ಬೆಳ್ತಂಗಡಿ: ಪ.ಪಂ. ಚರಂಡಿ ವಾಸನೆ ಸಹಿಸಲು ಬೇಕಿದೆ ಮಾಸ್ಕ್!
Team Udayavani, Mar 25, 2021, 5:00 AM IST
ಬೆಳ್ತಂಗಡಿ: ಕೊರೊನಾ ಸೋಂಕು ತಡೆಯಲು ಮಾಸ್ಕ್ ಬಳಸಿ, ಸ್ವತ್ಛತೆಗೆ ಆದ್ಯತೆ ನೀಡಿ ಎಂದು ದಿನ ಬೆಳಗ್ಗೆ ಧ್ವನಿವರ್ಧಕ ಮೊಳಗಿಸುತ್ತಿರುವ ಪ.ಪಂ., ಕಚೇರಿ ಮುಂಭಾಗದ ಚರಂಡಿಯಲ್ಲಿ ಕೊಳಚೆ ನೀರು ಗಬ್ಬು ನಾರುತ್ತಿರುವುದರಿಂದ ಸಾರ್ವಜನಿಕರಿಗೆ ಮೂಗು ಮುಚ್ಚಿಕೊಳ್ಳಲು ಮಾಸ್ಕ್ ವಿತರಿಸುವುದು ಅನಿವಾರ್ಯ ಎಂಬಂತಾಗಿದೆ.
ಪಟ್ಟಣ ಪಂಚಾಯತ್, ಮಿನಿವಿಧಾನ, ಪ್ರವಾಸಿ ಬಂಗಲೆ, ಕೋರ್ಟ್, ತಾ.ಪಂ. ಸೇರಿದಂತೆ ಅನೇಕ ಸರಕಾರಿ ಕಚೇರಿ ತೆರಳುವವರು, ಶಾಸಕರು, ಸಚಿವರು, ಗಣ್ಯವ್ಯಕ್ತಿಗಳು ಸಂಚರಿಸುವ, ಬೆಳ್ತಂಗಡಿ ಕೇಂದ್ರ ಭಾಗದಲ್ಲಿರುವ ಮೂರು ಮಾರ್ಗದ ಬಳಿ ತೆರೆದ ಚರಂಡಿಯೊಂದು ನಗರದ ಸೌಂದರ್ಯ ಕೆಡಿಸುತ್ತಿದೆ. ಮೂರು ವರ್ಷಗಳಿಂದ ಚರಂಡಿ ಸ್ವತ್ಛತೆಗೆ ಪ.ಪಂ. ಲಕ್ಷಾಂತರ ಅನುದಾನ ಮೀಸಲಿ ರಿಸುತ್ತಿದ್ದರೂ ಈವರೆಗೆ ಮೂರು ಮಾರ್ಗದ ಮುಂಭಾಗದ ಚರಂಡಿ ದುಸ್ಥಿತಿಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ.
ಸಂತೆಕಟ್ಟೆಯಿಂದ ಬಸ್ ನಿಲ್ದಾಣದವರೆಗೆ, ಮೂರು ಮಾರ್ಗದಿಂದ ಮಿನಿವಿಧಾನ ಸೌಧಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಚರಂಡಿ ತುಂಬಿ ನಡೆದಾಡಲು ಸಾಧ್ಯವಿಲ್ಲದಷ್ಟು ದುರ್ನಾತ ಬೀರುತ್ತಿದೆ. ಸಮೀಪದ ಕಚೇರಿ, ಅಂಗಡಿ, ಮುಂಗಟ್ಟು, ಮನೆಯ ಮಂದಿ ಮೂಗಿಮುಚ್ಚಿ ಕುಳಿತುಕೊಳ್ಳುವ ಸ್ಥಿತಿ ಇದೆ. ಈ ಕುರಿತು ಹಲವು ಬಾರಿ ವರದಿ ಪ್ರಕಟಗೊಂಡರೂ ಸಬಂಧಪಟ್ಟವರು ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಬಳಿ ಈ ಕುರಿತು ಪ್ರಸ್ತಾಪಿಸಿದರೆ ಚರಂಡಿಗೆ ಮನೆ, ಹೋಟೆಲ್ ತ್ಯಾಜ್ಯ ಬಿಡದಂತೆ ಸೂಚಿಸಲಾಗಿದೆ, ನೋಟಿಸ್ ನೀಡಲಾಗಿದೆ.
ಎಂಬ ಸಿದ್ಧ ಉತ್ತರವಷ್ಟೆ ಬರುತ್ತಿದೆ. ಮಾಸ್ಕ್ ದಂಡ ವಿಧಿಸುವ ಮುನ್ನ ಪ.ಪಂ. ಅವ್ಯವಸ್ಥೆಗೆ ದಂಡ ವಿಧಿಸುವ ಅನಿವಾರ್ಯತೆಯಿದೆ.
ಟೌನ್ ಪ್ಲಾನಿಂಗ್ ಕೊರತೆ
ಕೊಳಚೆ ನೀರಿನ ಚರಂಡಿಗಳ ಸಮರ್ಪಕ ನಿರ್ವಹಣೆಗೆ ಯೋಜನೆ ರೂಪಿಸಬೇಕಿದೆ. ನಗರದ ಹೃದಯ ಭಾಗದಲ್ಲಿ ಇರುವ ಚರಂಡಿಗಳು ಅವೈಜ್ಞಾನಿಕವಾಗಿವೆ.
ಈಗಾಗಲೇ ಟೌನ್ಪ್ಲಾನಿಂಗ್ ಎಂಜಿನಿಯರಿಂಗ್ ಸರ್ವೇ ನಡೆಸಿದ್ದರೂ ಕಾಮಗಾರಿಗಳು ವೇಗ ಪಡೆಯಬೇಕಿದೆ.
10 ದಿನಗಳೊಳಗಾಗಿ ಕ್ರಮ
ನಗರದ ನೀರು, ಚರಂಡಿ ನೀರು ಹಾಗೂ ಹೊಟೇಲ್ ತ್ಯಾಜ್ಯ ಪ್ಯೂರಿಫೈ ಮಾಡುವ ಸಲುವಾಗಿ ದೇವನಹಳ್ಳಿ ಮಾದರಿಯಲ್ಲಿ ಘಟಕ ನಿರ್ಮಿಸಲು ಕೃಷಿ ಇಲಾಖೆಯ ಸಮೀಪ 1 ಎಕ್ರೆ ಕಾಯ್ದೆರಿಸಿ ಸರಕಾರಕ್ಕೆ ಬರೆಯಲಾಗಿದೆ. ಮೂರು ಮಾರ್ಗದ ಬಳಿ ಚರಂಡಿ ಸ್ವತ್ಛಗೊಳಿಸಿ ಸ್ಲ್ಯಾಬ್ ಅಳವಡಿಸಲು 2.30 ಲಕ್ಷ ರೂ.ನ ಟೆಂಡರ್ ಕರೆಯಲಾಗಿದ್ದು, 10 ದಿನಗಳ ಒಳಗಾಗಿ ಅಳವಡಿಸಲಾಗುತ್ತದೆ.
-ಮಹಾವೀರ ಆರಿಗ, ಪಂ.ಪಂ. ಎಂಜಿನಿಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ