಾನ ವರದಿ” ಸಲ್ಲಿಕೆಯಾಗುತ್ತದೆ.

ಸೈಕ್ಲೋನ್‌, ಗುಡುಗು, ಸಿಡಿಲು ಸಾಧ್ಯತೆ ಇಲ್ಲ ಎಂದಾದರೆ, ಸಾಹೇಬ್ರು ರಸ್ತೆಗಿಳಿಯುತ್ತಾರೆ. “ನಿಮ್ಮ ಆಶೀರ್ವಾದ ಬೇಕೇಬೇಕು” ಎಂದು ಕೈ ಮುಗಿಯುತ್ತಾ, ಮಧ್ಯೆ ಮಧ್ಯೆ “ಸಹವಾಸ ಬೇಡಪ್ಪಾ” ಎಂದು ನಿಂತವರನ್ನೂ ಹೆಸರಿಡಿದು “ರಾಜು ಅವ್ರೇ ಚೆನ್ನಾಗಿದ್ದೀರಾ?” ಎಂದು ಕಾಲರ್‌ ಹಿಡಿದು ಕುಶಲ ವಿಚಾರಿಸುವಂತೆ ಮಾತನಾಡಿಸಿಕೊಂಡು ಸಾಗುತ್ತಾರೆ.

“ಅಲ್ಲಯ್ಯ, ಐದು ವರ್ಷದಲ್ಲಿ ಪ್ರಾಬ್ಲಿಮ್‌ ಹಿಡಿದು 50 ಬಾರಿ ಹೋದಾಗಲೂ ಹೆಸರೇ ನೆನಪಾಗಿರಲಿಲ್ಲ” ಎಂದು ರಾಜು ಅಂಥವರು ಪೇಚಿಗೆ ಸಿಲುಕುತ್ತಾರೆ.
ಕರ್ಣನಿಗೆ ಸಂಕಷ್ಟ ಕಾಲದಲ್ಲಿ ಕಲಿತದ್ದು ಮರೆತು ಹೋಗಲಿ ಎನ್ನೋ ಶಾಪ ಇದ್ದರೆ, ನಮ್ಮ ಸಾಹೇಬ್ರಿಗೆ ಕಷ್ಟ ಕಾಲದಲ್ಲಿ ಮರೆ ತದ್ದೂ ನೆನಪಾಗಲಿ ಎನ್ನುವ ವರ ಇದೆ”ಎನ್ನುತ್ತಾ ಬೆಂಬಲಿಗ ಮುಗುಳ್ನಕ್ಕು ಮೆರವಣಿಗೆಯನ್ನು ಹಿಂಬಾಲಿಸುತ್ತಾನೆ !

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.