ಕೋವಿಡ್ ಮಾರ್ಗಸೂಚಿಯೊಂದಿಗೆ ಆರ್ಚರಿ ಜೋಡಿ ಮದುವೆಗೆ ಸಜ್ಜು
Team Udayavani, Jun 27, 2020, 10:10 PM IST
ರಾಂಚಿ: ಭಾರತದ ಖ್ಯಾತ ಬಿಲ್ಗಾರರಾದ ಅತನು ದಾಸ್ ಮತ್ತು ದೀಪಿಕಾ ಕುಮಾರಿ ಮಂಗಳವಾರ ರಾಂಚಿಯ ಮೊರಾಬಾದಿಯಲ್ಲಿ ಹಸೆಮಣೆ ಏರಲಿದ್ದಾರೆ. ಈ ವೇಳೆ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸಲು ನಿರ್ಧರಿಸಿದ್ದಾರೆ. ಇದನ್ನವರು ಪುಟ್ಟ ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದ್ದಾರೆ.
“ಮದುವೆಗೆ ಕೇವಲ 60 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ದೊಡ್ಡ ಹಾಲ್ ಕಾದಿರಿಸಲಾಗಿದೆ. ಇದರಿಂದ ಸಾಮಾಜಿಕ ಅಂತರವನ್ನು ಪಾಲಿಸಲು ಸುಲಭವಾಗುತ್ತದೆ. ಬಂದವರಿಗೆಲ್ಲ ಮಾಸ್ಕ್, ಸ್ಯಾನಿಟೈಸರ್ ಹಂಚಲಾಗುವುದು…’ ಎಂದು ದೀಪಿಕಾ ಕುಮಾರಿ ತಮ್ಮ ಮದುವೆ ಸಿದ್ಧತೆ ಬಗ್ಗೆ ರಾಂಚಿಯಿಂದ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದರು.
ಉಳಿದವರಿಗೆ ಮಾದರಿ
“ಮದುವೆ ಮಂಟಪದಲ್ಲಿ ನಾವು ಏನನ್ನೂ ಮುಟ್ಟುವುದಿಲ್ಲ. ನಾವು ಸುರಕ್ಷಾ ನಿಯಮವನ್ನು ಪಾಲಿಸಿ ಉಳಿದವರಿಗೂ ಮಾದರಿಯಾಗಬೇಕು. 60 ಮಂದಿ ಅತಿಥಿಗಳಿಗೆ ಎರಡು ಪ್ರತ್ಯೇಕ ಸಮಯವನ್ನು ನಿಗದಿಗೊಳಿಸಲಾಗಿದೆ. 30 ಮಂದಿಗೆ ಸಂಜೆ 5.30ರಿಂದ 7 ಗಂಟೆ ಸಮಯವನ್ನು ಸೂಚಿಸಲಾಗಿದೆ. ಉಳಿದ 30 ಮಂದಿ ಅತಿಥಿಗಳು ಅನಂತರ ಆಗಮಿಸುವರು. ಈ ಸಂದರ್ಭದಲ್ಲಿ ನಮ್ಮ ಮನೆಯವರ್ಯಾರೂ ಉಪಸ್ಥಿತರಿರುವುದಿಲ್ಲ’ ಎಂದು ದೀಪಿಕಾ ಹೇಳಿದರು.
ಭಾರತೀಯ ಆರ್ಚರಿ ಅಸೋಸಿಯೇಶನ್ನ ನೂತನ ಅಧ್ಯಕ್ಷ, ಜಾರ್ಖಂಡ್ನ ಮಾಜಿ ಮುಖ್ಯ ಮಂತ್ರಿ ಅರ್ಜುನ್ ಮುಂಡಾ ಈ ಸಮಾರಂಭಕ್ಕೆ ಆಗ ಮಿಸುವ ಪ್ರಮುಖ ಅತಿಥಿಗಳಲ್ಲೊಬ್ಬರು. ದೀಪಿಕಾ ಕುಮಾರಿ ಅವರ ಆರ್ಚರಿ ಏಳಿಗೆಯಲ್ಲಿ ಮುಂಡಾ ಪಾತ್ರ ಮಹತ್ವದ್ದಾಗಿದೆ. ಅತನು ದಾಸ್-ದೀಪಿಕಾ ಕುಮಾರಿ ಅವರ ನಿಶ್ಚಿತಾರ್ಥ 2018ರಲ್ಲೇ ನಡೆದಿತ್ತು. ಮೊನ್ನೆ ಜೂ. 10ರಂದು ಮದುವೆ ದಿನಾಂಕವನ್ನು ಅಂತಿಮಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು